Site icon Vistara News

Karnataka Live News: ಬಿಜೆಪಿ ಸಂಸದ ಪ್ರತಾಪ್ ಸಿಂಹ ಸಹೋದರನ ಬಂಧನ

karnataka live news kannada today news live vistara news november 18 and CM Siddaramaiah BS Yediyurappa and DCM DK Shivakumar

ಬೆಂಗಳೂರು: ರಾಜ್ಯದ ಹಲವು ಕಡೆ ನಡೆದ ಪುರಸಭೆ, ನಗರಸಭೆಗಳ ಉಪ ಚುನಾವಣೆಗಳ ಫಲಿತಾಂಶ ಪ್ರಕಟವಾಗಿದೆ. ಇದರೊಂದಿಗೆ ರಾಜ್ಯದ ಪ್ರಮುಖ ರಾಜಕೀಯ, ಸಾಂಸ್ಕೃತಿಕ ಮತ್ತಿತರ ಸುದ್ದಿ ಬೆಳವಣಿಗೆಗಳ ಕ್ಷಣಕ್ಷಣದ ಅಪ್‌ಡೇಟ್‌ (Karnataka Live News) ಇಲ್ಲಿ ಸಿಗಲಿದೆ.

Deepa S

ಯಲಹಂಕದಲ್ಲಿ ಹುಚ್ಚು ನಾಯಿ ದಾಳಿ; ಬಾಲಕರು ಸೇರಿ 7 ಮಂದಿಗೆ ಗಾಯ

ಸಿಕ್ಕ ಸಿಕ್ಕವರ ಮೇಲೆ ಎರಗಿ ಹುಚ್ಚು ನಾಯಿ ದಾಳಿ (Dog Bite) ಮಾಡುತ್ತಿದೆ. ಯಲಹಂಕದ ಕೊಂಡಪ್ಪ ಲೇಔಟ್ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುವವರ ಮೇಲೆ ಹುಚ್ಚುನಾಯಿಯೊಂದು ದಾಳಿ ಮಾಡಿ ಕಚ್ಚುತ್ತಿದೆ.

Dog Bite : ಯಲಹಂಕದಲ್ಲಿ ಹುಚ್ಚು ನಾಯಿ ದಾಳಿ; ಬಾಲಕರು ಸೇರಿ 7 ಮಂದಿಗೆ ಗಾಯ
Deepa S

ಕುಡಿತದ ಅಮಲಿನಲ್ಲಿ 33ನೇ ಮಹಡಿ ಮೇಲಿಂದ ಹಾರಿ ಬಿದ್ದ ಟೆಕ್ಕಿ ಸಾವು

ಕುಡಿತದ ಅಮಲಿನಲ್ಲಿ (Alcohol Effect) ಕಂಡ ಕಂಡವರ ಮೇಲೆ ಹಲ್ಲೆ ಮಾಡುವವರನ್ನು ನೋಡಿದ್ದೇವೆ, ಕೊಲೆ ಮಾಡುವವರನ್ನು ನೋಡಿದ್ದೇವೆ. ಕುಡಿದ ಮೇಲೆ ಅವರಿಗೆ ತಾವು ಏನು ಮಾಡುತ್ತಿದ್ದೇವೆ ಅನ್ನೋದೇ ತಿಳಿಯದೆ ಈ ರೀತಿ ಮಾಡುತ್ತಾರೆ ಅಂತೇವೆ. ಆದರೆ, ಇಲ್ಲೊಬ್ಬ ಕುಡಿತದ ಅಮಲಿನಲ್ಲಿ ಏನು ಮಾಡುತ್ತಿದ್ದೇನೆ ಎನ್ನುವ ಅರಿವೇ ಇಲ್ಲದೆ, 33ನೇ ಮಹಡಿಯಿಂದ (Techie Death) ಬಿದ್ದು ಮೃತಪಟ್ಟಿದ್ದಾನೆ.

Techie Death : ಕುಡಿತದ ಅಮಲಿನಲ್ಲಿ 33ನೇ ಮಹಡಿ ಮೇಲಿಂದ ಹಾರಿ ಬಿದ್ದ ಟೆಕ್ಕಿ ಸಾವು
Harish Kera

ಪುತ್ತೂರು ನಗರಸಭೆಯಲ್ಲಿ ಪುತ್ತಿಲಗೆ ನಿರಾಸೆ

ಮಂಗಳೂರು: ಪುತ್ತೂರು ನಗರಸಭೆಯ ತೆರವಾದ ಎರಡು ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಒಂದು ಸ್ಥಾನ ಬಿಜೆಪಿ, ಇನ್ನೊಂದು ಸ್ಥಾನ ಕಾಂಗ್ರೆಸ್ ಪಾಲಾಗಿದೆ. ಪುತ್ತಿಲ ಬಣ ನಿರಾಸೆಗೆ ಒಳಗಾಗಿದೆ.

Harish Kera

ಚಿತ್ರದುರ್ಗ ಅಸ್ಥಿಪಂಜರ ಪ್ರಕರಣಕ್ಕೆ ಟ್ವಿಸ್ಟ್‌

ಚಿತ್ರದುರ್ಗ: ಚಿತ್ರದುರ್ಗದ ಪಾಳು ಮನೆಯಲ್ಲಿ ದೊರೆತ ಐದು ಅಸ್ಥಿಪಂಜರಗಳ ಪ್ರಕರಣಕ್ಕೆ ಟ್ವಿಸ್ಟ್‌ ದೊರೆತಿದೆ. ಮನೆಯಲ್ಲಿ ಡೆತ್‌ನೋಟ್‌ ದೊರೆತಿದ್ದು, ಅದರಲ್ಲಿ ತಮಗೆ ಕಿರುಕುಳ ಕೊಡುತ್ತಿದ್ದ ಇಬ್ಬರ ಹೆಸರನ್ನು ಉಲ್ಲೇಖಿಸಲಾಗಿದೆ.

Exit mobile version