Site icon Vistara News

Amrit Mahotsav | ಡಾ.ರಾಜ್ ಕುಟುಂಬಕ್ಕೆ ರಾಷ್ಟ್ರಧ್ವಜ ನೀಡಿದ ಸಚಿವ ಅಶ್ವತ್ಥನಾರಾಯಣ

Amrit Mahotsav

ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ‘ಹರ್ ಘರ್ ತಿರಂಗಾ’ ಅಭಿಯಾನದ ಅಂಗವಾಗಿ ನಗರದಲ್ಲಿ ವರನಟ ದಿವಂಗತ ಡಾ.ರಾಜಕುಮಾರ್ ಅವರ ಕುಟುಂಬಸ್ಥರಿಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಂಗಳವಾರ ರಾಷ್ಟ್ರಧ್ವಜ ಹಸ್ತಾಂತರಿಸಿದರು.

ಮೊದಲಿಗೆ ಮಲ್ಲೇಶ್ವರಂ ಕ್ಷೇತ್ರದ ವ್ಯಾಪ್ತಿಯಲ್ಲಿನ ಪುನೀತ್‌ ರಾಜ್‌ ಕುಮಾರ್ ಅವರ ನಿವಾಸಕ್ಕೆ‌ ತೆರಳಿ ಪುನೀತ್ ಅವರ ಪತ್ನಿ ಅಶ್ವಿನಿ ಅವರಿಗೆ ರಾಷ್ಟ್ರ ಧ್ವಜ ನೀಡಿದರು. ನಂತರ ನಟ ರಾಘವೇಂದ್ರ ರಾಜಕುಮಾರ್ ಅವರ ಮನೆಗೆ ತೆರಳಿ ತ್ರಿವರ್ಣ ಧ್ವಜವನ್ನು ಕೈಗಿತ್ತರು. ಈ ವೇಳೆ ನಟ ರಾಘವೇಂದ್ರ ರಾಜಕುಮಾರ್‌, ನಟ ವಿನಯ್‌ ರಾಜಕುಮಾರ್‌ ಹಾಗೂ ಕುಟುಂಬಸ್ಥರಿಗೆ ಹರ್ ಘರ್ ತಿರಂಗಾ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದ ಸಚಿವರು, ಅಭಿಯಾನದ ಯಶಸ್ಸಿಗೆ ಸಹಕರಿಸುವಂತೆ ಕೋರಿದರು.

ಇದನ್ನೂ ಓದಿ | ‌Amrit Mahotsav | ಹರ್‌ ಘರ್‌ ತಿರಂಗಾ ಅಭಿಯಾನ: ಉಷಾ ಮಂಗೇಶ್ಕರ್‌ಗೆ ತ್ರಿವರ್ಣ ಧ್ವಜ ನೀಡಿದ ಸಿ.ಟಿ ರವಿ

Exit mobile version