Site icon Vistara News

Karnataka Live news : ಚಿನ್ನಾರಿ ಮುತ್ತನ ಮುತ್ತು ಸ್ಪಂದನಾ ಪಂಚಭೂತಗಳಲ್ಲಿ ಲೀನ; ಎಲ್ಲೆಡೆ ಕಂಬನಿ, ಮೌನ

Spandana vijay Raghavendra Photo

Spandana vijay Raghavendra Photo kept at BK Shivaram house

ಬೆಂಗಳೂರು: ಹೃದಯಾಘಾತದಿಂದ ಅಕಾಲಿಕವಾಗಿ ದೇವರ ಪಾದ ಸೇರಿದ ಸ್ಪಂದನಾ ವಿಜಯ್‌ ರಾಘವೇಂದ್ರ (Spandana Vijay Raghavendra) ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಶ್ರೀರಾಂಪುರದ ಹರಿಶ್ಚಂದ್ರ ಘಾಟ್‌ನಲ್ಲಿ ಬುಧವಾರ ಮಧ್ಯಾಹ್ನ ನೆರವೇರಿತು ಇದೂ ಸೇರಿದಂತೆ ರಾಜ್ಯದ ಪ್ರಮುಖ ಸುದ್ದಿಗಳ Live Updates (Karnataka Live news) ಇಲ್ಲಿದೆ.

Krishna Bhat

‌ʻʻಮಾತಾಡೋಕೆ ಆಗ್ತಿಲ್ಲ ನಂಗೆ.. ಮೊದಲ ಬಾರಿಗೆ ಸ್ಪಂದನಾ ಅವರನ್ನು ಇದೇ ಮನೆಯಲ್ಲಿ ಭೇಟಿಯಾಗಿದ್ದೆ ಕಾಡುಮಲ್ಲೇಶ್ವರಂ ದೇವಸ್ಥಾನದಲ್ಲಿ ಹಾಡು ಹಾಡಿದ್ದೆ. ಆಗ ಇವರ ಮನೆಗೆ ಇಲ್ಲಿ ಬಂದಿದ್ದೆ. ತುಂಬಾ ಸುಂದರವಾದ ಮನಸ್ಸು ಅವರದುʼʼ ಎಂದು ಖ್ಯಾತ ಗಾಯಕಿ ಶಮಿತಾ ಮಲ್ನಾಡ್‌ ನೆನಪು ಮಾಡಿಕೊಂಡರು.

ʻʻಶಿವರಾಂ ಸರ್, ರಾಘು ಹೇಗೆ ಇದನ್ನು ಸಹಿಸಿಕೊಳ್ತಾರೋ ಗೊತ್ತಿಲ್ಲ… ಅವರನ್ನು ಇದರಿಂದ ಹೊರಗಡೆ ಬನ್ನಿ ಅಂಥ ಹೇಳೋ ಪರಿಸ್ಥಿತಿಯೂ ಇಲ್ಲʼʼ ಎಂದು ಹೇಳಿದರು ಶಮಿತಾ ಮಲ್ನಾಡ್‌.

Krishna Bhat

ಸ್ಪಂದನಾ ಪಾರ್ಥಿವ ಶರೀರಕ್ಕೆ ಹೂಮಾಲೆ ಹಾಕಿ ದರ್ಶನ ಪಡೆದ ಅಶ್ವತ್ ನಾರಾಯಣ್
ಸ್ಪಂದನಾ ಅಂತಿಮ ದರ್ಶನಕ್ಕೆ ತಂದೆಯೊಂದಿಗೆ ಆಗಮಿಸಿದ ಧರ್ಮ ಕೀರ್ತಿರಾಜ್
ಕಾಂತಾರಾ ಖ್ಯಾತಿಯ ನಟಿ ಸಪ್ತಮಿ ಗೌಡ ಅವರಿಂದ ಅಂತಿಮ ನಮನ

Krishna Bhat

ಗಾಯಕ ಗುರುಕಿರಣ್ ದಂಪತಿಯಿಂದ ಅಂತಿಮ ದರ್ಶನ
ಅಂತಿಮ ದರ್ಶನಕ್ಕೆ ಆಗಮಿಸಿದ ಮೇಘನಾ ರಾಜ್
ವಿಜಯ್ ರಾಘವೇಂದ್ರ ಕೆನ್ನೆ ಸವರಿ ಧೈರ್ಯ ತುಂಬಿದ ಸುಂದರ್ ರಾಜ್
ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಅವರಿಗೆ ಸಾಂತ್ವನ ಹೇಳಿ ಕಂಬನಿ ಮಿಡಿದ ರಾಧಿಕಾ ಕುಮಾರಸ್ವಾಮಿ

Krishna Bhat

ಸ್ಪಂದನಾ ಅಂತಿಮ ದರ್ಶನ ಪಡೆಯಲು ಆಗಮಿಸಿದ ಮಾಜಿ ಸಚಿವ ಬಿಸಿ ಪಾಟೀಲ್, ಜಯಪ್ರಕಾಶ್ ಹೆಗ್ಡೆ, ಉಮಾಶ್ರೀ

Krishna Bhat

ಸ್ಪಂದನ ಪಾರ್ಥೀವ ಶರೀರವನ್ನು ನೋಡಿ ಬಿಕ್ಕಿ ಬಿಕ್ಕಿ ಆತ್ತ ಜಯರಾಂ ಕಾರ್ತಿಕ್. ವಿಜಯ್ ರಾಘವೇಂದ್ರ ಅವರಿಗೆ ಬಿಗಿ ಅಪ್ಪುಗೆ ಕೊಟ್ಟು ದುಃಖ ಹೊರಹಾಕಿದ ಜೆಕೆ

Exit mobile version