ಬೆಂಗಳೂರು: ಹೃದಯಾಘಾತದಿಂದ ಅಕಾಲಿಕವಾಗಿ ದೇವರ ಪಾದ ಸೇರಿದ ಸ್ಪಂದನಾ ವಿಜಯ್ ರಾಘವೇಂದ್ರ (Spandana Vijay Raghavendra) ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಶ್ರೀರಾಂಪುರದ ಹರಿಶ್ಚಂದ್ರ ಘಾಟ್ನಲ್ಲಿ ಬುಧವಾರ ಮಧ್ಯಾಹ್ನ ನೆರವೇರಿತು ಇದೂ ಸೇರಿದಂತೆ ರಾಜ್ಯದ ಪ್ರಮುಖ ಸುದ್ದಿಗಳ Live Updates (Karnataka Live news) ಇಲ್ಲಿದೆ.
ಮಗನಿಗೆ ಸಾಂತ್ವನ ಹೇಳುತ್ತಿರುವ ವಿಜಯ್ ರಾಘವೇಂದ್ರ
ತಾಯಿಯನ್ನ ನೆನೆದು ಮೂಕನಾದ ರಾಘು ಮಗ ಶೌರ್ಯ
ಮಗನಿಗೆ ದೈರ್ಯ ತುಂಬುತ್ತಿರುವ ವಿಜಯ ರಾಘವೇಂದ್ರ, ಮುರುಳಿ
ಸ್ಪಂದನ ಅಂತಿಮ ದರ್ಶನಕ್ಕೆ ಆಗಮಿಸಿದ ನಿರೂಪಕಿ ಅನುಶ್ರೀ. ಪ್ರೀತಿಯ ಚಿನ್ನಾರಿ ಮುತ್ತನಿಗೆ ಸಾಂತ್ವನ ಹೇಳಿದ ಅನುಶ್ರೀ. ಅನುಶ್ರೀ ಸಾಂತ್ವನ ಹೇಳುತ್ತಿರುವಾಗ ಕಣ್ಣೀರು ಹಾಕಿದ ಶ್ರೀ ಮುರುಳಿ.
ಸ್ಪಂದನಾ ಮೃತದೇಹಕ್ಕೆ ಮಂಡಿಯೂರಿ ನಮಿಸಿದ ಸೃಜನ್ ಲೋಕೇಶ್
ಸ್ಪಂದನಾ ಮೃತದೇಹವನ್ನು ನೋಡುತ್ತಾ ಹಾಗೆ ನಿಂತುಬಿಟ್ಟ ಸೃಜನ್ ಲೋಕೇಶ್. ಮನಸಲ್ಲೇ ದುಃಖ ಪಡುತ್ತಿರುವ ಸೃಜನ್ ಲೋಕೇಶ್ ಚಿನ್ನಾರಿ ಮುತ್ತನಿಗೆ ಬಿಗಿ ಅಪ್ಪುಗೆ ನೀಡಿ ಸಾಂತ್ವನ ಹೇಳಿದರು. ಬಳಿಕ ಮಂಡಿಯೂರಿ ಸ್ಪಂದನಾ ಪಾರ್ಥಿವ ಶರೀರಕ್ಕೆ ನಮಸ್ಕರಿಸಿದರು.
ವಿಜಯ್ ರಾಘವೇಂದ್ರಗೆ ಸಾಂತ್ವನ ಹೇಳಿದ ಪ್ರಿಯಾಂಕ್ ಖರ್ಗೆ, ಖಾದರ್
ಬೆಂಗಳೂರು: ಅಗಲಿದ ಸ್ಪಂದನಾ ಪಾರ್ಥಿವ ಶರೀರ ವೀಕ್ಷಿಸಲು ಗಣ್ಯರು ಆಗಮಿಸುತ್ತಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ, ಸ್ಪೀಕರ್ ಯು.ಟಿ ಖಾದರ್ ಆಗಮಿಸಿ ವಿಜಯ್ ರಾಘವೇಂದ್ರ ಅವರಿಗೆ ಸಾಂತ್ವನ ತಿಳಿಸಿದ್ದಾರೆ.