Site icon Vistara News

Murder Case: ಕೈಕಾಲು ಕಟ್ಟಿ ಕೆರೆಗೆಸೆದು ಯುವಕನ ಹತ್ಯೆ

murder case koppal

ಕೊಪ್ಪಳ: ಕಾಣೆಯಾದ ಯುವಕನೊಬ್ಬ ಶವವಾಗಿ ಕೆರೆಯಲ್ಲಿ ಪತ್ತೆಯಾಗಿದ್ದು (Body found), ಕೊಲೆ ಮಾಡಿರುವ (Murder Case) ಶಂಕೆ ವ್ಯಕ್ತವಾಗಿದೆ.

ಕೊಪ್ಪಳ ತಾಲೂಕಿನ ಡಂಬರಳ್ಳಿಯ ಯುವಕ ಚಂದ್ರಶೇಖರ ಗೌಡ ನಂದನಗೌಡ (27) ಎಂಬಾತನೇ ಶವವಾಗಿ ಪತ್ತೆಯಾದ ಯುವಕ. ಹಿರೇಸಿಂದೋಗಿಯಲ್ಲಿ ಕಂಪ್ಯೂಟರ್ ಅಂಗಡಿ ಇಟ್ಟುಕೊಂಡಿದ್ದ ಯುವಕ ಸೆ.29ರಂದು ಹಿರೇಸಿಂದೋಗಿಯ ಬ್ಯಾಂಕ್ ಸಿಬ್ಬಂದಿಯೊಂದಿಗೆ ರಾತ್ರಿ ಊಟಕ್ಕೆ ಹೋಗಿದ್ದ. ಆ ಬಳಿಕ ಆತನ ಫೋನು ಸ್ವಿಚ್‌ಆಫ್‌ ಆಗಿತ್ತು.

ಇಂದು ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ತಳಕಲ್ ಗ್ರಾಮದ ಹೊರವಲಯದಲ್ಲಿರುವ ಸಾದರ ಕೆರೆಯಲ್ಲಿ ಶವ ಪತ್ತೆಯಾಗಿದೆ. ಕೈ ಕಾಲು ಕಟ್ಟಿ ಕೆರೆಗೆ ಎಸೆದು ಕೊಲೆ ಮಾಡಲಾಗಿರುವ ಸುಳಿವುಗಳು ಲಭ್ಯವಾಗಿವೆ. ಕೈ ಕಾಲು ಕಟ್ಟಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

ಬಾವಿಗೆ ಬಿದ್ದು ಮಗು ಸಾವು

ಶಿರಸಿ: ಬಾವಿಗೆ ಬಿದ್ದು 3 ವರ್ಷದ ಮಗು ಸಾವು ಕಂಡಿದೆ. ಶಿರಸಿ ನಗರದ ಸಿಪಿ ಬಜಾರ್ ಬಳಿ ಈ ದುರ್ಘಟನೆ ನಡೆದಿದೆ. ಸಿಪಿ ಬಜಾರ್‌ನ ಅನುಶ್ರೀ ರಾಜಶೇಖರ್ (3) ಸಾವನ್ನಪ್ಪಿದ ಮಗು.

ತಾಯಿ‌ ಜೊತೆ ಬಾವಿಯಿಂದ ನೀರು ತರುವ ವೇಳೆ ಈ ದುರ್ಘಟನೆ ನಡೆದಿದೆ. ಆಕಸ್ಮಿಕವಾಗಿ ಬಾವಿಗೆ ಬಿದ್ದು ಅಸುನೀಗಿದೆ. ಮಗು ರಕ್ಷಣೆಗೆ ಸ್ಥಳೀಯರು ಹರಸಾಹಸಪಟ್ಟರಾದರೂ, ಬದುಕುಳಿಸಲು ಸಫಲವಾಗಲಿಲ್ಲ. ಶಿರಸಿ ನಗರ ಠಾಣೆಯಲ್ಲಿ‌‌ ಪ್ರಕರಣ ದಾಖಲಾಗಿದೆ.

ನೇಣು ಬಿಗಿದುಕೊಂಡು ಆತ್ಮಹತ್ಯೆ

ಮೈಸೂರು: ಅನುಮಾನಾಸ್ಪದವಾಗಿ ನೇಣು ಬಿಗಿದುಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಂಜನಗೂಡು ತಾಲೂಕಿನ ಈರೇಗೌಡನ ಹುಂಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಹೆಡಿಯಾಲ ಗ್ರಾಮದ ಮಣಿಕಂಠ(37) ಮೃತ ದುರ್ದೈವಿ.

ಹೆಡಿಯಾಲ ಸಮೀಪದ ಈರೇಗೌಡನ ಹುಂಡಿ ಗ್ರಾಮದ ತನ್ನ ಜಮೀನಿನಲ್ಲಿ ಮಣಿಕಂಠ ನೇಣಿಗೆ ಶರಣಾಗಿದ್ದಾನೆ. ಸಾವಿಗೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಹುಲ್ಲಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ರಮೇಶ್ ಕರಕಿಕಟ್ಟೆ ಮತ್ತಿತರ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: Killer BMTC: ಕಿಲ್ಲರ್ ಬಿಎಂಟಿಸಿಗೆ ದ್ವಿಚಕ್ರ ವಾಹನ ಚಾಲಕ ಬಲಿ

Exit mobile version