Site icon Vistara News

Leopard attack | ಬೆಂಗಳೂರು ತುರಹಳ್ಳಿ ಕಡೆ 4 ಚಿರತೆ ಇಲ್ಲವೇ ಇಲ್ಲ; ಚಿರತೆ ವಾಸಕ್ಕೆ ತುರಹಳ್ಳಿ ಅರಣ್ಯ ಯೋಗ್ಯವಲ್ಲ: ಡಿಆರ್‌ಎಫ್‌ಒ

ಉಡುಪಿಯ ಪರ್ಕಳದಲ್ಲಿ ಚಿರತೆ ದಾಳಿ

ಬೆಂಗಳೂರು: ಬೆಂಗಳೂರಿನ ಜನತೆಯ ಆತಂಕಕ್ಕೆ ಕಾರಣವಾಗಿರುವ ಚಿರತೆ ದಾಳಿ (Leopard attack) ಬಗ್ಗೆ ನಾನಾ ಚರ್ಚೆಗಳು ಹುಟ್ಟಿಕೊಂಡಿದೆ. ಈ ಮಧ್ಯೆ ನಾಲ್ಕು ಚಿರತೆಗಳು ಕಾಣಿಸಿಕೊಂಡಿವೆ ಎಂದೆಲ್ಲ ಚರ್ಚೆಗಳು ನಡೆಯುತ್ತಿವೆ. ಆದರೆ, ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ೪ ಚಿರತೆಗಳು ಇಲ್ಲವೇ ಇಲ್ಲ, ಕಾಣಿಸಿಕೊಂಡಿದ್ದು ಒಂದು ಚಿರತೆ ಇದ್ದ ಕುರುಹು ಇದೆಯಷ್ಟೇ ಎಂದು ಅರಣ್ಯ ಇಲಾಖೆಯ ಡಿಆರ್‌ಎಫ್‌ಒ ರವಿ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತುರಹಳ್ಳಿ ಅರಣ್ಯ ಪ್ರದೇಶವು ಚಿರತೆ ವಾಸಕ್ಕೆ ಸೂಕ್ತವಲ್ಲ. ಚಿರತೆಯು ಆ ಭಾಗದಿಂದ ಹೊರಟು ಹೋಗಿರುವ ಸಾಧ್ಯತೆ ಇದೆ. ಮೇಲ್ನೋಟಕ್ಕೆ ಚಿರತೆ ಅಲ್ಲಿಯೇ ಇರುವ ಕುರಿತು ಕುರುಹುಗಳು ಸಿಕ್ಕಿಲ್ಲ. ಆದರೂ ಎಂದಿನಂತೆ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ. ಮೊನ್ನೆ ಕಾಣಿಸಿಕೊಂಡ ಚಿರತೆ ಪುನಃ ಬನ್ನೇರುಘಟ್ಟಕ್ಕೆ ವಾಪಸ್ ಆಗಿರಬಹುದು ಎಂದು ತಿಳಿಸಿದರು.

ಸದ್ಯ ಖಾಸಗಿಯವರ ಜಾಗಗಳಲ್ಲಿ ಒಂದು ಬೋನ್ ಇಡಲಾಗಿದೆ. ಜನ ಆತಂಕಪಡುವ ಅಗತ್ಯವಿಲ್ಲ. ಜಾಗೃತಿ ಮೂಡಿಸುವ ಕೆಲಸ ಆಗುತ್ತಿದೆ. ಚಿರತೆ ಹೋಗಿರುವ ಮಾಹಿತಿ ಇದೆ. ಆದರೂ ಜನರ ಹಿತದೃಷ್ಟಿಯಿಂದ ಶೋಧ ಕಾರ್ಯವನ್ನು ನಾವು ಮುಂದುವರಿಸುತ್ತೇವೆ ಎಂದು ರವಿ ಹೇಳಿದರು.

ಇದನ್ನೂ ಓದಿ | Leopard attack | ಬೆಂಗಳೂರಲ್ಲಿ ಇನ್ನೂ ಸೆರೆಸಿಗದ ಚಿರತೆ; ಅರಣ್ಯ ಇಲಾಖೆ ಸಿಬ್ಬಂದಿ ಹೈ ಅಲರ್ಟ್‌, ಜನತೆಗೆ ಕಾಡಿದ ಜೀವಭಯ

514.26 ಎಕರೆ ಅರಣ್ಯ ಜಾಗ
ತುರಹಳ್ಳಿ ಅರಣ್ಯ ಪ್ರದೇಶವು ಸುಮಾರು 514.26 ಎಕರೆ ವ್ಯಾಪ್ತಿಯನ್ನು ಹೊಂದಿದೆ. ಸೋಂಪುರ, ಶ್ರೀನಿವಾಸಪುರ, ಆರ್.ಆರ್. ನಗರ, ಮೈಲಸಂದ್ರ, ಕೋಡಿಪಾಳ್ಯ, ಗೆಟ್ಟಿಗರಹಳ್ಳಿ ಪ್ರದೇಶಗಳನ್ನು ಅರಣ್ಯ ವ್ಯಾಪ್ತಿಯು ಒಳಗೊಂಡಿದೆ. ಹೀಗಾಗಿ ಈ ಅರಣ್ಯ ಸುತ್ತಮುತ್ತಲಿನ ಎಲ್ಲ ಸ್ಥಳೀಯರಿಗೂ ಚಿರತೆ ಭಯ ಕಾಡುತ್ತಿದೆ.

ಈಗಾಗಲೇ ಶ್ರೀನಿವಾಸಪುರದಲ್ಲಿ ಎರಡು ಬಾರಿ ಚಿರತೆ ದಾಳಿ ನಡೆಸಿದೆ. ಈ ಭಾಗಗಳಲ್ಲಿ ಹಂದಿ ಸಾಕಾಣಿಕೆ, ಕುರಿ ಸಾಕಾಣಿಕೆ ಹೆಚ್ಚಿರುವ ಕಾರಣ ಅವುಗಳನ್ನು ಬೇಟೆಯಾಡಲು ಕಾರಣವಾಗಿದೆ. ಹೀಗಾಗಿ ಸಾಕಣೆದಾರರು ಭಯಗೊಂಡಿದ್ದಾರೆ.

ಇದನ್ನೂ ಓದಿ | Leopard attack | ಹೊನ್ನಾವರದ ಹೊಸಾಕುಳಿಯ ಮನೆ ಅಂಗಳಕ್ಕೆ ಬಂದ ಚಿರತೆ, ನಾಯಿಯ ಅಬ್ಬರದ ಸದ್ದಿಗೆ ಎಸ್ಕೇಪ್!

Exit mobile version