Site icon Vistara News

HD Kumaraswamy road show | ಕೋಲಾರದಲ್ಲಿ ಜೆಡಿಎಸ್‌ನ ಪಂಚರತ್ನ ಯಾತ್ರೆ ಇಂದು ಸಂಚಾರ

Former CM HD Kumaraswamy is critically ill, Admitted to Manipal Hospital in bangalore

ಕೋಲಾರ: ಕೋಲಾರದ ಮಾಲೂರು ಪಟ್ಟಣಕ್ಕೆ ಜೆಡಿಎಸ್‌ನ ಪಂಚರತ್ನ ರಥಯಾತ್ರೆ (HD Kumaraswamy road show) ಆಗಮಿಸಿದೆ.

ಮಾಲೂರು ಪಟ್ಟಣದಲ್ಲಿ ತೆರದ ವಾಹನದಲ್ಲಿ HDK ರೋಡ್ ಶೋ ನಡೆಸಿದ್ದಾರೆ. ಅಭಿಮಾನಿಗಳಿಂದ ರಥಯಾತ್ರೆಗೆ ಅದ್ದೂರಿ ಸ್ವಾಗತ ಕೋರಲಾಯಿತು. ಅಭಿಮಾನಿಗಳು ಕ್ರೇನ್ ಮೂಲಕ ಬೃಹತ್ ಹೂವಿನ ಹಾರ ಹಾಕಿ, ಹೂ ಮಳೆ ಸುರಿಸಿದರು.

ತೆನೆ ಹೊತ್ತ ಮಹಿಳೆಯರಿಂದಲೂ ಭವ್ಯ ಸ್ವಾಗತ ಕೋರಲಾಯಿತು. ಮಾಲೂರು ಪಟ್ಡಣದ ಕೆಂಪೇಗೌಡ ವೃತ್ತದಲ್ಲಿ ಎಚ್‌ಡಿಕೆ ಭಾಷಣ ಮಾಡಿದರು. ಮಾಲೂರು ಪಟ್ಟಣದ ಜಾಮಿಯಾ ಮಸೀದಿಗೆ ಭೇಟಿ ನೀಡಿದರು. ಮುಸ್ಲಿಂ ಸಮುದಾಯದ ಮುಖಂಡರ ಜೊತೆಗೆ ಚರ್ಚೆ ನಡೆಸಿದರು. ಮಾಲೂರು ತಾಲ್ಲೂಕು ಶಿವಾರಪಟ್ಟಣ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದರು.

ಪಂಚರತ್ನ ರಥಯಾತ್ರೆ ಮೂರನೇ ದಿನ ಮುಕ್ತಾಯವಾಗಿದ್ದು, ನನಗೆ ಜ್ವರ ಬಂದಿದೆಯೆಂಬ ಮಾಹಿತಿ ಹರಿದಾಡುತ್ತಿರುವ ಸುದ್ದಿ ಬಂದಿದೆ. ಆದರೆ ನನಗೆ ಯಾವುದೆ ಜ್ವರ ಬಂದಿಲ್ಲ, ಇನ್ನೂ 100 ದಿನಗಳ ಕಾಲ ಸಂಚರಿಸಿದ್ರು, ನಿಮ್ಮ ಆಶೀರ್ವಾದದಿಂದ ಯಾವುದೇ ಸಮಸ್ಯೆ ಎದುರಾಗದು ಎಂದು ಮಾಜಿ ಸಿಎಂ ಕುಮಾರಸ್ವಾಮಿಯವರು ತಿಳಿಸಿದರು.

Exit mobile version