Site icon Vistara News

Murder case: ‌ ಶೌಚಾಲಯದಲ್ಲಿ ನೀರು ಇಟ್ಟಿಲ್ಲ ಎಂದು ತಮ್ಮನ ಪತ್ನಿಯನ್ನೇ ಕೊಂದ ಧೂರ್ತ

Man kills brothers wife for privolous reason

Man kills brothers wife for privolous reason

ಬೀದರ್: ಶೌಚಾಲಯದಲ್ಲಿ ನೀರು ಇಟ್ಟಿಲ್ಲ ಎಂಬ ಕ್ಷುಲ್ಲಕ ಕಾರಣ ಮುಂದಿಟ್ಟುಕೊಂಡು ಜಗಳ ತೆಗೆದ ಪೌರ ಕಾರ್ಮಿಕನೊಬ್ಬ ತನ್ನ ತಮ್ಮನ ಪತ್ನಿಯನ್ನೇ ಕೊಂದು ಹಾಕಿದ್ದಾನೆ (Murder case). ಬಸವಕಲ್ಯಾಣ ಪಟ್ಟಣದ ತ್ರಿಪುರಾಂತ ಎಂಬಲ್ಲಿ ಈ ಭೀಕರ ಘಟನೆ ನಡೆದಿದೆ.

ತ್ರಿಪುರಾಂತ ನಿವಾಸಿ ಸಂಗೀತಾ ಶ್ರೀಧರ ಕಾಂಗೆ (35) ಕೊಲೆಯಾದ ಮಹಿಳೆ. ಸಂಗೀತ ಅವರ ಪತಿ ಶ್ರೀಧರ ಕಾಂಗೆ ಅವರ ಅಣ್ಣ ಅಶೋಕ ಕಾಂಗೆ ಎಂಬಾತನೇ ನಾದಿನಿಯನ್ನು ಕೊಲೆ ಮಾಡಿದ ಆರೋಪಿಯಾಗಿದ್ದಾನೆ.

ಸಂಗೀತಾ ಶ್ರೀಧರ ಕಾಂಗೆ ಅವರು ಗೃಹ ರಕ್ಷಕ ದಳದ ಸಿಬ್ಬಂದಿಯಾಗಿದ್ದು, ಆರೋಪಿ ಅಶೋಕ ನಗರಸಭೆಯಲ್ಲಿ ಪೌರ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ. ಸಂಗೀತ ಅವರ ಪತಿ ಶ್ರೀಧರ ಕಾಂಗೆ ಆಟೋ ಚಾಲಕರಾಗಿದ್ದಾಋೆ.

ಬುಧವಾರ ಶ್ರೀಧರ ಕಾಂಗೆ ಮನೆಯಲ್ಲಿ ಇಲ್ಲದ ಹೊತ್ತಿನಲ್ಲಿ ಅಶೋಕ ಆ ಮನೆಗೆ ಬಂದಿದ್ದಾನೆ. ಆಗ ಶೌಚಾಲಯದಲ್ಲಿ ನೀರು ಇಲ್ಲ ಎಂಬುದನ್ನೇ ದೊಡ್ಡ ವಿಷಯ ಮಾಡಿ ತಮ್ಮನ ಪತ್ನಿಯ ಜತೆಗೆ ಜಗಳಕ್ಕೆ ಇಳಿದಿದ್ದಾನೆ. ಮದ್ಯದ ಅಮಲಿನಲ್ಲಿದ್ದ ಆರೋಪಿ ಅಶೋಕ ಸಂಗೀತಾ ಜತೆ ಆರಂಭಿಸಿದ ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಹರಿತವಾದ ಆಯುಧದಿಂದ ಮಹಿಳೆ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ ಆರೋಪಿ. ಕೊಲೆ ಮಾಡಿದ ತಕ್ಷಣವೇ ಅಲ್ಲಿಂದ ಪರಾರಿಯಾಗಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆಯೇ ಹತ್ತಿರದ ಮನೆಯವರು, ಬಂಧುಗಳು ಧಾವಿಸಿ ಬಂದಿದ್ದು, ಮಹಿಳೆಯ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ಸುದ್ದಿ ತಿಳಿದ ಹುಮನಾಬಾದ ಎಎಸ್ಪಿ ಶಿವಾಂಶು ರಾಜಪುತ್, ಸಿಪಿಐ ರಘುವೀರಸಿಂಗ್ ಠಾಕೂರ್‌, ಪಿಎಸ್ಐ ರೇಣುಕಾ ಉಡಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: Murder Case: ಆಸ್ತಿ ಕಲಹ: ಆಸ್ಪತ್ರೆಗೆ ನುಗ್ಗಿ ಅಣ್ಣನಿಗೆ ಚಾಕು ಹಾಕಿದ ತಮ್ಮ; ಇಬ್ಬರು ಆರೋಪಿಗಳ ಬಂಧನ

Exit mobile version