Site icon Vistara News

Murder Case | ಸಹೋದರಿಗೆ ಪದೇಪದೆ ಕಿರುಕುಳ ನೀಡುತ್ತಿದ್ದವನನ್ನು ಛತ್ರಿಯ ರಾಡ್‌ನಿಂದ ಇರಿದು ಕೊಂದ ಯುವಕ

kengeri murder: sathish and venkatesh

ಬೆಂಗಳೂರು: ಸಹೋದರಿಯ ಜತೆ ಅಕ್ರಮ ಸಂಬಂಧ ಇಟ್ಟುಕೊಂಡು, ಆ ಕಾರಣಕ್ಕೆ ಪದೇಪದೆ ಕಿರುಕುಳ ನೀಡುತ್ತಿದ್ದ ದುಷ್ಟನೊಬ್ಬನನ್ನು ಯುವಕನೊಬ್ಬ ಛತ್ರಿಯ ರಾಡ್‌ನಿಂದ ಚುಚ್ಚಿ ಕೊಲೆ ಮಾಡಿದ್ದಾನೆ (Murder Case). ಕೆಂಗೇರಿ ಪೊಲೀಸ್‌ ಠಾಣೆ ವ್ಯಾಪ್ತಿಯ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಕೊಲೆಯಾದವನು ಸತೀಶ ಮತ್ತು ಕೊಲೆ ಮಾಡಿದವನು ವೆಂಕಟೇಶ ಎಂದು ಗುರುತಿಸಲಾಗಿದೆ.

ಕೊಲೆಯಾದ ಸತೀಶನಿಗೆ ವೆಂಕಟೇಶನ ಸಹೋದರಿಯ ಜತೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಆದರೆ, ಆತನ ಕಿರಿಕಿರಿ ತಾಳಲಾಗದೆ ಆಕೆ ಆತನಿಗೆ ಇನ್ನು ಮುಂದೆ ಮನೆಗೆ ಬರಬಾರದು ಎಂದು ತಾಕೀತು ಮಾಡಿದ್ದಳು. ಕಳೆದ ಕೆಲವು ಸಮಯದಿಂದಲೇ ಅವರಿಬ್ಬರ ನಡುವೆ ಜಗಳ ನಡೆಯುತ್ತಿತ್ತು.

ಆದರೆ, ಸತೀಶ ಆಕೆಯ ಮಾತು ಕೇಳದೆ ಪದೇಪದೆ ಮನೆಗೆ ಬಂದು ಕಿರುಕುಳ ನೀಡುತ್ತಿದ್ದ. ಅಕ್ಕಪಕ್ಕದ ಮನೆಯವರ ಮುಂದೆ ಕೆಟ್ಟದಾಗಿ ಮಾತನಾಡುತ್ತಿದ್ದ. ಈ ನಡುವೆ, ಮಹಿಳೆ ಕೆಲಸ ಮಾಡುವ ಟೀ ಅಂಗಡಿಯ ಬಳಿಗೆ ಬಂದೂ ಕಿರಿಕ್ ಮಾಡಿದ್ದ.

ಈ ವಿಚಾರದಲ್ಲಿ ಸತೀಶನಿಗೆ ಬುದ್ಧಿ ಹೇಳಲೆಂದು ಮಹಿಳೆಯ ಸಹೋದರ ವೆಂಕಟೇಶ ಕರೆಸಿಕೊಂಡಿದ್ದ. ನನ್ನ ತಂಗಿಯ ಸಹವಾಸ ಮಾಡಬೇಡ ಎಂದು ಬುದ್ಧಿ ಹೇಳಿದ. ಆಗ ಅವರಿಬ್ಬರ ನಡುವೆ ಕಿರಿಕ್ ಆಗಿತ್ತು. ಈ ನಡುವೆ, ವೆಂಕಟೇಶ್‌ ತನ್ನ ಆಟೋದಲ್ಲಿದ್ದ ಛತ್ರಿಯನ್ನು ತಂದು ಅದರ ರಾಡ್‌ನಿಂದ ವೆಂಕಟೇಶನಿಗೆ ಚುಚ್ಚಿದ. ಆಗ ಸತೀಶ್‌ ಸತ್ತುಬಿದ್ದಿದ್ದ.

ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಆರೋಪಿ ವೆಂಕಟೇಶ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ | Praveen Nettaru murder | ಪ್ರವೀಣ್‌ ನೆಟ್ಟಾರು ಕೊಲೆ: ತಲೆಮರೆಸಿಕೊಂಡಿರುವ ಇಬ್ಬರು ಪಿಎಫ್ಐ ನಾಯಕರಿಗಾಗಿ NIA ಶೋಧ

Exit mobile version