Site icon Vistara News

ಪತ್ನಿಯ ಅಂತ್ಯಸಂಸ್ಕಾರಕ್ಕೆ ಬಾರದ ಪತಿ; ಮನೆ ಎದುರೇ ಶವ ಇಟ್ಟು ಮನೆ ಕಡೆ ನಡೆದ ಗ್ರಾಮಸ್ಥರು!

women Suspicious death

ತುಮಕೂರು: ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ನರಸೀಪುರ ಗ್ರಾಮದಲ್ಲಿ ಗೃಹಿಣಿಯೊಬ್ಬಳು ಅನುಮಾನಸ್ಪಾದವಾಗಿ (Suspicious death) ಮೃತಪಟ್ಟಿದ್ದಾಳೆ. ಇತ್ತ ಪತ್ನಿ ಮೃತಪಟ್ಟಿದ್ದರೂ ಪತಿರಾಯ ಅಂತ್ಯಸಂಸ್ಕಾರಕ್ಕೆ ಬಾರದ ಹಿನ್ನೆಲೆ ಗ್ರಾಮಸ್ಥರು ಮನೆಯ ಎದುರೇ ಶವ ಇಟ್ಟು, ಮನೆ ಕಡೆ ನಡೆದಿದ್ದಾರೆ. ಕಲಾವತಿ (26) ಮೃತ ದುರ್ದೈವಿ.

ಸೋಮಶೇಖರ್ ಎಂಬಾತನೊಂದಿಗೆ ಕಲಾವತಿ ಮದುವೆ ಆಗಿದ್ದರು. ಆದರೆ ಇವರಿಬ್ಬರ ನಡುವೆ ಅನ್ಯೋನ್ಯತೆ ಅಷ್ಟಕಷ್ಟೇ ಇತ್ತು. ಇತ್ತೀಚೆಗೆ ಪತಿ ಸೋಮಶೇಖರ್‌ ಪರಸ್ತ್ರೀ ಸಹವಾಸ ಮಾಡಿದ್ದ. ಇದನ್ನೂ ಪ್ರಶ್ನಿಸಿದ್ದಕ್ಕೆ ಮನೆಯ ಪಕ್ಕದ ಶೆಡ್‌ನಲ್ಲಿ ಮತ್ತೊಬ್ಬಳನ್ನು ತಂದಿಟ್ಟುಕೊಂಡಿದ್ದ ಎನ್ನಲಾಗಿದೆ. ಈ ವಿಚಾರವಾಗಿ ಪದೇಪದೆ ಪತಿ-ಪತ್ನಿ ನಡುವೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.

ಇದೇ ವಿಚಾರಕ್ಕೆ ಮತ್ತೆ ಗಲಾಟೆ ನಡೆದು ಪತಿ ಸೋಮಶೇಖರ್‌ ಕಲಾವತಿಯನ್ನು ಬಾವಿಗೆ ತಳ್ಳಿ ಹತ್ಯೆ ಮಾಡಿದ್ದಾನೆ ಎಂದು ಮೃತ ಕುಟುಂಬಸ್ಥರು ಆರೋಪಿಸಿದ್ದಾರೆ. ಅಕ್ರಮ ಸಂಬಂಧಕ್ಕೆ ಪತಿಯೇ ಪತ್ನಿ ಕೊಲೆ ಮಾಡಿ ಪರಾರಿ ಆಗಿದ್ದಾನೆ ಎಂದು ಕಿಡಿಕಾರಿದ್ದಾರೆ.

ಬೇತಾಳನಂತೆ ಬೆನ್ನು ಬಿದ್ದ ನೋವು, ಸಂಕಟ ತಾಳಲಾರದೆ ದಂಪತಿ ವಿಷ ಸೇವಿಸಿ ಆತ್ಮಹತ್ಯೆ

ಜೀವನದಲ್ಲಿ ಸದಾ ಒಂದಿಲ್ಲೊಂದು ಸೋಲು, ಸಂಕಟ, ಹತಾಶೆಗಳಿಂದ ಕಂಗಾಲಾಗಿದ್ದ ದಂಪತಿ ವಿಷ ಸೇವಿಸಿ (couple end life) ಆತ್ಮಹತ್ಯೆ (Self Harming) ಮಾಡಿಕೊಳ್ಳುವ ಮೂಲಕ ಈ ಬದುಕಿನಿಂದ ಮುಕ್ತಿ ಪಡೆದಿದ್ದಾರೆ. ಮಂಡ್ಯ ಜಿಲ್ಲೆಯ (Mandya news) ಮಳವಳ್ಳಿ ಪಟ್ಟಣದ ಎನ್.ಇ.ಎಸ್. ಬಡಾವಣೆಯಲ್ಲಿ ಈ ಘಟನೆ ನಡೆದಿದೆ.

