Site icon Vistara News

Karnataka Election: ಜೆಡಿಎಸ್ ಜತೆ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ: ಸಿಎಂ ಬಸವರಾಜ ಬೊಮ್ಮಾಯಿ

Kuvempu Name For Shivamogga Airport, Keladi Shivappa Nayaka Name For Railway Station

ಬಸವರಾಜ ಬೊಮ್ಮಾಯಿ

ಬೆಂಗಳೂರು: ಜೆಡಿಎಸ್​ಗೆ ತನ್ನ ಆಟ ಆಡಲು ಅವಕಾಶ ನೀಡಬಾರದು ಎನ್ನುವುದು ನಮ್ಮ ಉದ್ದೇಶ.‌ 2023 ಚುನಾವಣೆಯಲ್ಲಿ (Karnataka Election) 130 ಸ್ಥಾನ ಗೆಲ್ಲುವ ವಿಶ್ವಾಸ ಇದೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಜತೆ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸಿಎನ್‌ಎನ್ ನ್ಯೂಸ್-18 ಹಮ್ಮಿಕೊಂಡಿದ್ದ ಟೌನ್ ಹಾಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2004ರಿಂದ ಬಿಜೆಪಿ ನಿರಂತರ ಬೆಳವಣಿಗೆಯಾಗುತ್ತ ಬಂದಿದೆ. ನಾವು ಸ್ಪಷ್ಟ ಬಹುಮತ ಪಡೆದಿಲ್ಲ. ಆದರೆ ಬಹುಮತಕ್ಕೆ ಹತ್ತಿರ ಬಂದಿದ್ದೇವೆ. ಬಿಜೆಪಿ ಸಾಮಾಜಿಕ ಕಳಕಳಿ ಇರುವ ಪಕ್ಷ. ಚುನಾವಣೆ ಆಟದಲ್ಲಿ ಸೋಲದೇ ಇರಲು ಆಡುತ್ತಾರೆ. ನಾನು ಗೆಲ್ಲುವುದಕ್ಕಾಗಿ ಆಡುವುದರಲ್ಲಿ ನಂಬಿಕೆ‌ ಇಟ್ಟವನು.‌ ಜನರು ಎಷ್ಟೇ ಬಡವರಿರಬಹುದು ಅವರಿಗೆ ಅಗತ್ಯ ಸಹಕಾರ ನೀಡಬೇಕು. ಆದರೆ, ಎಲ್ಲವನ್ನು ಉಚಿತವಾಗಿ ನೀಡುತ್ತೇನೆ ಎನ್ನುವುದನ್ನು ಕರ್ನಾಟಕದ ಸ್ವಾಭಿಮಾನಿ ಜನರು ನಂಬುವುದಿಲ್ಲ ಎಂದರು.

ಇದನ್ನೂ ಓದಿ | Namma Clinic: ಚುನಾವಣೆ ಹತ್ತಿರದಲ್ಲಿರುವಂತೆ ಮತ ಸೆಳೆಯಲು ಮುಂದಾದ ಸರ್ಕಾರ: ಬೆಂಗಳೂರಿನಲ್ಲಿ 108 ʼನಮ್ಮ ಕ್ಲಿನಿಕ್‌ʼ ಆರಂಭ

ಕಾಂಗ್ರೆಸ್ ಸರ್ಕಾರದ ವಿರುದ್ಧ 60 ಪ್ರಕರಣ

ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳಿಗೆ ಮಿಸಲಾತಿ ನೀಡುವ ವಿಚಾರ ನ್ಯಾಯಾಲಯದಲ್ಲಿದೆ.‌ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಿಲ್ಲ. ಆದರೆ, ರಾಜ್ಯದಲ್ಲಿ ಒಕ್ಕಲಿಗ ಹಾಗೂ ಸಮುದಾಯಕ್ಕೆ ಪ್ರತ್ಯೇಕ‌ ಪ್ರವರ್ಗದಲ್ಲಿ ಅವಕಾಶ ನೀಡುವ ಮೂಲಕ ಆ ಸಮುದಾಯಗಳಲ್ಲಿ ಅವಕಾಶ ವಂಚಿತರಿಗೆ ಅವಕಾಶ ಕಲ್ಪಿಸುವ ಪ್ರಯತ್ನ ನಮ್ಮದು. ಲಿಂಗಾಯತ ಸಮುದಾಯ ಅತ್ಯಂತ ಪ್ರಬುದ್ಧರಿದ್ದಾರೆ. ಪ್ರತಿ ಹತ್ತು ವರ್ಷಕ್ಕೊಮ್ಮೆ ಮೀಸಲಾತಿ ಪರಿಷ್ಕರಣೆ ಆಗಬೇಕೆಂಬ ನಿಯಮ ಇದೆ. ಅದನ್ನು ಯಾರೂ ಮಾಡಿರಲಿಲ್ಲ.‌ ನಾವು ಮಾಡುತ್ತಿದ್ದೇವೆ ಎಂದರು.

