Site icon Vistara News

Karnataka elections 2023: ಗುರುಗುಂಟಾ ಗ್ರಾಮ ಪಂಚಾಯಿತಿಯ 29 ಸದಸ್ಯರು ಬಿಜೆಪಿ ಸೇರ್ಪಡೆ

Karnataka elections 2023 29 members of Gurugunta gram panchayat join BJP

#image_title

ಲಿಂಗಸುಗೂರು: ತಾಲೂಕಿನ ಗುರುಗುಂಟಾ ಗ್ರಾಮ ಪಂಚಾಯಿತಿಯ 29 ಜನ ಸದಸ್ಯರು ಬಿಜೆಪಿಗೆ ಸೇರ್ಪಡೆಯಾದರು. ಗುರುಗುಂಟಾ ಸಂಸ್ಥಾನದ ರಾಜರಾದ ರಾಜಾ ಸೋಮನಾಥ್ ನಾಯಕರ ನೇತೃತ್ವದಲ್ಲಿ 32 ಗ್ರಾ.ಪಂ ಸದಸ್ಯರ ಪೈಕಿ 29 ಮಂದಿ ಜೆಡಿಎಸ್, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು.

ಈ ವೇಳೆ ಮಾತನಾಡಿದ ರಾಜಾ ಸೋಮನಾಥ ನಾಯಕ, ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್, ಕ್ಷೇತ್ರದಲ್ಲಿ ಎರಡು ಅವಧಿಗೆ ಶಾಸಕರಾಗಿ ಮಾಡಿದ ಕಾರ್ಯಗಳನ್ನು ಮೆಚ್ಚಿ ಅವರನ್ನು ಮತ್ತೊಮ್ಮೆ ಶಾಸಕರನ್ನಾಗಿ ಆಯ್ಕೆ ಮಾಡುವ ಅಭಿಲಾಷೆಯಿಂದ ಗ್ರಾ.ಪಂ ಸದಸ್ಯರು ಅವರ ಬೆಂಬಲಕ್ಕೆ ನಿಂತಿದ್ದಾರೆ. ವಜ್ಜಲ್ ಅವರ ಗೆಲವು ನಿಶ್ಚಿತವಾಗಿದೆ ಎಂದರು.

ಇದನ್ನೂ ಓದಿ:2nd PUC Result 2023: ವಿಜ್ಞಾನ ವಿಭಾಗದಲ್ಲಿ ಬೆಂಗಳೂರು ವಿದ್ಯಾರ್ಥಿಗಳದ್ದೇ ಪಾರಮ್ಯ; ಕೋಲಾರದ ಕೌಶಿಕ್‌, ಬೆಂಗಳೂರಿನ ಸುರಭಿ ರಾಜ್ಯಕ್ಕೇ ಟಾಪರ್‌

ಕಣ್ಮರೆಯಾದ ಅಭಿವೃದ್ಧಿ

ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್ ಮಾತನಾಡಿ, ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶ ಸದೃಢವಾಗಿ ಪ್ರಗತಿ ಕಾಣುತ್ತಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿ ಇದ್ದರೆ ಅಭಿವೃದ್ಧಿಯಾಗಲು ಸಾಧ್ಯವಾಗಿದೆ. ಕ್ಷೇತ್ರ ಕಳೆದ ಐದು ವರ್ಷಗಳ ಅಭಿವೃದ್ಧಿಗಳೇ ಇಲ್ಲದಾಗಿದೆ. ಕ್ಷೇತ್ರದ ಶಾಸಕರು ಗುತ್ತಿಗೆದಾರರಿಂದ ಕಮಿಷನ್ ಪಡೆಯುವಲ್ಲಿ ನಿರತರಾಗಿದ್ದರಿಂದ ಅಭಿವೃದ್ಧಿ ಮೆರೆತಿದ್ದಾರೆ ಎಂದು ಆರೋಪಿಸಿದ ಅವರು, ಕ್ಷೇತ್ರದಲ್ಲಿ ಬದಲಾವಣೆಗಾಗಿ ಬಿಜೆಪಿ ಮತ ನೀಡಿ ನನ್ನನ್ನು ಮತ್ತೊಮ್ಮೆ ಶಾಸಕರನ್ನಾಗಿ ಆಯ್ಕೆ ಮಾಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರಾದ ನಾಗಪ್ಪ ವಜ್ಜಲ್, ಗಜೇಂದ್ರ ನಾಯಕ್, ನಂದೀಶ್ ನಾಯಕ್,ಅಯ್ಯಪ್ಪ ಮಾಳೂರು*, ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Exit mobile version