Site icon Vistara News

Karnataka Election 2023: ಎಣ್ಣೆ ಪ್ರಿಯರಿಗೆ ಶಾಕ್‌; ಕರ್ನಾಟಕದಲ್ಲಿ ಮೇ 8 ರಿಂದ ಮದ್ಯ ಮಾರಾಟ ಬಂದ್‌

ಎಣ್ಣೆ ಪ್ರಿಯರಿಗೆ ಶಾಕ್‌; ಕರ್ನಾಟಕದಲ್ಲಿ ಮೇ 8 ರಿಂದ ಮದ್ಯ ಮಾರಾಟ ಬಂದ್‌

ಎಣ್ಣೆ ಪ್ರಿಯರಿಗೆ ಶಾಕ್‌; ಕರ್ನಾಟಕದಲ್ಲಿ ಮೇ 8 ರಿಂದ ಮದ್ಯ ಮಾರಾಟ ಬಂದ್‌

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ‌ (Karnataka Election 2023) ಹಿನ್ನೆಲೆ ಮದ್ಯ ಪ್ರಿಯರಿಗೆ ಶಾಕಿಂಗ್‌ ಸುದ್ದಿ ಇದೆ. ಮತದಾನದಂದು ಹಾಗೂ ಮತ ಎಣಿಕೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಮುಂಜಾಗ್ರತಾ ಕ್ರಮವಾಗಿ ಮದ್ಯ ಮಾರಾಟವನ್ನು ನಿಷೇಧ (Liquor Bandh) ಮಾಡಿ ಮದ್ಯ ಮಾರಾಟ ರಹಿತ ದಿನಗಳೆಂದು (Dry day) ಘೋಷಣೆ ಮಾಡಲಾಗಿದೆ.

ಬೆಂಗಳೂರು ಜಿಲ್ಲಾಧಿಕಾರಿಯ ಆದೇಶ ಪ್ರತಿ

ಮೇ 10ರಂದು ಮತದಾನ ನಡೆಯಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಮೇ 8ರ ಸಂಜೆ 5 ಗಂಟೆಯಿಂದ ಮೇ 11ರ ಬೆಳಗ್ಗೆ 6 ಗಂಟೆವರೆಗೆ ಮದ್ಯ ಮಾರಾಟವನ್ನು ರಾಜ್ಯದಲ್ಲಿ ನಿಷೇಧ ಮಾಡಲಾಗಿದೆ. ಮುಂದುವರಿದು ಮತ ಎಣಿಕೆಯ ದಿನದಂದು ಮೇ 13ರ ಬೆಳಗ್ಗೆ 6 ಗಂಟೆಯಿಂದ 14ರ ಬೆಳಗ್ಗೆ 6 ಗಂಟೆವರೆಗೆ ಮದ್ಯ ಮಾರಾಟಕ್ಕೆ ಅವಕಾಶ ಇರುವುದಿಲ್ಲ.

ಇನ್ನು ನೆರೆಯ ಕೇರಳ, ಆಂಧ್ರಪ್ರದೇಶ, ಗೋವಾ, ತಮಿಳುನಾಡಿಗೂ ಈಗಾಗಲೇ ಡ್ರೈ ಡೇಗೆ ಸೂಚನೆ ನೀಡಲಾಗಿದೆ. ಎಲ್ಲ ಬಾರ್ ಮತ್ತು ರೆಸ್ಟೋರೆಂಟ್, ರಿಟೇಲ್ ಮಾರಾಟ ಮಳಿಗೆಗಳ ಮೇಲೆ ನಿಗಾವಹಿಸಲಾಗುತ್ತಿದ್ದು,
ಈಗಾಗಲೇ ಎಲ್ಲ ಬಾರ್ ಮತ್ತು ರೆಸ್ಟೋರೆಂಟ್, ಪಬ್‌ಗಳಿಗೆ, ಫೈವ್‌ ಸ್ಟಾರ್ ಹೋಟೆಲ್‌ನಲ್ಲೂ‌ ಮದ್ಯ ಮಾರಾಟ ನಿಷೇಧಕ್ಕೆ ಸೂಚನೆ ನೀಡಲಾಗಿದೆ. ನಿಯಮ‌ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ನೀಡಲಾಗಿದೆ.

ಲೇಟೆಸ್ಟ್‌ ಇಂಟೆಲಿಜೆನ್ಸ್‌ ರಿಪೋರ್ಟ್‌ ಪ್ರಕಾರ ಬಿಜೆಪಿ ಎಷ್ಟು ಸೀಟು ಗೆಲ್ಲಲಿದೆ?

