Site icon Vistara News

Cauvery water dispute : ಕಾವೇರಿ ಜಲ ವಿವಾದ; ಕಾನೂನು ಹೋರಾಟಕ್ಕೆ ಸರ್ವಪಕ್ಷ ಮುಖಂಡರ ತೀರ್ಮಾನ

Anna From Mexico Poster

ಬೆಂಗಳೂರು: ಕಾವೇರಿ, ಮೇಕೆದಾಟು ಮತ್ತು ಮಹದಾಯಿ ಜಲ ವಿವಾದಗಳ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರ್ವಪಕ್ಷ ಸಭೆ ನಡೆದಿದ್ದು, ಕಾವೇರಿ ನೀರು ಬಿಡುವ ವಿಚಾರವಾಗಿ ಕಾನೂನು ಹೋರಾಟ ನಡೆಸುವುದೇ ಸೂಕ್ತ ಎಂಬ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.

Krishna Bhat

ಕಲಬುರಗಿಯ ಸನ್ನತಿ ಚಂದ್ರಲಾಂಬೆಯ ಸನ್ನಿಧಿಯಲ್ಲಿ ಪೂಜೆ


ಕಲಬುರಗಿ: ಇಲ್ಲಿನ ಸನ್ನತಿ ಚಂದ್ರಲಾಂಬೆಯ ಸನ್ನಿಧಿಯಲ್ಲಿ ಚಂದ್ರಯಾನ ಸಕ್ಸಸ್ ಲ್ಯಾಂಡಿಂಗ್ ಆಗಲು ಪಾರಾಯಣ ಮಾಡಲಾಯಿತು. ಶ್ರೀ ಸೂಕ್ತ ಪಾರಾಯಣ ಮಾಡಿ ಅರ್ಚಕರಿಂದ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

Harish Kera

ದಾವಣಗೆರೆಯಲ್ಲಿ ಚಂದ್ರಯಾನದ ಜತೆ ಸೆಲ್ಫಿ, ವಿಶೇಷ ಪೂಜೆ

ದಾವಣಗೆರೆ: ದಾವಣಗೆರೆಯ ಶ್ರೀದೇವಿ ತಿಮ್ಮರೆಡ್ಡಿ ಪಬ್ಲಿಕ್ ಸ್ಕೂಲ್ ಮಕ್ಕಳು ಹಾಗೂ ಶಿಕ್ಷಕರು ವಿಶೇಷ ಕಾರ್ಯಕ್ರಮ ಸಂಯೋಜಿಸಿದ್ದಾರೆ. ಅಲ್ ದಿ ಬೆಸ್ಟ್ ಇಸ್ರೋ ಸಹಿ ಸಂಗ್ರಹ, ಸೆಲ್ಫಿ ವಿತ್ ಚಂದ್ರಯಾನ-3 ಜತೆಗೆ ಚಂದ್ರಯಾನ ಲ್ಯಾಂಡಿಂಗ್ ವೀಕ್ಷಣೆಗೆ ಶಾಲಾ ಅಡಳಿತ ಮಂಡಳಿ ವ್ಯವಸ್ಥೆ ಮಾಡಿಕೊಂಡಿದೆ. ಚಂದ್ರಯಾನ ಯಶಸ್ಸಿಗಾಗಿ ಶಾಮನೂರು ಅಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ.

Krishna Bhat

ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

ಬೆಳಗಾವಿ: ಚಂದ್ರನ ಮೇಲೆ ಲ್ಯಾಂಡರ್‌ನ್ನು ಇಳಿಸುವ ಇಸ್ರೋ ಸಾಹಸ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿ ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪಾರ್ಥನೆ, ಮಹಾರುದ್ರಾಭೀಷೇಕ ನಡೆಸಲಾಯಿತು.

ಮಹಿಳೆಯರು ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಂ‌ ಶ್ಲೋಕ ಹಾಡಿ ಪ್ರಾರ್ಥನೆ ಸಲ್ಲಿಸಿದರು.

Krishna Bhat

ಯಾದಗಿರಿ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ

ಯಾದಗಿರಿ: ನಗರದ ಚಿತ್ತಾಪುರ ರಸ್ತೆಯಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಲಾಯಿತು. ಆಂಜನೇಯ, ಈಶ್ವರ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ, ತೆಂಗಿನಕಾಯಿ ಒಡೆದು ಪ್ರಾರ್ಥನೆ ಸಲ್ಲಿಸಲಾಯಿತು.

ವಿಜ್ಞಾನಕ್ಕೆ ದೈವದ ಅನುಗ್ರಹ ಇರಲಿ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಮುದ್ನಾಳ ನೇತೃತ್ವದಲ್ಲಿ ಪ್ರಗತಿಪರ ಚಿಂತಕರಿಂದ ಪೂಜೆ ಸಲ್ಲಿಸಲಾಯಿತು.

ವಿಜ್ಞಾನಿಗಳು ಕಳೆದ ಬಾರಿಯ ನೋವು ಅನುಭವಿಸಬಾರದು, ಈ ಬಾಯ ಪ್ರಯತ್ನ ಯಶಸ್ವಿ ಆಗಲಿ. ನಮ್ಮ ವಿಜ್ಞಾನಿಗಳ ಪ್ರಯತ್ನ ಯಶಸ್ವಿಯಾಗಲಿ, ಚಂದ್ರಯಾನಕ್ಕೆ ಯಾವುದೇ ಅಡೆತಡೆಯಾಗದೆ ಸೇಫ್ ಆಗಿ ಲ್ಯಾಂಡ್ ಆಗಲಿ ಅಂತಾ ಭಕ್ತಿಯಿಂದ ಪ್ರಾರ್ಥನೆ ಮಾಡಲಾಯಿತು.

Harish Kera

ಕೊಪ್ಪಳ ಸೇಂಟ್‌ ಪಾಲ್ಸ್‌ ಶಾಲೆ ಮಕ್ಕಳಿಂದ ಯಾನದ ಚಿತ್ರ

: ಕೊಪ್ಪಳ ಜಿಲ್ಲೆ ಗಂಗಾವತಿ ನಗರದ ಸೇಂಟ್ ಪಾಲ್ಸ್ ಶಾಲೆಯ ಮಕ್ಕಳು ಚಂದ್ರಯಾನ-3 ಯಶಸ್ಸಿಗೆ ವಿಶೇಷ ರೀತಿಯಲ್ಲಿ ಶುಭ ಹಾರೈಸಿದ್ದಾರೆ. ಚಂದ್ರಯಾನ-3ರ ಪ್ರತಿ ಹಂತದ ಚಿತ್ರ ಬಿಡಿಸಿ ಆಲ್ ದಿ ಬೆಸ್ಟ್ ಹೇಳಿದ್ದಾರೆ.

Exit mobile version