Site icon Vistara News

Manoj Bhandage | ಆರ್‌ಸಿಬಿ ತಂಡಕ್ಕೆ ಮನೋಜ್ ಭಾಂಡಗೆ ಆಯ್ಕೆ; ಸಿಂಧನೂರಿನಲ್ಲಿ ಸಂಭ್ರಮಾಚರಣೆ

Manoj Bhandage

ರಾಯಚೂರು: ಐಪಿಎಲ್‌ ೧6ನೇ ಆವೃತ್ತಿಗಾಗಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಮನೋಜ್ ಭಾಂಡಗೆ (Manoj Bhandage) ಆಯ್ಕೆಯಾದ ಹಿನ್ನೆಲೆಯಲ್ಲಿ ರಾಯಚೂರಿನ ಸಿಂಧನೂರಿನಲ್ಲಿ ಕ್ರಿಕೆಟ್‌ ಅಭಿಮಾನಿಗಳು ಬೈಕ್ ರ‍್ಯಾಲಿ ನಡೆಸಿ ಸಂಭ್ರಮಾಚರಣೆ ನಡೆಸಿದರು.

ಕೇರಳದ ಕೊಚ್ಚಿಯಲ್ಲಿ ಶುಕ್ರವಾರ ಮಿನಿ ಹರಾಜು ಪ್ರಕ್ರಿಯೆ ನಡೆಯಿತು. ಹರಾಜಿನಲ್ಲಿ ಸಿಂಧನೂರಿನ ಮನೋಜ್ ಭಾಂಡಗೆಯನ್ನು 20 ಲಕ್ಷ ರೂ.ಗಳಿಗೆ ಆರ್‌ಸಿಬಿ ಪ್ರಾಂಚೈಸಿ ಖರೀದಿಸಿದೆ. ಹೀಗಾಗಿ ಸ್ಥಳೀಯರು ಸಿಂಧನೂರಿನ ಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.

ಕೆಪಿಎಲ್, ಮಹಾರಾಜ ಟ್ರೋಫಿ, ಸಯ್ಯದ್ ಮುಷ್ತಾಕ್ ಅಲಿ ಟ್ರೋಪಿಯಲ್ಲಿ ಆಲ್‌ರೌಂಡರ್‌ ಮನೋಜ್ ಭಾಂಡಗೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ಹಾಗೂ ಬಲಗೈ ಮಧ್ಯಮ ವೇಗದ ಬೌಲರ್ ಆಗಿರುವ ಈ ಯುವ ಕ್ರಿಕೆಟಿಗ 16 ಮತ್ತು 19 ವರ್ಷದೊಳಗಿನ ರಾಜ್ಯ ತಂಡ ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡಿದ್ದರು.

ಇದನ್ನೂ ಓದಿ | IPL Auction | ಹೊಸಬರು, ಹಳಬರು ಸೇರಿ ಹೊಸ ಬಳಗ; ಐಪಿಎಲ್​ನ 10 ತಂಡಗಳ ಸದಸ್ಯರು ಇವರು

Exit mobile version