Site icon Vistara News

KJ George: ಬಿಜೆಪಿಯವರು ಸುಳ್ಳನ್ನು‌ ನೂರು ಬಾರಿ ಹೇಳಿ ನಿಜ ಮಾಡುತ್ತಾರೆ ಎಂದ ಸಚಿವ ಕೆ.ಜೆ. ಜಾರ್ಜ್

KJ George

ಕೋಲಾರ: ಬಿಜೆಪಿಯವರು (BJP) ಸುಳ್ಳನ್ನು‌ ನೂರು ಬಾರಿ ಹೇಳಿ ನಿಜ ಮಾಡುತ್ತಾರೆ. ಮತದಾರರು ಇವರಿಗೆ ಸರಿಯಾದ ಬುದ್ಧಿಯನ್ನು ಕಲಿಸಿದ್ದಾರೆ. ಈಗ ಬಿಜೆಪಿಯವರು ಕಂಗಾಲಾಗಿದ್ದು, ಏನು ಮಾಡಬೇಕು ಎಂದು ತೋಚುತಿಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ (KJ George) ತಿಳಿಸಿದ್ದಾರೆ.

ಇದನ್ನೂ ಓದಿ: DK Shivakumar: ಚನ್ನಪಟ್ಟಣದ ಅಭ್ಯರ್ಥಿ ನಾನೇ: ಡಿಸಿಎಂ ಡಿ.ಕೆ. ಶಿವಕುಮಾರ್

ಕೋಲಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಚಿವ ಕೆ.ಜೆ. ಜಾರ್ಜ್ ಅವರು, ಇನ್ನು ಹೆಚ್ಚು ಅಂದರೆ ಈ ಕೇಂದ್ರ ಸರ್ಕಾರ ನಾಲ್ಕು ತಿಂಗಳು ಮಾತ್ರ ಇರುತ್ತದೆ. ಮೋದಿಯವರು ಅಧಿಕಾರದಿಂದ ಇಳಿಯುತ್ತಾರೆ ಎಂದು ಭವಿಷ್ಯ ನುಡಿದರು.

ಇದನ್ನೂ ಓದಿ: Kannada New Movie: ವಿಕ್ಕಿ ವರುಣ್-ಧನ್ಯಾ ರಾಮಕುಮಾರ್ ಅಭಿನಯದ “ಕಾಲಾಪತ್ಥರ್” ಚಿತ್ರದ “ಬಾಂಡ್ಲಿ ಸ್ಟವ್” ಸಾಂಗ್‌ ರಿಲೀಸ್‌

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರಿಗೆ ಇನ್ನು 15 ವರ್ಷಗಳ ಕಾಲ ಒಳ್ಳೆಯ ಟೈಂ ಇದ್ದು, ಈ ದೇಶದ ಪ್ರಧಾನಿಯಾಗಿ ಅವರು ಬರುತ್ತಾರೆ ಎಂದ ಅವರು, ಜನ ನಮ್ಮೊಂದಿಗೆ ಇದ್ದಾರೆ. ಕಾಂಗ್ರೆಸ್‌ ಸರ್ಕಾರದ ಒಳ್ಳೆಯ ಯೋಜನೆಗಳು ಕೈಹಿಡಿಯಲಿವೆ ಎಂದು ಅವರು ಇದೇ ವೇಳೆ ತಿಳಿಸಿದರು.

Exit mobile version