Site icon Vistara News

Karnataka live news: ರಾಜ್ಯದ ಬೆಳವಣಿಗೆಗಳ ಕ್ಷಣಕ್ಷಣದ ಸುದ್ದಿಗಳು: ಸರ್ಕಾರದ ವಿರುದ್ಧ ಬಿಜೆಪಿ ಧರಣಿಗೆ ಸಜ್ಜು

Karnataka Live News Updates

ಬೆಂಗಳೂರು: ರಾಜ್ಯದ ರಾಜಕೀಯ ಹಾಗೂ ಮಹತ್ವದ ಸುದ್ದಿ ಬೆಳವಣಿಗೆಗಳಿಗಾಗಿ (Karnataka live news) ಇಲ್ಲಿ ಗಮನಿಸಿ.

Deepa S

ಕಾಲೇಜು ಹಾಸ್ಟೆಲ್‌ ರೂಮ್‌ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರದ ನಾಗರಾರ್ಜುನ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ನೇಣಿಗೆ (Suicide Case) ಕೊರಳೊಡ್ಡಿದ್ದಾಳೆ. ಪ್ರೀತಿ (21) ಮೃತ ವಿದ್ಯಾರ್ಥಿನಿ. ನಂದಿಗಿರಿಧಾಮ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Suicide Case : ಕಾಲೇಜು ಹಾಸ್ಟೆಲ್‌ ರೂಮ್‌ನಲ್ಲಿ ನೇತಾಡುತ್ತಿತ್ತು ವಿದ್ಯಾರ್ಥಿನಿ ಶವ; ಆತ್ಮಹತ್ಯೆಯೋ, ಕೊಲೆಯೋ?
Deepa S

ಬಸ್ಸಿನಡಿ ಸಿಲುಕಿದ ಸವಾರರು, ಬಸ್ಸನ್ನೇ ಪಲ್ಟಿ ಮಾಡಿ ರಕ್ಷಿಸಿದರು

ಯಾದಗಿರಿಯ ಶಹಾಪುರ‌ ತಾಲೂಕಿನ ಬಾಣತಿಹಾಳ್ ಸಮೀಪ ಬೈಕ್‌ವೊಂದು ಬಸ್‌ಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ ಸಮೇತ ಸವಾರರು ಬಸ್‌ನಡಿ (Road Accident) ಸಿಲುಕಿದ್ದರು. ಆ ಅಪಘಾತದ ದೃಶ್ಯವನ್ನು ಕಂಡವರೆಲ್ಲರೂ ಸ್ಪಾಟ್‌ ಡೆತ್‌ ಎಂತಲೇ ಅಂದುಕೊಂಡಿದ್ದರು. ಆದರೆ ಸವಾರರು ಪವಾಡ ಸದೃಶ್ಯ ಎಂಬಂತೆ ಪ್ರಾಣಾಪಾಯದಿಂದ ಪಾರಾಗಿದ್ದರು.

Road Accident : ಹೈ ಸ್ಪೀಡ್‌ ಎಡವಟ್ಟು; ಬಸ್ಸಿನಡಿ ಸಿಲುಕಿದ ಸವಾರರು, ಬಸ್ಸನ್ನೇ ಪಲ್ಟಿ ಮಾಡಿ ರಕ್ಷಿಸಿದರು
Ramaswamy Hulakodu

Education News : ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕ ಮರುಪಾವತಿ ನೀತಿ ಜಾರಿಗೆ ಯುಜಿಸಿ ಸೂಚನೆ

ನವ ದೆಹಲಿ: 2023-24 ಶೈಕ್ಷಣಿಕ ಸಾಲಿನಲ್ಲಿಯೇ ಶುಲ್ಕ ಮರುಪಾವತಿ ನೀತಿಯ ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಉನ್ನತ ಶಿಕ್ಷಣ ಸಂಸ್ಥೆ, ವಿಶ್ವವಿದ್ಯಾಲಯಗಳಿಗೆ ಯುಜಿಸಿ ನಿರ್ದೇಶನ ನೀಡಿದೆ. ಪ್ರವೇಶವನ್ನು ರದ್ದುಪಡಿಸಿದ ನಂತರ ಅಥವಾ ಪ್ರವಶಾತಿಯಿಂದ ವಿದ್ಯಾರ್ಥಿಗಳು ಹಿಂದೆ ಸರಿದ ನಂತರ ಉನ್ನತ ಶಿಕ್ಷಣ ಸಂಸ್ಥೆಗಳು ಶುಲ್ಕವನ್ನು ಮರುಪಾವತಿ ಮಾಡದಿರುವ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಅನೇಕ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಆಯೋಗವು ಈ ಸೂಚನೆ ನೀಡಿದೆ.

Deepa S

ಜು.5ರಂದು ಕರಾವಳಿಯಲ್ಲಿ ಭಾರಿ ಮಳೆ ಎಚ್ಚರಿಕೆ

ರಾಜ್ಯಾದ್ಯಂತ ನೈರುತ್ಯ ಮುಂಗಾರು (Southwest Monsoon) ಚುರುಕು ಪಡೆದುಕೊಂಡಿದ್ದು, ಹಲವೆಡೆ ವ್ಯಾಪಕ (Weather report) ಮಳೆಯಾಗುತ್ತಿದೆ. ಈಗಾಗಲೇ ಕರಾವಳಿಯಲ್ಲಿ ಮಳೆ (Rain News) ಆರ್ಭಟ ಮುಂದುವರಿದಿದ್ದು, ನಾಳೆ (ಜು.5) ಅತಿ ಹೆಚ್ಚು ಮಳೆಯಾಗಲಿದ್ದು, ರೆಡ್‌ ಅಲರ್ಟ್‌ (Red alert) ಘೋಷಣೆ ಮಾಡಲಾಗಿದೆ.

Weather Report : ನಾಳೆ ಕರಾವಳಿಯಲ್ಲಿ ಮಳೆ ನರ್ತನ; ದಕ್ಷಿಣ ಒಳನಾಡಲ್ಲಿ ಅಬ್ಬರಿಸಲಿದ್ದಾನೆ ವರುಣ
Deepa S

ಕಳ್ಳಿ ಎಂದ ಕೋಚ್‌ ಪತ್ನಿ ವಿರುದ್ಧ ಬಿಂದುರಾಣಿ ದೂರು ದಾಖಲು

ಅಥ್ಲೀಟ್‌ ಬಿಂದುರಾಣಿಗೆ (Athlete BinduRan) ಕಳ್ಳಿ ಎಂದು ಚಪ್ಪಲಿ ತೋರಿಸಿ ಕೋಚ್‌ ಪತ್ನಿ ಅವಾಜ್‌ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಆರ್‌ನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಕೋಚ್‌ ಯತೀಶ್‌ ಹಾಗೂ ಅವರ ಪತ್ನಿ ಶ್ವೇತಾ ವಿರುದ್ಧ ದೂರು ದಾಖಲಾಗಿದೆ.

Athlete BinduRani : ಠಾಣೆ ಮೆಟ್ಟಿಲೇರಿದ ಜಡೆ ಜಗಳ; ಕಳ್ಳಿ ಎಂದ ಕೋಚ್‌ ಪತ್ನಿ ವಿರುದ್ಧ ಬಿಂದುರಾಣಿ ದೂರು
Exit mobile version