Site icon Vistara News

Suicide case : ಡೌರಿ ಹಣಕ್ಕಾಗಿ ಪತ್ನಿ ಮೇಲೆ ಹಲ್ಲೆ ಮಾಡಿ ತವರಿಗೆ ಕಳುಹಿಸಿದ್ದವನು ಮನೆಯಲ್ಲಿ ನೇಣು ಹಾಕಿಕೊಂಡ!

Anekal death

#image_title

ಆನೇಕಲ್: ಅವರಿಗೆ ಮದುವೆಯಾಗಿ ೧೦ ವರ್ಷಗಳೇ ಕಳೆದಿತ್ತು. ಆದರೆ, ಇತ್ತೀಚೆಗೆ ಮದ್ಯ ವ್ಯಸನಿಯಾಗಿದ್ದ ಹಣ ತರುವಂತೆ ಪತ್ನಿಯನ್ನು ಪೀಡಿಸುತ್ತಿದ್ದ. ಕೆಲವು ದಿನಗಳ ಹಿಂದೆ ಪತ್ನಿಯ ಮೇಲೆ ಹಲ್ಲೆ ಮಾಡಿ ತವರಿಗಟ್ಟಿದ ಆತ ಇತ್ತ ಮನೆಯಲ್ಲಿ ನೇಣು ಬಿಗಿದುಕೊಂಡು ಪ್ರಾಣ (Suicide case) ಕಳೆದುಕೊಂಡಿದ್ದಾನೆ.

ಬೆಂಗಳೂರು ಹೊರವಲಯ ದಕ್ಷಿಣ ತಾಲೂಕಿನ ಬನ್ನೇರುಘಟ್ಟ ಸಮೀಪದ ಶ್ಯಾನಭೋಗನಹಳ್ಳಿಯಲ್ಲಿ ಘಟನೆ ನಡೆದಿದ್ದು, ಇಲ್ಲಿನ ರಾಜೇಶ್(35) ಮೃತ ವ್ಯಕ್ತಿ.

ವೃತ್ತಿಯಲ್ಲಿ ಗಣೇಶ ಮೂರ್ತಿ ತಯಾರಿಕೆ ಮಾಡುತ್ತಿದ್ದ ಈತನಿಗೆ ಹತ್ತು ವರ್ಷಗಳ ಹಿಂದೆ ನಗರದ ಪುಟ್ಟೇನಹಳ್ಳಿ ವಾಸಿ ಲಾವಣ್ಯ ಜೊತೆ ವಿವಾಹವಾಗಿತ್ತು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

ಇತ್ತೀಚೆಗೆ ಮದ್ಯವ್ಯಸನಿಯಾಗಿದ್ದ ರಾಜೇಶ್ ಪದೇಪದೆ ಡೌರಿ ತರುವಂತೆ ಒತ್ತಾಯಿಸಿ ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದ. ವಾರದ ಹಿಂದೆಯೂ ಪತ್ನಿಗೆ ಹಲ್ಲೆ ಮಾಡಿ ತವರಿಗೆ ಕಳುಹಿಸಿದ್ದ. ಹಣ ತಾರದೆ ಇದ್ದರೆ ಮನೆಗೆ ಬಿಟ್ಟುಕೊಳ್ಳುವುದಿಲ್ಲ ಎಂದು ಎಚ್ಚರಿಸಿದ್ದ. ಈ ನಡುವೆ, ಶನಿವಾರ ರಾತ್ರಿ ರಾತ್ರಿ ವೇಲ್ ನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಈಡಕೊಂಡಿದ್ದಾನೆ. ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಮೃತದೇಹವನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ : Domestic violence : ವಿಷ ಸೇವಿಸಿ ಮಹಿಳೆ ಸಾವು, ವರದಕ್ಷಿಣೆ ಕಿರುಕುಳ ಆರೋಪ ಮಾಡಿದ ಮನೆಯವರು

Exit mobile version