Site icon Vistara News

Karnataka live news: ಬಿಜೆಪಿ ಲೆಟರ್‌ಹೆಡ್‌ನಲ್ಲಿ ರಾಜ್ಯಪಾಲರಿಗೆ ದೂರು; ಮೊದಲ ಸಹಿಯೇ ಕುಮಾರಸ್ವಾಮಿ, ಸೇರೇಬಿಟ್ರಾ ಹಾಗಿದ್ರೆ?

Karnataka Live News Updates Today

ಬೆಂಗಳೂರು: ಬಿಜೆಪಿಯ ಲೆಟರ್‌ ಹೆಡ್‌ನಲ್ಲಿ ರಾಜ್ಯಪಾಲರಿಗೆ ನೀಡಲಾಗಿರುವ ದೂರಿನಲ್ಲಿ ಮೊದಲ ಸಹಿ ಇರುವುದೇ ಜೆಡಿಎಸ್‌ ಶಾಸಕಾಂಗ ಪಕ್ಷ ನಾಯಕ ಎಚ್.ಡಿ ಕುಮಾರಸ್ವಾಮಿ ಅವರದ್ದು. ಹಾಗಿದ್ದರೆ ಕುಮಾರಸ್ವಾಮಿ ಅವರು ಬಿಜೆಪಿ ಸೇರಿಯೇ ಬಿಟ್ರಾ ಎಂಬ ಕುತೂಹಕಾರಿ ಚರ್ಚೆ ನಡೆಯುತ್ತಿದೆ.

Harish Kera

ಹಿಂದುತ್ವವಾದಿಗಳೂ ಉಗ್ರರ ಟಾರ್ಗೆಟ್‌?

ಬೆಂಗಳೂರು: ಬೆಂಗಳೂರಿನಲ್ಲಿ ಪತ್ತೆ ಹಚ್ಚಿ ಬಂಧಿಸಲಾಗಿರುವ ಶಂಕಿತ ಭಯೋತ್ಪಾದಕರ ಮೊಬೈಲ್‌ಗಳಲ್ಲಿ ಕೆಲ ಹಿಂದುತ್ವವಾದಿಗಳ ಹೆಸರು ಮತ್ತು ಫೊಟೋ ಶೇರ್ ಆಗಿದ್ದು, ಇವರ ಹತ್ಯೆ ಸಂಚು ಕೂಡ ನಡೆದಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ಜತೆಗೆ, ಪೊಲೀಸರಿಗೆ ಮಾತ್ರ ಲಭ್ಯವಾಗುವ ವೀಶೇಷ ಗುಂಡುಗಳೂ ಕೂಡ ಇವರ ಬಳಿ ಕಂಡುಬಂದಿವೆ.

Harish Kera

ಜೆಡಿಎಸ್ ಮುಂದಿನ ನಡೆ ಬಗ್ಗೆ ಮಹತ್ವದ ಸಭೆ

ಬೆಂಗಳೂರು: ಇಂದು ಸಂಜೆ 6 ಗಂಟೆಗೆ ಜೆಡಿಎಸ್ ನಾಯಕರ ಸಭೆಯನ್ನು ಮಾಜಿ ಪ್ರಧಾನಿ ದೇವೇಗೌಡ ನಡೆಸಲಿದ್ದಾರೆ. ಖಾಸಗಿ ಹೋಟೆಲ್‌ನಲ್ಲಿ ನಡೆಯಲಿರುವ ಮಹತ್ವದ ಸಭೆಯಲ್ಲಿ ಮುಂದಿನ ರಾಜಕೀಯ ನಿಲುವುಗಳ ಬಗ್ಗೆ ನಾಯಕರ ಜೊತೆ ಹೆಚ್‌ಡಿಡಿ ಚರ್ಚಿಸಲಿದ್ದಾರೆ.

Harish Kera

ಇಂದೂ ಮುಂದುವರಿಯಲಿರುವ ಬಿಜೆಪಿ ಪ್ರತಿಭಟನೆ

ಬೆಂಗಳೂರು: ನಿನ್ನೆ ವಿಧಾನಸಭೆಯಲ್ಲಿ ಗದ್ದಲ ಎಬ್ಬಿಸಿದ ಬಿಜೆಪಿ ಸದಸ್ಯರನ್ನು ಅಮಾನತು ಮಾಡಿದ ಕ್ರಮವನ್ನು ವಿರೋಧಿಸಿ ಬಿಜೆಪಿ ಕೈಗೊಂಡಿರುವ ಪ್ರತಿಭಟನೆ ಇಂದೂ ಮುಂದುವರಿಯಲಿದೆ.

Exit mobile version