Site icon Vistara News

Karnataka Live News: ಜನಪ್ರಿಯ ನಟಿ ಲೀಲಾವತಿ ಇನ್ನಿಲ್ಲ; ಇಹಲೋಕ ತ್ಯಜಿಸಿದ ಕಲಾಸರಸ್ವತಿ

Leelavati No more

ಬೆಂಗಳೂರು: ಖ್ಯಾತ ಚಿತ್ರನಟಿ ಲೀಲಾವತಿ ಇನ್ನಿಲ್ಲ. ಕನ್ನಡದ ಕಲಾಸರಸ್ವತಿ ಲೀಲಾವತಿ ಇಹಲೋಕ ತ್ಯಜಿಸಿದ್ದಾರೆ. ಹಲವು ತಿಂಗಳಿಂದ ಅನಾರೋಗ್ಯದಿಂದ ಹಾಸಿಗೆ ಹಿಡಿಡಿದ್ದ ನಟಿಗೆ 86 ವರ್ಷವಾಗಿತ್ತು.

Prabhakar R

ನಟಿ ಲೀಲಾವತಿ ನಿಧನಕ್ಕೆ ಮೋದಿ ಸೇರಿ ರಾಜಕೀಯ ನಾಯಕರು, ಚಿತ್ರರಂಗದ ಗಣ್ಯರ ಸಂತಾಪ

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ (Actress Leelavathi) ಅವರ ನಿಧನಕ್ಕೆ ರಾಜಕೀಯ ಪ್ರಧಾನಿ ನರೇಂದ್ರ ಮೋದಿ ಸೇರಿ ಪ್ರಮುಖ ರಾಜಕೀಯ ನಾಯಕರು, ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರರನ್ನು ರಂಜಿಸಿದ್ದ ಹಿರಿಯ ನಟಿ ಲೀಲಾವತಿ ಅವರ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದು ಪ್ರಮುಖರು ಕಂಬನಿ ಮಿಡಿದಿದ್ದಾರೆ.

Actress Leelavathi: ನಟಿ ಲೀಲಾವತಿ ನಿಧನಕ್ಕೆ ಮೋದಿ ಸೇರಿ ರಾಜಕೀಯ ನಾಯಕರು, ಚಿತ್ರರಂಗದ ಗಣ್ಯರ ಸಂತಾಪ

Prabhakar R

Actress Leelavati : ಹಿರಿಯ ನಟಿ ಲೀಲಾವತಿ ವಿಧಿವಶ; ಹೋರಾಟದಲ್ಲೇ ಬೆಳೆದ ಲೀಲಮ್ಮ ಇನ್ನಿಲ್ಲ

ಕನ್ನಡದ ಕಲಾಸರಸ್ವತಿ ಲೀಲಾವತಿ (Actress Leelavati) ಇನ್ನಿಲ್ಲ. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಮೇರುನಟಿ ಶುಕ್ರವಾರ (ಡಿಸೆಂಬರ್‌ 8) ಸಂಜೆ ನೆಲಮಂಗಲದ ತೋಟದ ಮನೆಯಲ್ಲಿ ಕೊನೆಯುಸಿರೆಳೆದರು.

Actress Leelavati : ಹಿರಿಯ ನಟಿ ಲೀಲಾವತಿ ವಿಧಿವಶ; ಹೋರಾಟದಲ್ಲೇ ಬೆಳೆದ ಲೀಲಮ್ಮ ಇನ್ನಿಲ್ಲ

Prabhakar R

ರೈತರ ಒಕ್ಕಲೆಬ್ಬಿಸುವಿಕೆಗೆ ಆಕ್ರೋಶ; ಕಿತ್ತೂರಲ್ಲಿ ಹೆದ್ದಾರಿ ತಡೆದು 9 ಗ್ರಾಮಸ್ಥರ ಪ್ರತಿಭಟನೆ

ಕುಲವಳ್ಳಿ ಗ್ರಾಮಸ್ಥರನ್ನು ಒಕ್ಕಲೆಬ್ಬಿಸುವ ಹುನ್ನಾರ ವಿರೋಧಿಸಿ 9 ಹಳ್ಳಿಗಳ ಜನರು, ಕಿತ್ತೂರು ಪಟ್ಟಣದ ಚೆನಮ್ಮ ವೃತ್ತದ ಬಳಿ ಶುಕ್ರವಾರ ಬೃಹತ್‌ ಪ್ರತಿಭಟನೆ (Farmers Protest) ನಡೆಸಿದರು. ಸ್ಥಳಕ್ಕೆ‌ ಕಂದಾಯ ಸಚಿವ ಕೃಷ್ಣ ಬೈರೇಗೌಡ ಬರುವಂತೆ ಆಗಮಿಸಬೇಕು ಎಂದು ಪಟ್ಟು ಹಿಡಿದ ರೈತರು, ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ಹೊರಹಾಕಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಹೀಗಾಗಿ ಪ್ರತಿಭಟನಾಕಾರರನ್ನು ಪೊಲೀಶರು ವಶಕ್ಕೆ ಪಡೆದರು.

Farmers Protest: ರೈತರ ಒಕ್ಕಲೆಬ್ಬಿಸುವಿಕೆಗೆ ಆಕ್ರೋಶ; ಕಿತ್ತೂರಲ್ಲಿ ಹೆದ್ದಾರಿ ತಡೆದು 9 ಗ್ರಾಮಸ್ಥರ ಪ್ರತಿಭಟನೆ
Prabhakar R

12 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ, ಇಂಡಿಯಾ ಕೂಟಕ್ಕೆ ಶಕ್ತಿ ಕೊಡುವೆ: ಸಿ.ಎಂ. ಇಬ್ರಾಹಿಂ

ಜೆಡಿಎಸ್ ಶಾಸಕರು ಜಾತ್ಯತೀತ ಸಿದ್ಧಾಂತ ಬಿಟ್ಟು ಬಿಜೆಪಿ ಜತೆ (BJP-JDS alliance) ಹೋಗಲು ತಯಾರಿಲ್ಲ. ಈಗಾಗಲೇ 5 ಶಾಸಕರು ನನ್ನ ಸಂಪರ್ಕದಲ್ಲಿದ್ದು, ಈ ಸಂಖ್ಯೆ 12ಕ್ಕೆ ಏರಿಕೆ ಆಗಲಿದೆ. ಡಿ.11ರಂದು ಎಲ್ಲ ರಾಜ್ಯಗಳ ಜೆಡಿಎಸ್ ಅಧ್ಯಕ್ಷರು ಸಭೆ ಸೇರಿ ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ನಿರ್ಣಯ ಮಾಡಿದ್ದಾರೆ ಎಂದು ಜೆಡಿಎಸ್ ಉಚ್ಚಾಟಿತ ರಾಜ್ಯ ಅಧ್ಯಕ್ಷ ಸಿ.ಎಂ. ಇಬ್ರಾಹಿಂ (CM Ibrahim) ಹೇಳಿದ್ದಾರೆ.

BJP-JDS alliance: 12 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ, ಇಂಡಿಯಾ ಕೂಟಕ್ಕೆ ಶಕ್ತಿ ಕೊಡುವೆ: ಸಿ.ಎಂ. ಇಬ್ರಾಹಿಂ
Krishna Bhat

BBMP Scam : ಬಿಬಿಎಂಪಿ ಶಾಲೆಗಳಿಗೆ ಶಿಕ್ಷಕರ ನೇಮಿಸಲು ಪತ್ತೆದಾರಿ ಸಂಸ್ಥೆಗೆ ಹೊರಗುತ್ತಿಗೆ!
Exit mobile version