Site icon Vistara News

ಕೊಪ್ಪಳದಲ್ಲಿ ಸಿಡಿಲು ಬಡಿದು ಯುವಕ ಸಾವು, ಮಹಿಳೆಗೆ ಗಂಭೀರ ಗಾಯ

ಸಿಡಿಲು

ಕೊಪ್ಪಳ: ಹೊಲದಿಂದ ಮನೆಗೆ ವಾಪಸ್‌ ತೆರಳುತ್ತಿದ್ದಾಗ ತಾಲೂಕಿನ ಕಾಟ್ರಳ್ಳಿ ಬಳಿ ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟಿದ್ದು, ಮಹಿಳೆಯೊಬ್ಬರಿಗೆ ಗಂಭೀರ ಗಾಯಗಳಾಗಿವೆ.

ಕಾಟ್ರಳ್ಳಿಯ ಕೋಟ್ರೇಶ (23) ಮೃತ, ಚಿಕ್ಕಸಿಂದೋಗಿಯ ಹನುಮಂತೆವ್ವ ಗಾಯಾಳು. ಇವರು ಹೊಲಕ್ಕೆ ಕೆಲಸಕ್ಕೆಂದು ಹೋಗಿ ಶುಕ್ರವಾರ ಸಂಜೆ ವಾಪಸ್‌ ಮನೆಗೆ ಬರುತ್ತಿದ್ದಾಗ ಸಿಡಿಲು ಬಡಿದು ಅವಘಡ ಸಂಭವಿಸಿದೆ. ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ಎಂಎಲ್‌ಸಿ ಹೇಮಲತಾ ನಾಯಕ ನೆರವಾಗಿದ್ದಾರೆ. ಮುಂಡರಗಿಯಿಂದ ಕೊಪ್ಪಳಕ್ಕೆ ಬರುತ್ತಿದ್ದ ಹೇಮಲತಾ ನಾಯಕ, ಗಾಯಾಳುವನ್ನು ನೋಡಿ ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಮಾಡಿದ್ದಾರೆ.

ದೇವಸ್ಥಾನಕ್ಕೆ ಬಡಿದ ಸಿಡಿಲು, ಗೋಪುರ ಜಖಂ
ಗದಗ: ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಹಳೆಯ ಪೇಟೆ ಬನಶಂಕರಿ ದೇವಸ್ಥಾನಕ್ಕೆ ಸಿಡಿಲು ಬಡಿದು ಗೋಪುರ ಜಖಂ ಆಗಿದೆ. ಶುಕ್ರವಾರ ಸಂಜೆ 4 ಗಂಟೆಗೆ ಭಾರಿ ಮಳೆ ಸುರಿಯುತ್ತಿದ್ದಾಗ ಸಿಡಿಲು ಬಡಿದಿದೆ. ಈ ವೇಳೆ ದೇವಸ್ಥಾನದಲ್ಲಿ ನಿಂತಿದ್ದ ಏಳೆಂಟು ಜನರು ಪ್ರಾಣಾಪಾಯದಿಂದ ಪಾರಾಗಿದ್ದು, ರವಿ ಅನ್ಬಿಗೇರಿ ಎಂಬುವವರಿಗೆ ಕೈಗೆ ಗಾಯಗಳಾಗಿವೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಇದನ್ನೂ ಓದಿ | ಸಿನಿಮಾ ಸೇರುವ ಆಸೆಯಿಂದ ಬಂದವನು ಪಿಜಿ ಅವ್ಯವಸ್ಥೆಯಿಂದ ಹೆಣವಾದ! ಸತ್ತು 2 ದಿನವಾದರೂ ಗೊತ್ತೇ ಆಗಲಿಲ್ಲ

Exit mobile version