ಬೆಂಗಳೂರು: ಹೃದಯಾಘಾತದಿಂದ ಅಕಾಲಿಕವಾಗಿ ದೇವರ ಪಾದ ಸೇರಿದ ಸ್ಪಂದನಾ ವಿಜಯ್ ರಾಘವೇಂದ್ರ (Spandana Vijay Raghavendra) ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಶ್ರೀರಾಂಪುರದ ಹರಿಶ್ಚಂದ್ರ ಘಾಟ್ನಲ್ಲಿ ಬುಧವಾರ ಮಧ್ಯಾಹ್ನ ನೆರವೇರಿತು ಇದೂ ಸೇರಿದಂತೆ ರಾಜ್ಯದ ಪ್ರಮುಖ ಸುದ್ದಿಗಳ Live Updates (Karnataka Live news) ಇಲ್ಲಿದೆ.
ʻʻಮಾತಾಡೋಕೆ ಆಗ್ತಿಲ್ಲ ನಂಗೆ.. ಮೊದಲ ಬಾರಿಗೆ ಸ್ಪಂದನಾ ಅವರನ್ನು ಇದೇ ಮನೆಯಲ್ಲಿ ಭೇಟಿಯಾಗಿದ್ದೆ ಕಾಡುಮಲ್ಲೇಶ್ವರಂ ದೇವಸ್ಥಾನದಲ್ಲಿ ಹಾಡು ಹಾಡಿದ್ದೆ. ಆಗ ಇವರ ಮನೆಗೆ ಇಲ್ಲಿ ಬಂದಿದ್ದೆ. ತುಂಬಾ ಸುಂದರವಾದ ಮನಸ್ಸು ಅವರದುʼʼ ಎಂದು ಖ್ಯಾತ ಗಾಯಕಿ ಶಮಿತಾ ಮಲ್ನಾಡ್ ನೆನಪು ಮಾಡಿಕೊಂಡರು.
ʻʻಶಿವರಾಂ ಸರ್, ರಾಘು ಹೇಗೆ ಇದನ್ನು ಸಹಿಸಿಕೊಳ್ತಾರೋ ಗೊತ್ತಿಲ್ಲ… ಅವರನ್ನು ಇದರಿಂದ ಹೊರಗಡೆ ಬನ್ನಿ ಅಂಥ ಹೇಳೋ ಪರಿಸ್ಥಿತಿಯೂ ಇಲ್ಲʼʼ ಎಂದು ಹೇಳಿದರು ಶಮಿತಾ ಮಲ್ನಾಡ್.
ಸ್ಪಂದನಾ ಪಾರ್ಥಿವ ಶರೀರಕ್ಕೆ ಹೂಮಾಲೆ ಹಾಕಿ ದರ್ಶನ ಪಡೆದ ಅಶ್ವತ್ ನಾರಾಯಣ್
ಸ್ಪಂದನಾ ಅಂತಿಮ ದರ್ಶನಕ್ಕೆ ತಂದೆಯೊಂದಿಗೆ ಆಗಮಿಸಿದ ಧರ್ಮ ಕೀರ್ತಿರಾಜ್
ಕಾಂತಾರಾ ಖ್ಯಾತಿಯ ನಟಿ ಸಪ್ತಮಿ ಗೌಡ ಅವರಿಂದ ಅಂತಿಮ ನಮನ
ಗಾಯಕ ಗುರುಕಿರಣ್ ದಂಪತಿಯಿಂದ ಅಂತಿಮ ದರ್ಶನ
ಅಂತಿಮ ದರ್ಶನಕ್ಕೆ ಆಗಮಿಸಿದ ಮೇಘನಾ ರಾಜ್
ವಿಜಯ್ ರಾಘವೇಂದ್ರ ಕೆನ್ನೆ ಸವರಿ ಧೈರ್ಯ ತುಂಬಿದ ಸುಂದರ್ ರಾಜ್
ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಅವರಿಗೆ ಸಾಂತ್ವನ ಹೇಳಿ ಕಂಬನಿ ಮಿಡಿದ ರಾಧಿಕಾ ಕುಮಾರಸ್ವಾಮಿ
ಸ್ಪಂದನಾ ಅಂತಿಮ ದರ್ಶನ ಪಡೆಯಲು ಆಗಮಿಸಿದ ಮಾಜಿ ಸಚಿವ ಬಿಸಿ ಪಾಟೀಲ್, ಜಯಪ್ರಕಾಶ್ ಹೆಗ್ಡೆ, ಉಮಾಶ್ರೀ
ಸ್ಪಂದನ ಪಾರ್ಥೀವ ಶರೀರವನ್ನು ನೋಡಿ ಬಿಕ್ಕಿ ಬಿಕ್ಕಿ ಆತ್ತ ಜಯರಾಂ ಕಾರ್ತಿಕ್. ವಿಜಯ್ ರಾಘವೇಂದ್ರ ಅವರಿಗೆ ಬಿಗಿ ಅಪ್ಪುಗೆ ಕೊಟ್ಟು ದುಃಖ ಹೊರಹಾಕಿದ ಜೆಕೆ