Site icon Vistara News

Karnataka live news: ಹಲೋ ಸಚಿವರೇ: ರೈತರಿಗೆ ಗುಡ್‌ ನ್ಯೂಸ್!‌ ಬೆಳಗ್ಗೆಯೂ ಸಿಗಲಿದೆ ತ್ರಿ‌ ಫೇಸ್ ವಿದ್ಯುತ್‌: ಚಲುವರಾಯಸ್ವಾಮಿ

chaluvarayaswamy in vistara news Hello minister

ಬೆಂಗಳೂರು: ರೈತರಿಗೆ ಹಗಲು ಹೊತ್ತಿನಲ್ಲಿಯೇ ತ್ರಿ ಫೇಸ್‌ ವಿದ್ಯುತ್‌ ಕೊಡುವ ಚಿಂತನೆ ಇದೆ ಎಂದು ಕೃಷಿ ಸಚಿವ ಎನ್.‌ ಚಲುವರಾಯಸ್ವಾಮಿ ತಿಳಿಸಿದ್ದಾರೆ. ಇದೂ ಸೇರಿದಂತೆ ಇನ್ನಿತರ ಮಹತ್ವದ ರಾಜ್ಯದ ಸುದ್ದಿ ಬೆಳವಣಿಗೆಗಳನ್ನು (Karnataka live news) ಇಲ್ಲಿ ಗಮನಿಸಿ.

Ramesha Doddapura

Vistara Top 10 News: ಬೆಳಗ್ಗೆಯೂ ಕೃಷಿ ಬಾವಿಗೆ ತ್ರಿ ಫೇಸ್‌ನಿಂದ, ಬಂಗಾಳದಲ್ಲಿ ಟಿಎಂಸಿ ಮುನ್ನಡೆವರೆಗಿನ ಪ್ರಮುಖ ಸುದ್ದಿಗಳಿವು
Deepa S

ಕರಾವಳಿಯಲ್ಲಿ ಮತ್ತೆ ಮಳೆ ಅಬ್ಬರ

ಮುಂದಿನ 24 ಗಂಟೆಯಲ್ಲಿ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗುವ (Rain News) ಸಾಧ್ಯತೆ ಇದೆ. ರಾಜ್ಯಾದ್ಯಂತ ಒಂದೆರಡು ಕಡೆಗಳಲ್ಲಿ ಗುಡುಗು, ಮಿಂಚಿನ ಮಳೆಯಾಗುವ (Weather report) ಎಚ್ಚರಿಕೆಯನ್ನು ನೀಡಲಾಗಿದೆ.

Weather Report : ನಾಳೆಯಿಂದ ಕರಾವಳಿಯಲ್ಲಿ ಮತ್ತೆ ಜೋರು ಮಳೆ
Adarsha Anche

ಹಲೋ ಸಚಿವರೇ: ರೈತರಿಗೆ ಗುಡ್‌ ನ್ಯೂಸ್!‌ ಬೆಳಗ್ಗೆಯೂ ಸಿಗಲಿದೆ ತ್ರಿ‌ ಫೇಸ್ ವಿದ್ಯುತ್‌: ಚಲುವರಾಯಸ್ವಾಮಿ

ವಿಸ್ತಾರ ನ್ಯೂಸ್‌ ಮಂಗಳವಾರ (ಜುಲೈ 11) ಆಯೋಜಿಸಿದ್ದ “ಹಲೋ ಸಚಿವರೇ” ನೇರ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಸಚಿವ ಎನ್.‌ ಚಲುವರಾಯಸ್ವಾಮಿ (N Chaluvarayaswamy) ಭಾಗಿಯಾಗಿದ್ದರು. ಈ ವೇಳೆ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿದ ಅವರು ಸೂಕ್ತ ಪರಿಹಾರವನ್ನು ಸಹ ಒದಗಿಸಿ ಕೊಡುವ ಭರವಸೆಯನ್ನು ನೀಡಿದ್ದಾರೆ.

