Site icon Vistara News

ಮಂಡ್ಯದಲ್ಲಿ ಸಾಲಬಾಧೆ ತಾಳಲಾರದೆ ರೈತನ ಆತ್ಮಹತ್ಯೆ

ಮಂಡ್ಯ: ಜಿಲ್ಲೆ ಪಾಂಡವಪುರ ತಾಲೂಕಿನ ಕೆ‌.ಬೆಟ್ಟಹಳ್ಳಿ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ರೈತ ಕೆ.ಬೆಟ್ಟಹಳ್ಳಿ ಕುಮಾರ್‌(48) ಆತ್ಮಹತ್ಯೆ ಮಾಡಕೊಂಡಿದ್ದಾರೆ. ತಮ್ಮ ಜಮೀನಿನಲ್ಲಿದ್ದ ಹಿಪ್ಪೆ ಮರಕ್ಕೆ ನೇಣು ಬಿಗಿದು ರೈತನ ಆತ್ಮಹತ್ಯೆ ಮಾಡಕೊಂಡಿದ್ದಾರೆ. ಯಳವೇಗೌಡ ಅವರ ಪುತ್ರ ಕೆ.ಬೆಟ್ಟಹಳ್ಳಿ ಕುಮಾರ್ (48) 1.10 ಎಕರೆ ಖುಷ್ಕಿ ಜಮೀನು ಹೊಂದಿದ್ದು, ತರಕಾರಿ ಬೆಳೆದಿದ್ದರು. ಕೆ.ಬೆಟ್ಟಹಳ್ಳಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ₹50 ಸಾವಿರ, ಕೆ.ಬೆಟ್ಟಹಳ್ಳಿ ಡಿಸಿಸಿ ಬ್ಯಾಂಕ್ ನಲ್ಲಿ ಚಿನ್ನಾಭರಣಗಳನ್ನು ಅಡಮಾನವಿಟ್ಟು ₹1.25ಲಕ್ಷ ಸಾಲ, ಸ್ವಸಹಾಯ ಸಂಘ ಸಂಸ್ಥೆಗಳಿಂದ ₹25 ಸಾವಿರ ಸಾಲ ಸೇರಿದಂತೆ ಒಟ್ಟು ₹2 ಲಕ್ಷ ಸಾಲ ಮಾಡಿದ್ದರು. ಮೃತ ರೈತನಿಗೆ ತಾಯಿ, ಪತ್ನಿ, ಓರ್ವ ಪುತ್ರಿ ಇದ್ದಾರೆ.

ಇದನ್ನೂ ಓದಿ | ಹುಡುಗಿ ಪೋಟೋ ತೋರಿಸಿ ಹತ್ಯೆ: ಬಿಜೆಪಿ ಕಾರ್ಯಕರ್ತನ ಸಾವಿನ ರಹಸ್ಯ ಬಯಲು

ಮೃತ ರೈತನ ಶವವನ್ನು ಪಾಂಡವಪುರ ಉಪವಿಭಾಗೀಯ ಆಸ್ಪತ್ರೆ ಶವಗಾರದಲ್ಲಿರಿಸಲಾಗಿದ್ದು, ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ | ಸಚಿವ ಈಶ್ವರಪ್ಪ ವಿರುದ್ಧ ಆರೋಪ ಮಾಡಿದ್ದ ಗುತ್ತಿಗೆದಾರ ಆತ್ಮಹತ್ಯೆ; ಉಡುಪಿಯಲ್ಲಿ ಸಂತೋಷ್‌ ಸಾವು

Exit mobile version