Site icon Vistara News

ಕೊಡಗಿಗೆ ಇಂದು ಸಿದ್ದರಾಮಯ್ಯ ಭೇಟಿ, ಬಿಜೆಪಿಯಿಂದ GOBACK ಅಭಿಯಾನ

siddu

ಮಡಿಕೇರಿ: ಕೊಡಗಿಗೆ ಇಂದು ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ಆಗಮನದ ಹಿನ್ನೆಲೆಯಲ್ಲಿ ಚುರುಕಾಗಿರುವ ಬಿಜೆಪಿ, ʼಸಿದ್ದರಾಮಯ್ಯ GOBACKʼ ಅಭಿಯಾನ ಆರಂಭಿಸಿದೆ.

ʼಸಿದ್ದರಾಮಯ್ಯ ಗೋ ಬ್ಯಾಕ್ʼ ಎಂದು ಪೋಸ್ಟರ್ ಅಭಿಯಾನ‌ ಹಾಗೂ ಟ್ವಿಟರ್‌ನಲ್ಲಿ ಪೋಸ್ಟರ್‌ ಹಾಕುವ ಮೂಲಕ ಪ್ರತಿಭಟಿಸಲು ಕೊಡಗು ಜಿಲ್ಲಾ ಯುವ ಮೋರ್ಚಾ ಮುಂದಾಗಿದೆ. “ಕೊಡಗಿಗೆ ಸಿದ್ದುಖಾನ್ ಕೊಡಗಿಗೆ ಸೂತಕ” “ಕೊಡಗಿನಲ್ಲಿ ಹಿಂದುಗಳ ನರಮೇಧ ನಡೆಸಿದ ಟಿಪ್ಪುವಿನ ಶಿಷ್ಯ ಸಿದ್ದುಖಾನ್” ಎಂದೆಲ್ಲ ಪೋಸ್ಟರ್‌ಗಳಲ್ಲಿ ಬರೆಯಲಾಗಿದೆ.

ಕೊಡಗು ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ನಡೆಯುತ್ತಿರುವ #GOBACK ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ನಡೆಯುತ್ತಿದೆ. ಸದ್ಯ ಬಿಜೆಪಿಯ ಭದ್ರ ನೆಲೆಯಾಗಿರುವ ಕೊಡಗಿನಲ್ಲಿ ಕಾಂಗ್ರೆಸ್‌ ಚುರುಕಾಗುವ ಯಾವುದೇ ಅವಕಾಶವನ್ನು ತಡೆಯುವುದು ಬಿಜೆಪಿಯ ಗುರಿಯಾಗಿದೆ.

ಇಂದು ಸಿದ್ದರಾಮಯ್ಯ ಭೇಟಿ

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಕೊಡಗಿಗೆ ಭೇಟಿ ನೀಡಿ ಮಳೆ ಹಾನಿ ಪ್ರದೇಶಗಳನ್ನು ಪರಿಶೀಲಿಸಲಿದ್ದಾರೆ. ಮಳೆಹಾನಿ ಪ್ರದೇಶಗಳಾದ ಮದೆ ಪಂಚಾಯತಿ 2 ನೇ ಮೊಣ್ಣಂಗೇರಿ, ಕರ್ತೋಜೆ ಗುಡ್ಡ ಕುಸಿತ ಆತಂಕ ಮತ್ತು ರಸ್ತೆ ಹಾನಿ, ದೇವರಕೊಲ್ಲಿ ರಾಜ್ಯ ಹೆದ್ದಾರಿ ಹಾನಿ, ಕೊಯಿನಾಡು ಕಿಂಡಿ ಅಣೆಕಟ್ಟು ಮತ್ತು ಆ ಭಾಗದ ಸಂತ್ರಸ್ತರ ಭೇಟಿ ಮಾಡಲಿದ್ದಾರೆ.

ಇದನ್ನೂ ಓದಿ: Earthquake In Karnataka | ಕೊಡಗು ಭೂ ಕಂಪನ: ಹಿರಿಯ ಭೂ ವಿಜ್ಞಾನಿಗಳು ಹೇಳೋದೇನು?

Exit mobile version