ಬೆಂಗಳೂರು: ಹೃದಯಾಘಾತದಿಂದ ಅಕಾಲಿಕವಾಗಿ ದೇವರ ಪಾದ ಸೇರಿದ ಸ್ಪಂದನಾ ವಿಜಯ್ ರಾಘವೇಂದ್ರ (Spandana Vijay Raghavendra) ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಶ್ರೀರಾಂಪುರದ ಹರಿಶ್ಚಂದ್ರ ಘಾಟ್ನಲ್ಲಿ ಬುಧವಾರ ಮಧ್ಯಾಹ್ನ ನೆರವೇರಿತು ಇದೂ ಸೇರಿದಂತೆ ರಾಜ್ಯದ ಪ್ರಮುಖ ಸುದ್ದಿಗಳ Live Updates (Karnataka Live news) ಇಲ್ಲಿದೆ.
ಸ್ಪಂದನ ಅಂತಿಮ ದರ್ಶನಕ್ಕೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್
ದಂಪತಿ ಸಮೇತ ಆಗಮಿಸಿ ಪ್ರೀತಿಯ ರಾಘುಗೆ ಸಾಂತ್ವನ ಹೇಳಿದ ರಕ್ಷಿತಾ ಅಂಡ್ ಪ್ರೇಮ್
ವಿಧಿ ಮುಂದೆ ನಾವು ಏನೂ ಅಲ್ಲ ಎಂದ ತಬಲಾ ನಾಣಿ
ʻʻಏನು ಮಾತಾಡಲಿ? ವಿಧಿಯ ಮುಂದೆ ನಾವು ಯಾರೂ ಏನೂ ಅಲ್ಲ. ಚಿಕ್ಕ ವಯಸ್ಸಿಗೇ ಹೀಗೆ ಆಗಿದ್ದು ತಪ್ಪು. ಮನೆಯವರಿಗೆ ದುಃಖ ತಡೆದುಕೊಳ್ಳೋ ಶಕ್ತಿ ಕೊಡಲಿʼʼ ಎಂದರು ತಬಲಾ ನಾಣಿ.
ರಾಘು ಅಣ್ಣ ಜತೆ ಸದಾ ಇರ್ತೀವಿ: ಬಿಕ್ಕಿ ಬಿಕ್ಕಿ ಅತ್ತ ಧೀರನ್ ರಾಮ್ ಕುಮಾರ್
ಸ್ಪಂದನಾ ಸಾವು ನಮ್ಮ ಕುಟುಂಬಕ್ಕೆ ನೋವು ತಂದಿದೆ. ಮೊನ್ನೆ ತಾನೇ ಡಿಕೆಡಿ ಕಾರ್ಯಕ್ರಮವನ್ನು ನೋಡಿ ಅಳ್ತಾ ಇದ್ದರು ಎಂದು ರಾಮ್ ಕುಮಾರ್ ಪುತ್ರ ಧೀರೇನ್ ಹೇಳಿದರು. ರಾಘು ಅಣ್ಣ ಜೊತೆ ನಾವು ಸದಾ ಇರುತ್ತೇವೆ ಎಂದರು.
ಸ್ಪಂದನ ಅಂತಿಮ ದರ್ಶನಕ್ಕೆ ಆಗಮಿಸಿದ ಡಾರ್ಲಿಂಗ್ ಕೃಷ್ಣ ಅಂಡ್ ಮಿಲನ ನಾಗರಾಜ್
ವಿಜಯ ರಾಘವೇಂದ್ರ ಅವರಿಗೆ ಧೈರ್ಯ ತುಂಬಿದ ನಟಿ ಶುಭಾ ಪೂಂಜಾ
ವಿಜಯ್ ರಾಘವೇಂದ್ರ ಅವರಿಗೆ ಸಾಂತ್ವನ ಹೇಳಿದ ಪ್ರೇಮ್ ದಂಪತಿ
ಹೂಮಾಲೆ ಹಾಕಿ ಸ್ಪಂದನ ಅಂತಿಮ ದರ್ಶನ ಪಡೆದ ಧ್ರುವ ಸರ್ಜಾ
ಗೆಳತಿಯ ಬಳಗದಲ್ಲಿ ಹೈಸ್ಕೂಲ್ ಹುಡುಗಿ ಸ್ಪಂದನಾ