Site icon Vistara News

Karnataka Live News: ವಿಷ ಜಲ ದುರಂತಕ್ಕೆ 6ನೇ ಬಲಿ; ತಾಯಿಯ ಗರ್ಭದೊಳಗೇ ಪ್ರಾಣಬಿಟ್ಟ 8 ತಿಂಗಳ ಭ್ರೂಣಶಿಶು

karnataka live news

ಬೆಂಗಳೂರು: ಚಿತ್ರದುರ್ಗದ ಕಾವಾಡಿಗರ ಹಟ್ಟಿಯಲ್ಲಿ ನಡೆದ ವಿಷ ಜಲ ದುರಂತದಲ್ಲಿ ಆರನೇ ಜೀವ ಬಲಿಯಾಗಿದೆ. ತಾಯಿಯ ಹೊಟ್ಟೆಯೊಳಗಿದ್ದ ಮಗುವೇ ಪ್ರಾಣ ಕಳೆದುಕೊಂಡಿದೆ. ಇದೂ ಸೇರಿದಂತೆ ರಾಜ್ಯದ ಇಂದಿನ ಇನ್ನಷ್ಟು ಪ್ರಮುಖ ಸುದ್ದಿ ಬೆಳವಣಿಗೆಗಳಿಗಾಗಿ (Karnataka Live News) ಇಲ್ಲಿ ಗಮನಿಸಿ.

Deepa S

ರಾಜ್ಯದಲ್ಲಿಂದು ಎಲ್ಲೆಲ್ಲಿ ಗುಡುಗು ಸಹಿತ ಮಳೆ?

ಹವಾಮಾನ ಇಲಾಖೆಯು ಮತ್ತೆ ಮಳೆ (rain news) ಮುನ್ಸೂಚನೆಯನ್ನು ನೀಡಿದೆ. ನೈರುತ್ಯ ಮುಂಗಾರು ದುರ್ಬಲಗೊಂಡಿದ್ದರೂ ಕರಾವಳಿಯ ಹಲವು ಕಡೆ ಹಾಗೂ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗುವ (weather report) ಸಾಧ್ಯತೆ ಇದೆ.

Weather report: ರಾಜ್ಯದಲ್ಲಿಂದು ಎಲ್ಲೆಲ್ಲಿ ಗುಡುಗು ಸಹಿತ ಮಳೆ?
Harish Kera

ವಿದೇಶ ಪ್ರವಾಸದಿಂದ ಮರಳಿದ ಕುಮಾರಸ್ವಾಮಿ

ಬೆಂಗಳೂರು: ಕುಟುಂಬ ಸಮೇತ ಯುರೋಪ್‌ಗೆ ಪ್ರವಾಸಕ್ಕೆ ಹೋಗಿದ್ದ ಜೆಡಿಎಸ್‌ ಮುಖಂಡ ಎಚ್‌.ಡಿ ಕುಮಾರಸ್ವಾಮಿ ಬೆಂಗಳೂರಿಗೆ ಮರಳಿದ್ದಾರೆ. ಏರ್‌ಪೋರ್ಟ್‌ನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಎಚ್‌ಡಿಕೆ, ಸರ್ಕಾರ ಪತನಕ್ಕೆ ಸಿಂಗಾಪುರದಲ್ಲಿ ಷಡ್ಯಂತ್ರ ಮಾಡಲಾಗ್ತಿದೆ ಎಂದಿದ್ದ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

Exit mobile version