Site icon Vistara News

Road Accident: ಮಾನವೀಯತೆ ಮರೆತ ಜನ, ಸ್ಥಳದಲ್ಲೇ ಹೋಯ್ತು ಶಿಕ್ಷಕನ ಪ್ರಾಣ

mandya teacher death

ಮಂಡ್ಯ: ಬೈಕ್‌ನಿಂದ ಆಯ ತಪ್ಪಿ ಬಿದ್ದು ಶಿಕ್ಷಕರೊಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ (Road Accident). ಈ ಸಂದರ್ಭದಲ್ಲಿ ಸ್ವಲ್ಪ ಹೊತ್ತು ಗಾಯಾಳು ಶಿಕ್ಷಕ ಸ್ಥಳದಲ್ಲೇ ಬಿದ್ದು ಒದ್ದಾಡುತ್ತಿದ್ದರೂ ನೆರವಿಗೆ ಯಾರೂ ಬಾರದೆ ಹೋಗಿದ್ದು ಕಂಡುಬಂದಿದೆ.

ಮಂಡ್ಯ ತಾಲೂಕಿನ ಕೆರೆಗೋಡು ಗ್ರಾಮದ ಬಳಿ ನಿನ್ನೆ ಅಪಘಾತ ಸಂಭವಿಸಿತ್ತು. ಮಂಡ್ಯ ತಾಲೂಕಿನ ಹಲ್ಲೇಗೆರೆ ಗ್ರಾಮದ ಪರಿಣಿತ ‌ವಿದ್ಯಾಸಂಸ್ಥೆಯ ಶಿಕ್ಷಕ ರವಿ (45) ಮಂಡ್ಯದಿಂದ ಹಲ್ಲೇಗೆರೆ ಗ್ರಾಮಕ್ಕೆ ಬೈಕ್‌ ಚಲಾಯಿಸುತ್ತಿದ್ದಾಗ ಆಯ ತಪ್ಪಿ ಬಿದ್ದಿದ್ದರು. ಹೆಲ್ಮೆಟ್‌ ಧರಿಸದ ಕಾರಣ ತಲೆಗೆ ಏಟಾಗಿತ್ತು.

ಅಪಘಾತದ ನಂತರ ಕೆಲ ಕಾಲ ಶಿಕ್ಷಕನ ಜೀವ ಇತ್ತು. ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದರು. ಆದರೆ ಆಸ್ಪತ್ರೆಗೆ ಸಾಗಿಸಲು ಸ್ಥಳದಲ್ಲಿ ನೆರೆದಿದ್ದ ಜನ ಹಿಂದೇಟು ಹಾಕಿದ್ದರು. ಈ ಸಂದರ್ಭದಲ್ಲಿ ಮಹಿಳೆಯೊಬ್ಬರು, ಯಾರಾದರೂ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಆಟೋ ದುಡ್ಡು ನಾನೇ ಕೊಡ್ತೀನಿ ಎಂದು ಬೇಡಿಕೊಂಡಿದ್ದರು. ಆದರೆ ಯಾರೂ ಮುಂದೆ ಬಂದಿರಲಿಲ್ಲ. ಕೆರೆಗೋಡು ಪೊಲೀಸ್ ಠಾಣೆಯೂ ಸಮೀಪದಲ್ಲೇ ಇತ್ತು. ಸ್ಥಳಕ್ಕೆ ಪೊಲೀಸರು ಬರುವುದು ಕೂಡ ತಡವಾಗಿದೆ. ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದರೆ ಜೀವ ಉಳಿಯುತ್ತಿತ್ತು ಎನ್ನಲಾಗಿದೆ.

ಇದನ್ನೂ ಓದಿ: Road Accident: ಚಿಕ್ಕಜೋಗಿಹಳ್ಳಿಯಲ್ಲಿ ಅಪೆ ಆಟೋ ಪಲ್ಟಿ ಒರ್ವ ವ್ಯಕ್ತಿ ಸಾವು

Exit mobile version