ಎನ್.ಇಎಸ್‌ ಬಡಾವಣೆಯ ನಿವಾಸಿಗಳಾದ ರಾಜೇಶ್(45), ಸುಧಾ(40) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಜೀವನದಲ್ಲಿ ಜಿಗುಪ್ಸೆ ಹೊಂದಿದ್ದ ಅವರು ಇನ್ನು ಬದುಕೇ ಬೇಡ ಎಂಬ ತೀರ್ಮಾನಕ್ಕೆ ಬಂದು ವಿಷ ಸೇವಿಸಿ ಪ್ರಾಣ ಕಳೆದುಕೊಂಡಿದ್ದಾರೆ.

ರಾಜೇಶ್‌ ಅವರು ವೃತ್ತಿಯಲ್ಲಿ ಅಕ್ಕಸಾಲಿಗರಾಗಿದ್ದರು. ಉದ್ಯೋಗದಲ್ಲಿ ಅವರಿಗೆ ದೊಡ್ಡ ಏಳಿಗೆ ಇರಲಿಲ್ಲ. ಸೋಲು ತನ್ನನ್ನು ಬೆನ್ನು ಹತ್ತಿದೆ ಎಂದು ಅವರು ಅಂದುಕೊಳ್ಳುತ್ತಿದ್ದರು. ಇದರ ನಡುವೆ ಅವರ ಕಾಲಿಗೆ ಗಾಯವಾಗಿ ಕಾಲನ್ನೇ ಕತ್ತರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೆಂಥ ಅಗ್ನಿಪರೀಕ್ಷೆ ಎಂದು ಅವರು ನೋವಿನಲ್ಲಿದ್ದರು. ಕಾಲು ಕತ್ತರಿಸಿದ್ದರಿಂದ ಚಿನ್ನದ ಕೆಲಸ ಮಾಡುವುದು ಕೂಡಾ ಕಷ್ಟವಾಗುತ್ತಿತ್ತು.

ಹಾಗಂತ ಅವರೇನೂ ತೀರಾ ಬಡವರಲ್ಲ. ಸಾಕಷ್ಟು ಸ್ಥಿತಿವಂತರೇ ಇದ್ದಾರೆ. ಆದರೆ ಮುಂದೆ ಬದುಕು ಕಷ್ಟವಾದೀತು ಎಂಬ ಭಯವೇ ಅವರನ್ನು ಸಾವಿನ ಕಡೆಗೆ ತಳ್ಳಿದೆ.

ತಾನು ಈಗಲೇ ಹೀಗಾದರೆ ಮುಂದೆ ಜೀವನ ನಡೆಸುವುದು ಹೇಗೆ ಎಂಬ ಭಯ ಅವರನ್ನು ಕಾಡುತ್ತಿತ್ತು. ಸಾಲದ್ದಕ್ಕೆ ಅವರಿಗೆ ಮಕ್ಕಳೂ ಇರಲಿಲ್ಲ. ಹಾಗಿದ್ದರೆ ಮುಂದೆ ಯಾರು ನೋಡಿಕೊಳ್ಳುತ್ತಾರೆ ಎಂದು ಅವರು ದಿಗಿಲುಕೊಂಡಿದ್ದರು. ಇದೇ ಸಂಕಟದಲ್ಲಿ ಮುಳುಗಿದ್ದರು ದಂಪತಿ. ಸೋಲು, ಮಕ್ಕಳಾಗದ ಚಿಂತೆ ಜೊತೆಗೆ ಕಾಲು ಕಳೆದುಕೊಂಡು ಬದುಕು ಇನ್ನಷ್ಟು ದಾರುಣವಾದೀತು ಎಂಬ ಭಯದಲ್ಲಿ ಅವರು ಪ್ರಾಣವನ್ನೇ ಕಳೆದುಕೊಳ್ಳಲು ನಿರ್ಧರಿಸಿದರು ಎನ್ನಲಾಗಿದೆ.

ಅವರು ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗಿದೆ. ಬೆಳಗ್ಗೆ ಅಕ್ಕಪಕ್ಕದವರು ಗಮನಿಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಮಳವಳ್ಳಿ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version