ಹಲೋ ಸಚಿವರೇ: ರೈತರಿಗೆ ಗುಡ್‌ ನ್ಯೂಸ್!‌ ಬೆಳಗ್ಗೆಯೂ ಸಿಗಲಿದೆ ತ್ರಿ‌ ಫೇಸ್ ವಿದ್ಯುತ್‌: ಚಲುವರಾಯಸ್ವಾಮಿ

Deepa S

ಬೆಂಗಳೂರಲ್ಲಿ ಮತ್ತೊಂದು ಜೋಡಿ ಕೊಲೆ

ಬೆಂಗಳೂರಿನ ಅಮೃತಹಳ್ಳಿಯ ಪಂಪಾ ಬಡಾವಣೆಯಲ್ಲಿ ಜೋಡಿ ಕೊಲೆಯಾಗಿದೆ. ಏರೊನಿಕ್ಸ್ ಇಂಟರ್‌ನೆಟ್‌ ಕಂಪೆನಿಯ ಮಾಜಿ ಉದ್ಯೋಗಿಯೊಬ್ಬ ಎಂಡಿ ಮತ್ತು ಸಿಇಒರನ್ನೇ ಬರ್ಬರವಾಗಿ (Double Murder) ಹತ್ಯೆಗೈದಿದ್ದಾನೆ. ಕಂಪೆನಿಯ ಎಂಡಿ ಫಣೀಂದ್ರ ಸುಬ್ರಮಣ್ಯ, ಸಿಇಒ ವಿನು ಕುಮಾರ್ ಹತ್ಯೆಯಾದ ದುರ್ದೈವಿಗಳು. ಮಾಜಿ ಉದ್ಯೋಗಿ ಫೆಲಿಕ್ಸ್ ಹಂತಕನಾಗಿದ್ದಾನೆ.

Double Murder : ಕಚೇರಿಗೆ ನುಗ್ಗಿ ಎಂಡಿ, ಸಿಇಒರನ್ನೇ ಕೊಂದು ಹಾಕಿದ ಮಾಜಿ ಉದ್ಯೋಗಿ!
Deepa S

ಪಾಗಲ್ ಪ್ರೇಮಿಯ ಹುಚ್ಚಾಟ

ರಾಮನಗರದ ಕನ್ನಹಳ್ಳಿ ಗ್ರಾಮದಲ್ಲಿರುವ ವೀರಭದ್ರಸ್ವಾಮಿ ದೇವಾಲಯ ಬಳಿ ನಿಲ್ಲಿಸಿದ್ದ ಬೈಕ್‌ಗಳಿಗೆ ಕಿಡಿಗೇಡಿಗಳು ರಾತ್ರೋರಾತ್ರಿ ಬೆಂಕಿ ಹಚ್ಚಿದ್ದರು. ಇದರ ಅಸಲಿ ವಿಚಾರ ತಿಳಿಯದೆ ಗ್ರಾಮಸ್ಥರು ಏಕಾಏಕಿ ಇದು ರಾಜಕೀಯ ಗಲಾಟೆಯೇ ಎಂದಿದ್ದರು. ಇನ್ನೇನು ಊರಿಗೆ ಊರೇ ರಣರಂಗ ಆಯಿತು ಎನ್ನುವಾಗಲೇ ಖಾಕಿ ಪಡೆ ಎಂಟ್ರಿ ಕೊಟ್ಟು ಪರಿಸ್ಥಿತಿಯನ್ನು ತಿಳಿಗೊಳಿಸಿತ್ತು. ಆದರೆ ಪೊಲೀಸರ ತನಿಖೆಯಿಂದ ಹೊರ ಬಂದ ವಿಚಾರ ಕೇಳಿ ಗ್ರಾಮಸ್ಥರೇ ಪೆಚ್ಚಾಗಿದ್ದಾರೆ.

Love Failure : ಪಾಗಲ್ ಪ್ರೇಮಿಯ ಹುಚ್ಚಾಟ; ಊರಿಗೆ ಹಬ್ಬಿದ ದ್ವೇಷದ ಜ್ವಾಲೆ
Exit mobile version