40 ಪರ್ಸೆಂಟ್ ಕಮಿಷನ್ ಬಗ್ಗೆ ಮಾತನಾಡುವ ಕಾಂಗ್ರೆಸ್‌ನವರು ಒಂದೇ ಒಂದು ದಾಖಲೆ ಸಮೇತ ಮಾಹಿತಿ ನೀಡಲಿಲ್ಲ. ಅವರ ಪರವಾಗಿ ವಾದ ಮಾಡುವ ಗುತ್ತಿಗೆದಾರರ ಸಂಘದವರು ದಾಖಲೆ ನೀಡಲಿಲ್ಲ. ಅವರ ವಿರುದ್ದ ನಮ್ಮ ಸಚಿವರು ಮಾನನಷ್ಟ ಮೊಕದ್ದಮೆ ಹೂಡಿದ್ದರು. ಕಾಂಗ್ರೆಸ್ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿ ಹಾಕಿದವರು. ಅವರ ಸರ್ಕಾರದ ವಿರುದ್ಧ 60ಕ್ಕೂ ಹೆಚ್ಚು ಪ್ರಕರಣಗಳಿವೆ ಎಂದರು.

ಇದನ್ನೂ ಓದಿ | ಸಂತೋಷ್‌ ವಿರುದ್ಧ ಅಸಂತೋಷ, ಬಿಎಸ್‌ವೈ ಬಗ್ಗೆ ಸಿಹಿ ಮಾತು: ಕುತೂಹಲ ಕೆರಳಿಸಿದ ಎಚ್‌.ಡಿ. ಕುಮಾರಸ್ವಾಮಿ ಮಾತು

ಭಾರತ್ ಜೋಡೊ ಯಾತ್ರೆಯಿಂದ ಕಾಂಗ್ರೆಸ್‌ಗೆ ರಾಜಕೀಯ ಲಾಭವಿಲ್ಲ

ಸಿದ್ದರಾಮಯ್ಯ ಅವರ ಆರೋಪಕ್ಕೆ ಪರಮೇಶ್ವರ ಉತ್ತರ ಕೊಡಬೇಕು. ಅವರ ಅವಧಿಯಲ್ಲಿ ಪರಮೇಶ್ವರ್ ಹಾಗೂ ಖರ್ಗೆ ಅವರಿಗೆ ಯಾವ ರೀತಿಯ ಅನ್ಯಾಯವಾಗಿದೆ ಅಂತ ಹೇಳಬೇಕು. ಸಿದ್ದರಾಮಯ್ಯ ಯಡಿಯೂರಪ್ಪ ಅವರಿಗೆ ಋಣಿಯಾಗಿರಬೇಕು. ಅವರ ಭಾವಚಿತ್ರ ಇಟ್ಟುಕೊಳ್ಳಬೇಕು. ಅವರು ಕೆಜೆಪಿ ಸ್ಥಾಪಿಸದಿದ್ದರೆ ಸಿದ್ದರಾಮಯ್ಯ ಸಿಎಂ ಆಗುತ್ತಿರಲಿಲ್ಲ. ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆಯಿಂದ ಕಾಂಗ್ರೆಸ್‌ಗೆ ಯಾವುದೇ ರಾಜಕೀಯ ಲಾಭವಾಗುವುದಿಲ್ಲ. ವೈಯಕ್ತಿಕ ಟೀಕೆಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ವೃದ್ಧಿಯಾಗಿದೆ.
ನಮ್ಮ ಪ್ರಧಾನಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಟ್ಡದಲ್ಲಿ ಉನ್ನತ ಮಟ್ಟದ ನಾಯಕರಾಗಿದ್ದಾರೆ ಎಂದರು.

Exit mobile version