Site icon Vistara News

ಸೈಕಲ್‌ನಿಂದ ಆಯತಪ್ಪಿ ಹಳ್ಳಕ್ಕೆ ಬಿದ್ದು ಬಾಲಕ ಸಾವು, ಸಹೋದರ ಬಚಾವ್

ಬಾಲಕ ಸಾವು

ಕೊಪ್ಪಳ: ಸೈಕಲ್‌ನಲ್ಲಿ ಹೋಗುತ್ತಿದ್ದಾಗ ಆಯತಪ್ಪಿ ಹಳ್ಳಕ್ಕೆ ಬಿದ್ದು ಒಬ್ಬ ಬಾಲಕ ಮೃತಪಟ್ಟಿದ್ದು, ಮತ್ತೊಬ್ಬ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಈಳಿಗನೂರು ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.

ನಂದೀಶ ಹರಿಜನ (13) ಮೃತ ಬಾಲಕ. ಈತನ ತಮ್ಮ ಮಲ್ಲಿಕಾರ್ಜುನ ಅಪಾಯದಿಂದ ಪಾರಾಗಿದ್ದಾನೆ. ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ನಂದೀಶ ಮತ್ತು ಆತನ ತಮ್ಮ ಮಲ್ಲಿಕಾರ್ಜುನ ಸೈಕಲ್‌ನಲ್ಲಿ ತೆರಳುತ್ತಿದ್ದಾಗ ಗ್ರಾಮದ ಬಳಿಯ ಹಳ್ಳಕ್ಕೆ ಬಿದ್ದಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗಿ ನಂದೀಶ ಮೃತಪಟ್ಟಿದ್ದು, ಈತನ ತಮ್ಮ ಮಲ್ಲಿಕಾರ್ಜುನ ಈಜಿ ದಡ ಸೇರಿದ್ದಾನೆ. 7ನೇ ತರಗತಿ ಓದುತ್ತಿದ್ದ ಮೃತ ಬಾಲಕ ನಂದೀಶ ಕರಾಟೆಯಲ್ಲಿ ಚಾಂಪಿಯನ್ ಆಗಿದ್ದ. ಕಾರಟಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | 10ನೇ ಕ್ಲಾಸ್‌ ಹುಡುಗಿಯ ಪ್ರೇಮದಿಂದ ಆಪತ್ತು, ಅಮ್ಮನಿಗೆ ಸೇರಿದ 1.9 ಕೆಜಿ ಚಿನ್ನ, 2 ಕೆಜಿ ಬೆಳ್ಳಿ ಹುಡುಗರ ಪಾಲು!

Exit mobile version