Site icon Vistara News

ಕೊಟ್ಟ ಹಣ ವಾಪಸ್‌ ಬಾರದ್ದಕ್ಕೆ ಬೇಸರ ಮೊಬೈಲ್‌ ಮಳಿಗೆ ಮಾಲೀಕ ಆತ್ಮಹತ್ಯೆ

ಕೊಡಗು: ಕೊಟ್ಟ ಹಣ ಸಕಾಲದಲ್ಲಿ ಸಿಗದೆ ಇರುವುದರಿಂದ ಬೇಸರಗೊಂಡ ಮೊಬೈಲ್‌ ಅಂಗಡಿ ಮಾಲೀಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಗಿನ ಕುಶಾಲನಗರದ ರಾಧಾಕೃಷ್ಣ ಬಡಾವಣೆಯಲ್ಲಿ ನಡೆದಿದೆ.

ಸಮಿಯುಲ್ಲಾ ಖಾನ್ (40) ನೇಣು ಬಿಗಿದು ಆತ್ಮಹತ್ಯೆಗೆ ಶರಣಾದವರು. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಈ ಕೃತ್ಯ ಎಸಗಿದ್ದಾರೆ. ಅವರ ಹೆಂಡತಿ ಸುಹಾನಾರವರು ಕರ್ತವ್ಯ ಮುಗಿಸಿ ಮನೆಗೆ ಬಂದ ಸಮಯದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

ಖಾನ್ ಅವರು ಕುಶಾಲ ನಗರದ ಅನುರಾಧಾ ಮೊಬೈಲ್ ಮಳಿಗೆ ಮಾಲೀಕರಾಗಿದ್ದು, ಜೊತೆಗೆ ಆವರ್ತಿಯಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದರು. ಸಾಯುವ ಮುನ್ನ ಬರೆದಿಟ್ಟಿರುವ ಪತ್ರದಲ್ಲಿ ವ್ಯಕ್ತಿಯೋರ್ವ ತನಗೆ ಹಣ ನೀಡದೇ ಇರುವುದರಿಂದ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿ ಅವರ ಹೆಸರನ್ನು ನಮೂದಿಸಿದ್ದಾರೆ.
ಸ್ಥಳಕ್ಕೆ ಕುಶಾಲನಗರ ಪೋಲೀಸ್ ಠಾಣಾಧಿಕಾರಿ ಅಪ್ಪಾಜಿ ಹಾಗೂ ಸಿಬ್ಬಂದಿಗಳು ಪರಿಶೀಲನೆ ನಡೆಸಿ ಸಂಬಂಧಿಕರಿಂದ ದೂರು ಪಡೆದುಕೊಂಡು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕಾನ್ಸ್‌ಟೇಬಲ್‌ ಆತ್ಮಹತ್ಯೆಗೆ ಸಹೋದ್ಯೋಗಿಗಳ ಕಿರುಕುಳ ಕಾರಣ? –

Exit mobile version