Site icon Vistara News

Karnataka live news: ಬಿಜೆಪಿ ಲೆಟರ್‌ಹೆಡ್‌ನಲ್ಲಿ ರಾಜ್ಯಪಾಲರಿಗೆ ದೂರು; ಮೊದಲ ಸಹಿಯೇ ಕುಮಾರಸ್ವಾಮಿ, ಸೇರೇಬಿಟ್ರಾ ಹಾಗಿದ್ರೆ?

Karnataka Live News Updates Today

ಬೆಂಗಳೂರು: ಬಿಜೆಪಿಯ ಲೆಟರ್‌ ಹೆಡ್‌ನಲ್ಲಿ ರಾಜ್ಯಪಾಲರಿಗೆ ನೀಡಲಾಗಿರುವ ದೂರಿನಲ್ಲಿ ಮೊದಲ ಸಹಿ ಇರುವುದೇ ಜೆಡಿಎಸ್‌ ಶಾಸಕಾಂಗ ಪಕ್ಷ ನಾಯಕ ಎಚ್.ಡಿ ಕುಮಾರಸ್ವಾಮಿ ಅವರದ್ದು. ಹಾಗಿದ್ದರೆ ಕುಮಾರಸ್ವಾಮಿ ಅವರು ಬಿಜೆಪಿ ಸೇರಿಯೇ ಬಿಟ್ರಾ ಎಂಬ ಕುತೂಹಕಾರಿ ಚರ್ಚೆ ನಡೆಯುತ್ತಿದೆ.

Deepa S

ಜು.22ರಂದು 1 ರೂಪಾಯಿ ಕೊಡಿ ರಾತ್ರಿ ಪೂರ್ತಿ ತಾಳಮದ್ದಲೆ ನೋಡಿ

ಕೃಷ್ಣ ಸಂಧಾನ ಹಾಗೂ ಕರ್ಣಾರ್ಜುನ ಯಕ್ಷಗಾನ ತಾಳಮದ್ದಲೆ ಪ್ರಸಂಗಗಳು ಜು.22ರ ರಾತ್ರಿ 10 ರಿಂದ ಯಕ್ಷ ಸಂಕ್ರಾಂತಿ ಹೆಸರಿನಲ್ಲಿ ನಡೆಯಲಿವೆ. ಬಣ್ಣ ಬಣ್ಣದ ವೇಷಗಳಿಲ್ಲದೆ, ಮಾತಿನ ವೈಖರಿಯ ಮೂಲಕವೇ ಕಥಾನಕವೊಂದನ್ನು ಕಟ್ಟಿಕೊಡುವ ತಾಳಮದ್ದಲೆ (Talamaddale) ಎಂಬ ಯಕ್ಷಗಾನದ ರಂಗ ಪ್ರಕಾರವೊಂದು (Yakshagana Talamaddale) ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ (Ravindra kalakshetra) ಇದೇ ಮೊದಲ ಬಾರಿಗೆ (First time) ರಾತ್ರಿ ಪೂರ್ತಿ ನಡೆಯಲಿದೆ.

Yakshagana Talamaddale : ಜು.22ರಂದು 1 ರೂಪಾಯಿ ಕೊಡಿ; ರಾತ್ರಿ ಪೂರ್ತಿ ತಾಳಮದ್ದಲೆ ನೋಡಿ
Deepa S

ಇನ್ನೈದು ದಿನ ಮಳೆಮಯ, ಬೆಂಗಳೂರಲ್ಲಿ ಮಾಯ

ಮುಂದಿನ 5 ದಿನಗಳು ರಾಜ್ಯಾದ್ಯಂತ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ (Weather report) ಸಾಧ್ಯತೆ ಇದೆ. ಕರಾವಳಿಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ (Rain News) ಸಾಧ್ಯತೆ ಇದ್ದರೆ ಮಲೆನಾಡಲ್ಲಿ ವ್ಯಾಪಕ ಮಳೆಯಾಗಲಿದೆ. ಉತ್ತರ ಒಳನಾಡಿನಲ್ಲಿ ನೈರುತ್ಯ ಮುಂಗಾರು (Southwest monsoon) ಚುರುಕುಗೊಂಡಿದ್ದು, ಹಲವು ಜಿಲ್ಲೆಗಳಲ್ಲಿ ವರುಣ ಅಬ್ಬರಿಸಲಿದ್ದಾನೆ.

