Site icon Vistara News

Karnataka live news: ಸೆ. 29ರ ಕರ್ನಾಟಕ ಬಂದ್‌ಗೆ ವಾಟಾಳ್‌ ಟೀಮ್‌ ರೆಡಿ; ಹಲವು ಸಂಘಟನೆ ಬಲ, ಏನಿರುತ್ತೆ? ಏನಿರಲ್ಲ?

Bangalore Bandh KG Road

ಬೆಂಗಳೂರು: ನಿನ್ನೆ ನಡೆದ ಬೆಂಗಳೂರು ಬಂದ್‌ನ (Bangalore bandh) ನಡುವೆಯೂ ಕೆಆರ್‌ಎಸ್‌ ಅಣೆಕಟ್ಟಿನಿಂದ ತಮಿಳುನಾಡಿಗೆ ಕಾವೇರಿ ನೀರಿನ (Cauvery water) ಬಿಡುಗಡೆ ಯಥಾಪ್ರಕಾರ ಮುಂದುವರಿದಿದೆ. 5000 ಕ್ಯೂಸೆಕ್‌ನಿಂದ 3000 ಕ್ಯೂಸೆಕ್‌ಗೆ ಇಳಿಸಿದ ಪ್ರಾಧಿಕಾರದ ಆದೇಶ ತುಸು ರಿಲೀಫ್‌ ನೀಡಿದೆ. ಇದರೊಂದಿಗೆ ರಾಜ್ಯದ ಇಂದಿನ ಇನ್ನಷ್ಟು ಮಹತ್ವದ ರಾಜಕೀಯ, ಸಾಂಸ್ಕೃತಿಕ ಸುದ್ದಿಗಳನ್ನು ತಿಳಿಯಲು ಇಲ್ಲಿ ಗಮನಿಸುತ್ತಿರಿ.

Harish Kera

ಬೆಂಗಳೂರು- ಮಂಗಳೂರು ಹೆದ್ದಾರಿಯಲ್ಲಿ ಅಪಘಾತ, ನಾಲ್ವರ ದುರ್ಮರಣ

ಮಂಡ್ಯ: KSRTC ಬಸ್‌ಗೆ ಕಾರು ಡಿಕ್ಕಿಯಾಗಿ ನಾಲ್ವರು ಸಾವಿಗೀಡಾಗಿದ್ದಾರೆ. ಬೆಂಗಳೂರು – ಮಂಗಳೂರು ಹೆದ್ದಾರಿಯ ಬೆಳ್ಳೂರು ಕ್ರಾಸ್ ಬಳಿ ಅಪಘಾತ ನಡೆದಿದೆ. ಹಾಸನ ಕಡೆಯಿಂದ ಬರುತ್ತಿದ್ದ ಸ್ವಿಫ್ಟ್ ಕಾರು ನಿಲ್ಲಿಸಿದ್ದ ಬಸ್ಸಿಗೆ ಡಿಕ್ಕಿ ಹೊಡೆದಿದೆ.

Harish Kera

ಜೆಡಿಎಸ್‌ನಲ್ಲಿ ಮುಂದುವರೆದ ಅಲ್ಪಸಂಖ್ಯಾತರ ರಾಜೀನಾಮೆ ಪರ್ವ

ಬೆಂಗಳೂರು: ಬಿಜೆಪಿ ಜೊತೆ ಮೈತ್ರಿ ಯಿಂದ ಅಸಮಾಧಾನಗೊಂಡಿರುವ ಜೆಡಿಎಸ್‌ನ ಹಲವು ಅಲ್ಪಸಂಖ್ಯಾತ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇಂದು ಮೈಸೂರಿನಲ್ಲಿ ಇನ್ನಷ್ಟು ಜನ ನಾಯಕರು ಸುದ್ದಿಗೋಷ್ಠಿ ನಡೆಸಿ ರಾಜೀನಾಮೆ ಪ್ರಕಟ ಮಾಡಲಿದ್ದಾರೆ.

Exit mobile version