Site icon Vistara News

Forced conversion | ಕೊಪ್ಪಳದಲ್ಲಿ ಬಲವಂತದ ಮತಾಂತರ ಪ್ರಕರಣ, ಮೂವರ ವಿರುದ್ಧ ದೂರು ದಾಖಲು

church

ಕೊಪ್ಪಳ: ಕೊಪ್ಪಳ್ಳದಲ್ಲಿ ಬಲವಂತವಾಗಿ ಮತಾಂತರ ಮಾಡಿದ ಪ್ರಕರಣ ವರದಿಯಾಗಿದ್ದು, ( Forced conversion) ಚರ್ಚ್ ನ ಪಾಸ್ಟರ್ ಸೇರಿ ಮೂರು ಜನರ ವಿರುದ್ದ ದೂರು ದಾಖಲಾಗಿದೆ.

ಕೊಪ್ಪಳ ಜಿಲ್ಲೆಯ ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾರಟಗಿಯ ರಾಮನಗರದ ಶಂಕರ್ ಎಂಬುವವರಿಂದ ಡಿಸೆಂಬರ್ 9 ರಂದು ದೂರು ದಾಖಲಾಗಿತ್ತು.

ಕಾರಟಗಿ ಪಟ್ಟಣದ ರಾಮನಗರದ ಚರ್ಚ್ ನ ಫಾಸ್ಟರ್ ಸತ್ಯನಾರಾಯಣ ಅಲಿಯಾಸ್ ಸ್ಯಾಮುವಲ್, ಶಿವಮ್ಮ ಅಲಿಯಾಸ್ ಸಾರಾ, ಚಿರಂಜೀವಿ ಡ್ಯಾನುವಲ್ ಎಂಬುವವರ ವಿರುದ್ದ ದೂರು ದಾಖಲಾಗಿದೆ.

ಈ ಮೂವರು ದೂರುದಾರ ಶಂಕರ್ ಕುಟುಂಬದವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ತನಿಖೆ ಮುಂದುವರಿದಿದೆ.

Exit mobile version