Weather Report : ಇನ್ನೈದು ದಿನ ಮಳೆಮಯ; ಬೆಂಗಳೂರಲ್ಲಿ ಮಾಯ
Deepa S

ಟ್ರಾಫಿಕ್‌ ಪೊಲೀಸ್‌ ಮೇಲೆ ಅಟ್ಯಾಕ್‌

ನೋ ಪಾರ್ಕಿಂಗ್‌ನಲ್ಲಿ (No parking) ಕಾರು ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಟ್ರಾಫಿಕ್‌ ಪೊಲೀಸ್‌ (Traffic Police) ಮೇಲೆ ದಾಳಿ ಮಾಡಿ ಹಲ್ಲೆ (Assault case) ನಡೆಸಿದ್ದಾರೆ. ಬೆಂಗಳೂರಿನ ಕಮ್ಮನಹಳ್ಳಿ ಬಳಿ ಈ ಘಟನೆ ನಡೆದಿದ್ದು, ಬಾಣಸವಾಡಿ (Banaswadi traffic police) ಟ್ರಾಫಿಕ್‌ ಪೊಲೀಸ್‌ ಉಮೇಶ್‌ ಹಲ್ಲೆಗೊಳಗಾದವರು.

Assault case : No Parking ಕಿರಿಕ್‌; ಟ್ರಾಫಿಕ್‌ ಪೊಲೀಸ್‌ ಮೇಲೆ ಅಟ್ಯಾಕ್‌
Deepa S

ಪತ್ನಿ ಶೀಲ ಶಂಕಿಸಿ ಕಲ್ಲಿನಿಂದ ತಲೆ ಜಜ್ಜಿ ಕೊಂದ

ಹಾಸನದ ಹೊಳೆನರಸೀಪುರ ತಾಲೂಕಿನ ಎಸ್. ಅಂಕನಹಳ್ಳಿ ಬಳಿಯ ಅರಣ್ಯ ಪ್ರದೇಶದಲ್ಲಿ ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ ಆಗಿದೆ. ಅಂಬಿಕಾ (28) ಹತ್ಯೆಯಾದವರು. ಚಂದ್ರಮೌಳಿ ಎಂಬಾತ ಪತ್ನಿಯನ್ನು ಕೊಂದ ಆರೋಪಿಯಾಗಿದ್ದಾನೆ.

Murder Case: ಪತ್ನಿ ಶೀಲ ಶಂಕಿಸಿ ಕಾಡಿಗೆ ಕರೆದೊಯ್ದ; ಕಲ್ಲಿನಿಂದ ಜಜ್ಜಿ ಕೊಂದ
Deepa S

ಬೆಂಗಳೂರಲ್ಲಿ ಕ್ಯಾಶಿಯರ್‌ ಹತ್ಯೆಗೈದ ಹೌಸ್‌ಕೀಪರ್

ಬೆಂಗಳೂರಿನ ಜೀವನ್ ಭೀಮಾನಗರ ಸಿಟಾಡೆಲ್ ಹೋಟೆಲ್‌ (Citadel Hotel) ಕ್ಯಾಶಿಯರ್‌ನ (cashier) ಬರ್ಬರ ಹತ್ಯೆ (Murder case) ಆಗಿದೆ. ಕ್ಯಾಶಿಯರ್ ಸುಭಾಷ್ ಮೃತ ದುರ್ದೈವಿ.

Murder Case : ಮಲಗಿದ್ದ ಕ್ಯಾಶಿಯರ್‌ಗೆ ದೊಣ್ಣೆಯಿಂದ ಹೊಡೆದು ಹತ್ಯೆಗೈದ ಹೌಸ್‌ಕೀಪರ್
Exit mobile version