Site icon Vistara News

Karnataka Live news : ಚಿನ್ನಾರಿ ಮುತ್ತನ ಮುತ್ತು ಸ್ಪಂದನಾ ಪಂಚಭೂತಗಳಲ್ಲಿ ಲೀನ; ಎಲ್ಲೆಡೆ ಕಂಬನಿ, ಮೌನ

Spandana vijay Raghavendra Photo

Spandana vijay Raghavendra Photo kept at BK Shivaram house

ಬೆಂಗಳೂರು: ಹೃದಯಾಘಾತದಿಂದ ಅಕಾಲಿಕವಾಗಿ ದೇವರ ಪಾದ ಸೇರಿದ ಸ್ಪಂದನಾ ವಿಜಯ್‌ ರಾಘವೇಂದ್ರ (Spandana Vijay Raghavendra) ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಶ್ರೀರಾಂಪುರದ ಹರಿಶ್ಚಂದ್ರ ಘಾಟ್‌ನಲ್ಲಿ ಬುಧವಾರ ಮಧ್ಯಾಹ್ನ ನೆರವೇರಿತು ಇದೂ ಸೇರಿದಂತೆ ರಾಜ್ಯದ ಪ್ರಮುಖ ಸುದ್ದಿಗಳ Live Updates (Karnataka Live news) ಇಲ್ಲಿದೆ.

Krishna Bhat

ಚಿನ್ನಾರಿ ಮುತ್ತನಿಗೆ ಮಾಸ್ಟರ್‌ ಆನಂದ್‌ ಸಾಂತ್ವನ, ಲಕ್ಷ್ಮಿ ಕಳೆ ಎದ್ದು ಕಾಣ್ತಿದೆ

ಮಾಸ್ಟರ್ ಆನಂದ್ ಹಾಗೂ ಪತ್ನಿ ಯಶಸ್ವಿನಿ ಸ್ಪಂದನ ಅಂತಿಮ ದರ್ಶನಕ್ಕೆ ಆಗಮಿಸಿದ್ದಾರೆ. ಆನಂದ್‌ ಅವರು ಗೆಳೆಯ ಚಿನ್ನಾರಿ ಮುತ್ತನಿಗೆ ಹೆಗಲ ಮೇಲೆ ಕೈ ಹಾಕಿ ಧೈರ್ಯ ತುಂಬಿದರು.

ʻʻರಾಘು ಮೇಲೆ ಕುಟುಂಬದಲ್ಲಿರುವ ಜವಾಬ್ದಾರಿ ತುಂಬಾ ಇದೆ. ಇನ್ಮೇಲೆ ತಂದೆಯಾಗಿ.. ತಾಯಿಯಾಗಿ.. ಹೇಗೆ ಮನೆ ಜವಾಬ್ದಾರಿ ತಗೋತಾನೋ ಗೊತ್ತಿಲ್ಲ. ಸ್ಪಂದನ ಮುಖ ನೋಡಿದಾಗ ಮುತ್ತೈದೆ ಕಲೆ.. ಲಕ್ಷ್ಮಿ ಕಲೆ ಎದ್ದು ಕಾಣಿಸ್ತಿದೆ.

Krishna Bhat

ಮಧ್ಯಾಹ್ನ 2ರಿಂದ ಸ್ಪಂದನಾ ಅಂತಿಮ ಯಾತ್ರೆ: ಬಿ.ಕೆ ಹರಿಪ್ರಸಾದ್‌

ʻʻಸ್ಪಂದನಾ ಅವರ ಅಂತಿಮ ಯಾತ್ರೆ 2 ಗಂಟೆಗೆ ಪ್ರಾರಂಭ ಮಾಡುತ್ತೇವೆ. ಅವರ ಅಂತ್ಯಕ್ರಿಯೆ ಹರಿಶ್ಚಂದ್ರ ಘಾಟ್ ನಲ್ಲಿ ನಡೆಯಲಿದೆʼʼ ಎಂದು ಸ್ಪಂದನಾ ಅವರ ದೊಡ್ಡಪ್ಪ ಬಿ.ಕೆ. ಹರಿಪ್ರಸಾದ್‌ ಅವರು ತಿಳಿಸಿದರು.

ʻʻಪಾರ್ಥಿವ ಶರೀರ 2 ಗಂಟೆ ತನಕ ಇಲ್ಲೇ ಇರುತ್ತದೆ. ಮಧ್ಯಾಹ್ನ ನಂತರ ಅಂತಿಮ ಸಂಸ್ಕಾರ ಮಾಡಲಿದ್ದೇವೆ. 2 ಗಂಟೆಯಿಂದ ಅಂತಿಮ ಯಾತ್ರೆ ನಡೆಯಲಿದೆ. ಹರಿಶ್ಚಂದ್ರ ಘಾಟ್ ನಲ್ಲಿ ಮಧ್ಯಾಹ್ನ 2:30ರಿಂದ 3:30ರ ನಡುವೆ ನಡೆಯಲಿದೆ ಎಂದರು.

