Site icon Vistara News

Road accident | ಮಂಗಳೂರಿನಲ್ಲಿ ಬೈಕ್‌ ಸ್ಕಿಡ್‌ ಆಗಿ ತಲೆ ಡಿವೈಡರ್‌ಗೆ ಬಡಿದು ಯುವಕ ದಾರುಣ ಮೃತ್ಯು

skid death Mangalore

ಮಂಗಳೂರು: ಬೈಕ್ ಸ್ಕಿಡ್ ಆಗಿ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ (Road accident) ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪಣಂಬೂರಿನ ಐಎಂಸಿ (ಇಂಡಿಯನ್ ಮೊಲಾಸೆಸ್ ಕಂಪೆನಿ)ಯ ನಾಲ್ಕನೇ ಟರ್ಮಿನಲ್ ಉದ್ಯೋಗಿಯಾಗಿರುವ ಸುಜಿತ್‌ ರಾಜ್‌ (೨೮) ಮಂಗಳವಾರ ಪಡೀಲ್‌ನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮಾರಿಪಳ್ಳ ನಿವಾಸಿ ಮಾಜಿ ಸೈನಿಕರ ಪುತ್ರ ಸುಜಿತ್ ರಾಜ್ (28) ಅವರು ಜ.16ರಂದು ರಾತ್ರಿ ಪಾಳಿ ಕರ್ತವ್ಯ ಮುಗಿಸಿ ಪಣಂಬೂರಿನಿಂದ ಮಾರಿಪಳ್ಳದ ಮನೆ ಕಡೆಗೆ ಹಿಂತಿರುಗುತ್ತಿದ್ದರು. ಆಗ ರಾಷ್ಟ್ರೀಯ ಹೆದ್ದಾರಿಯ ವಳಚ್ಚಿಲ್ ಸಮೀಪ ಇವರಿದ್ದ ಪಲ್ಸರ್‌ ಬೈಕ್ ಸ್ಕಿಡ್ ಆಗಿ ರಸ್ತೆಗೆ ಎಸೆಯಲ್ಪಟ್ಟ ಸುಜಿತ್ ರಾಜ್ ತಲೆ ಡಿವೈಡರ್‌ಗೆ ಬಡಿದಿದೆ. ತಕ್ಷಣ ಸ್ಥಳೀಯರು ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಲ್ಲಿ ಮಂಗಳವಾರ ಬೆಳಗ್ಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತರು ತಾಯಿ, ಮೂವರು ಸಹೋದರರನ್ನು ಅಗಲಿದ್ದಾರೆ. ಕಂಕನಾಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Bike Accident | ಓವರ್ ಟೇಕ್ ಮಾಡುವಾಗ ಲಾರಿಗೆ ಡಿಕ್ಕಿ ಹೊಡೆದು ಇಬ್ಬರು ಬೈಕ್‌ ಸವಾರರ ಸಾವು

Exit mobile version