Site icon Vistara News

ತೀರ್ಥಹಳ್ಳಿಯಲ್ಲಿ ಖೋಖೋ ಕ್ರೀಡಾಪಟು ವಿನಯ್‌ ಅಂತ್ಯಸಂಸ್ಕಾರ

ಶಿವಮೊಗ್ಗ: ಮೆದುಳು ಜ್ವರದಿಂದ ಮೃತಪಟ್ಟ ರಾಷ್ಟ್ರ ಮಟ್ಟದ ಖೋಖೋ ಕ್ರೀಡಾಪಟು ವಿನಯ್‌ ಸೀಬಿನಕೆರೆ ಅವರ ಅಂತ್ಯಸಂಸ್ಕಾರ ತೀರ್ಥಹಳ್ಳಿಯಲ್ಲಿ ಮಂಗಳವಾರ ನೆರವೇರಿತು.

ಇದಕ್ಕೂ ಮುನ್ನ ತೀರ್ಥಹಳ್ಳಿಯಲ್ಲಿ ವಿನಯ್​ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಯಿತು. ಅಂತಿಮಯಾತ್ರೆಯಲ್ಲಿ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗಿಯಾಗಿದ್ದರು. ಈ ವೇಳೆ ಕುಟುಂಬಸ್ಥರು, ಅಭಿಮಾನಿಗಳು ಹಾಗೂ ಸ್ನೇಹಿತರು ಕಂಬನಿ ಮೂಲಕ ಅಂತಿಮ ನಮನ ಸಲ್ಲಿಸಿದರು.

ವಿನಯ್ ಅವರು ಕೆಲವು ದಿನಗಳಿಂದ ಮೆದುಳು ಜ್ವರದಿಂದ ಬಳಲುತ್ತಿದ್ದರು. ಮೊದಲು ತೀರ್ಥಹಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಕ್ರೀಡಾಪಟುವನ್ನು ನಂತರ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ ಕೊನೆಯುಸಿರೆಳೆದಿದ್ದರು.

ಇದನ್ನೂ ಓದಿ | ಖೋಖೋ ಕ್ರೀಡಾಪಟು ವಿನಯ್‌ ಸೀಬಿಕೆರೆ ಇನ್ನಿಲ್ಲ

Exit mobile version