Krishna Bhat

ಎಲ್ಲರೂ ಪ್ರಪಂಚ ಬಿಟ್ಟು ಹೋಗ್ಲೇಬೇಕು, ಆದರೆ ನಿಯಮ ಬೇಕಲ್ಲ: ವಿನೋದ್‌ ರಾಜ್‌

ʻʻಎಲ್ಲರೂ ಒಂದಲ್ಲ ಒಂದು ದಿನ ಪ್ರಪಂಚ ಬಿಟ್ಟು ಹೋಗ್ಲಬೇಕು. ಆದರೆ ಅದಕ್ಕೂ ಒಂದು ನಿಯಮ ಇತ್ತು. 80..90..100ವರ್ಷ ಅಂತ ವಯಸ್ಸು ಇತ್ತು. ಆದರೆ, ಈಗ ಸಮಯವಾಗಲೀ ಕಾರಣ ಏನೂ ಇಲ್ಲ. ಅಕಾಲಿಕ ಮರಣ ಇತ್ತೀಚೆಗೆ ಹೆಚ್ಚಾಗಿದೆ. ನೆನಸಿಕೊಂಡರೆ ಭಯ ಆಗುತ್ತದೆ.ʼʼ ಎಂದು ಹೇಳಿದರು ವಿನೋದ್‌ ರಾಜ್

‌ʻʻಚಂದ್ರನಿಗೇ ದೃಷ್ಟಿ ಬಿತ್ತಾ ಅಂತ ಆಶ್ಚರ್ಯ ಆಗ್ತಿದೆ. ಮುದ್ದಾದ ಚಂದ್ರನಂತೆ ಇದ್ದರು ಈ ಜೋಡಿ. ನಾನು ಇರಲಿ ಇಲ್ಲದಿರಲಿ ನನ್ನ ಪ್ರೀತಿ ನಿನ್ನ ಜೊತೆ ಇರಲಿ ಎಂದು ಹೇಳಿ ಹೋಗಿದ್ದಾರೆ ಸ್ಪಂದನʼʼ ಎಂದು ಭಾವುಕರಾದರು ವಿನೋದ್‌ ರಾಜ್‌.

Krishna Bhat

ಸ್ಪಂದನಾ ಅನ್ನ ಪೂರ್ಣೇಶ್ವರಿ ಎಂದ ತರುಣ್‌ ಸುಧೀರ್‌

ಸ್ಪಂದನಾ ಅನ್ನಪೂರ್ಣೇಶ್ವರಿ..ಶೂಟಿಂಗ್ ಗೆ ಊಟ ತಂದು ಬಡಿಸ್ತಿದ್ಲು ಎಂದು ನಿರ್ದೇಶಕ ತರುಣ್‌ ಸುಧೀರ್‌ ನೆನಪಿಸಿಕೊಂಡಿದ್ದಾರೆ. ಶೌರ್ಯ ಹಾಗು ರಾಘು ಸ್ಪಂದನ ಮೇಲೆ ಡಿಪೆಂಡ್ ಆಗಿದ್ದಾರೆ. ಹೀಗಾಗಿ ಎರಡು ಮಕ್ಕಳನ್ನು ಅ ತಾಯಿ ಬಿಟ್ಟು ಹೋಗಿದ್ದಾಳೆ ಎಂದರು.

ಚಿತ್ರರಂಗಕ್ಕೆ ಯಾರ ದೃಷ್ಟಿ ತಾಗಿದೆ ಗೊತ್ತಾಗ್ತಿಲ್ಲ. ಯಾಕೆ ಒಳ್ಳೆಯವರ ಬಾಳಲ್ಲಿ ಈ ರೀತಿ ಸಿಡಿಲು ಬಡಿಯುತ್ತೆ ಎಂದು ಪ್ರಶ್ನಾರ್ಥಕ ಚಿಹ್ನೆ ಇಟ್ಟರು ತರುಣ್‌.

Krishna Bhat

ಅಕ್ಕನ ಸ್ಥಾನದಲ್ಲಿ ನಿಂತು ಸಾಂತ್ವನ ಹೇಳಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌

ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್ ಕುಮಾರ್‌ ಅವರು ಸ್ಪಂದನಾ ಅಂತಿಮ ದರ್ಶನಕ್ಕೆ ಆಗಮಿಸಿದ್ದಾರೆ. ಮಕ್ಕಳಾದ ಧೃತಿ ಹಾಗೂ ವಂದಿತಾರೊಂದಿಗೆ ಆಗಮಿಸಿದ ಅವರು ವಿಜಯ್ ರಾಘವೇಂದ್ರ ಹಾಗೂ ಶ್ರೀಮುರಳಿ ಕೈ ಹಿಡಿದು ಸಾಂತ್ವನ ಹೇಳಿದರು. ಸ್ವಂತ ಅಕ್ಕನಂತೆ ತಮ್ಮಂದಿರಿಗೆ ಧೈರ್ಯ ತುಂಬಿದ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ನೋಡಿ ಸೋದರರಿಬ್ಬರೂ ಕಣ್ಣೀರು ಹಾಕಿದರು. ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಜತೆ ದೊಡ್ಮನೆ ಕುಡಿಗಳಾದ ಯುವ ಹಾಗೂ ಗುರು ರಾಜ್ ಕುಮಾರ್ ಕೂಡಾ ಆಗಮಿಸಿ ವಿಜಯ್ ಗೆ ಸಾಂತ್ವನ ಹೇಳಿದು. ಸ್ಪಂದನಾ ಅವರ ಪಾರ್ಥಿವ ಶರೀರ ನೋಡಿ ದೊಡ್ಮನೆ ಕಿರಿ ಸೊಸೆಯ ಕಣ್ಣಂಚಲ್ಲೂ ನೀರು ಜಿನುಗಿತು.

Exit mobile version