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಎಂಟು ದಿನ ಬಾಕಿ ಇರುವಾಗಲೇ ಕಣದ ಇಂಟೆಲಿಜೆನ್ಸ್‌ ರಿಪೋರ್ಟ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಡೆದುಕೊಂಡಿದ್ದು, ವರದಿಯ ಅಂಶಗಳು ಅವರ ಮುಖದಲ್ಲಿ ನಗು ಅರಳಿಸುವಂತಿವೆ ಎಂದು ಹೇಳಲಾಗಿದೆ.

ವಿಧಾನಸಭೆಯ 224 ಕ್ಷೇತ್ರಗಳ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ರಿಪೋರ್ಟ್ ಪಡೆದುಕೊಂಡಿದ್ದಾರೆ. ಎರಡು ತಿಂಗಳ ಹಿಂದೆ ಕೊಟ್ಟ ರಿಪೋರ್ಟ್‌ನಲ್ಲಿ ಬಿಜೆಪಿ 75-85 ಸ್ಥಾನ ಗೆಲ್ಲಬಹುದು ಎಂದು ಇಂಟಲಿಜೆನ್ಸ್ ವರದಿ ಹೇಳಿತ್ತು. ಆದರೆ, ಸೋಮವಾರ ಸಿಕ್ಕ ರಿಪೋರ್ಟ್‌ನಲ್ಲಿ ಬಿಜೆಪಿ 115ರಿಂದ 125 ಸ್ಥಾನ ಗೆಲ್ಲುತ್ತದೆ ಎಂದು ತಿಳಿಸಲಾಗಿರುವುದರಿಂದ ಸಿಎಂ ಫುಲ್ ಖುಷಿಯಾಗಿದ್ದಾರಂತೆ.

ಬಿಜೆಪಿ ಸ್ಪಷ್ಟ ಬಹುಮತ ಪಡೆಯಬಹುದು ಎಂದು ಮೊದಲ ಬಾರಿಗೆ ಇಂಟಲಿಜೆನ್ಸ್ ವರದಿ ನೀಡಿದೆ. ಪಕ್ಷ 115 ಸ್ಥಾನಗಳ ಗಡಿ ದಾಟಲು ನೆರವಾಗುತ್ತಿರುವುದು ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪ, ಅಮಿತ್ ಶಾ, ಬೊಮ್ಮಾಯಿ, ಜೆಪಿ ನಡ್ಡಾ ಅವರ ನಿರಂತರ ಪ್ರವಾಸಗಳು, ಸಮಾವೇಶ, ರೋಡ್‌ ಶೋಗಳು. ರಾಜ್ಯದಲ್ಲಿ ನರೇಂದ್ರ ಮೋದಿ ವರ್ಚಸ್ಸು ಸಾಕಷ್ಟು ಕೆಲಸ ಮಾಡಿದೆ ಎನ್ನಲಾಗಿದೆ.

ರಾಜ್ಯ ಸರ್ಕಾರ ತೆಗೆದುಕೊಂಡ ಮೀಸಲಾತಿ ಕುರಿತ ನಿರ್ಧಾರ ಬಿಜೆಪಿಗೆ ಧನಾತ್ಮಕ ಪ್ರಭಾವ ಬೀರುವಂತಿದೆ. ಟಿಕೆಟ್ ಹಂಚಿಕೆಯಲ್ಲಿ ಯುವಕರಿಗೆ ಆದ್ಯತೆ ಕೊಟ್ಟಿರುವುದು ಯುವ ಜನತೆಯಲ್ಲಿ ಹೆಚ್ಚಿನ ಆಸಕ್ತಿ ಹುಟ್ಟಿಸಿದೆ. ಕರಾವಳಿ ಭಾಗದಲ್ಲಿರುವ ಬಿಜೆಪಿ ಭದ್ರನೆಲೆಗಳಲ್ಲಿ ಒಂದೆರಡು ಕ್ಷೇತ್ರಗಳಲ್ಲಿ ಬಂಡಾಯದಿಂದಾಗಿ ತುಸು ಸಮಸ್ಯೆಯಾಗುವಂತಿದೆ.

ಇದನ್ನೂ ಓದಿ: Congress Manifesto : ದ್ವೇಷ ಬಿತ್ತಿದರೆ ಬಜರಂಗ ದಳ ನಿಷೇಧ; ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಎಚ್ಚರಿಕೆ

ಹಳೇ ಮೈಸೂರು ಭಾಗದಲ್ಲಿ ಈ ಬಾರಿ ಅಚ್ಚರಿ ಫಲಿತಾಂಶ ಉಂಟಾಗಬಹುದು. ಮಧ್ಯ ಕರ್ನಾಟಕದಲ್ಲಿ ಲಿಂಗಾಯತ ಮತಗಳಲ್ಲಿ ವಿಭಜನೆಯಾಗುವುದು ಸ್ವಲ್ಪ ಸಮಸ್ಯೆ ಉಂಟು ಮಾಡಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

Exit mobile version