ಬೆಂಗಳೂರು: ರಾಜ್ಯದ ಹವಾಮಾನ ಮುನ್ಸೂಚನೆ ಹೊರಬಿದ್ದಿದ್ದು, ಕರಾವಳಿಯಲ್ಲಿ ನಾಳೆ ಜೋರಾಗಿ ಮಳೆ ಸುರಿಯಲಿದೆ. ದಕ್ಷಿಣ ಒಳನಾಡಿನಲ್ಲಿ ಮಳೆ ಇರುವುದಿಲ್ಲ. ಇನ್ನಿತರ ರಾಜ್ಯದ ಮಹತ್ವದ ಸುದ್ದಿ ಬೆಳವಣಿಗೆಗಳಿಗಾಗಿ (Karnataka live news) ಇಲ್ಲಿ ಗಮನಿಸಿ.
ಟರ್ಫ್ ಕ್ಲಬ್ ಸ್ಥಳಾಂತರಕ್ಕೆ ಶಿಫಾರಸು ರೆಡಿ
ಬೆಂಗಳೂರು: ನಗರದ ಮಧ್ಯಭಾಗದಲ್ಲಿ ಇರುವ ಟರ್ಫ್ ಕ್ಲಬ್ನ ಸ್ಥಳಾಂತರಕ್ಕೆ ವಿಧಾನ ಪರಿಷತ್ತಿನ ವಿಶೇಷ ಸದನ ಸಮಿತಿ ಶಿಫಾರಸು ಮಾಡಿದೆ. ಪರಿಷತ್ ಸದಸ್ಯ ರವಿಕುಮಾರ್ ನೇತೃತ್ವದಲ್ಲಿ ಬಿಜೆಪಿ ಕಾಲದಲ್ಲಿ ರಚನೆಯಾಗಿದ್ದ ಸದನ ಸಮಿತಿ ಸರ್ಕಾರಕ್ಕೆ ವರದಿ ಕೊಡಲು ಇನ್ನೆರಡು ತಿಂಗಳು ಸಮಯ ಕೇಳಿದ್ದು, ನಗರದಿಂದ ಹೊರ ವಲಯದ ಚಿಕ್ಕಜಾಲ ಬಳಿ ಶಿಫ್ಟ್ ಮಾಡಲು ಶಿಫಾರಸು ಸಿದ್ಧಪಡಿಸಿದೆ.
ಅಕ್ರಮ ಅಕ್ಕಿ ದಾಸ್ತಾನು, ಮಾರಾಟದ ಮೇಲೆ ಸರ್ಕಾರದ ಹದ್ದಿನ ಕಣ್ಣು
ಬೆಂಗಳೂರು: ಅಕ್ರಮ ದಾಸ್ತಾನು ಮಾಡುವ ನ್ಯಾಯಬೆಲೆ ಅಂಗಡಿಗಳ ಮೇಲೆ ನಿಗಾ ಇಡಲು ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ವಿಚಕ್ಷಣ ದಳ ರಚನೆಗೆ ಆಹಾರ ಇಲಾಖೆ ಸಿದ್ಧವಾಗಿದೆ. ಆ ಮೂಲಕ ಅಕ್ಕಿ ದುರ್ಬಳಕೆಗೆ ಕಡಿವಾಣ ಹಾಕಲು ದಳ ನೇಮಕಾತಿಗೆ ಮುಂದಾ ಇಲಾಖೆ ಮುಂದಾಗಿದೆ.