Site icon Vistara News

Shivaram Hebbar: ವಿಸ್ತಾರ ನ್ಯೂಸ್ ಕಚೇರಿಗೆ ಭೇಟಿ ನೀಡಿದ ಸಚಿವ ಶಿವರಾಮ್‌ ಹೆಬ್ಬಾರ್

Shivaram Hebbar

#image_title

ಬೆಂಗಳೂರು: ರಾಜ್ಯದ ಕಾರ್ಮಿಕ ಸಚಿವರಾದ ಶಿವರಾಮ್‌ ಹೆಬ್ಬಾರ್‌ (Shivaram Hebbar) ಅವರು ಸೋಮವಾರ ವಿಸ್ತಾರ ನ್ಯೂಸ್‌ ಕಚೇರಿಗೆ ಭೇಟಿ ನೀಡಿ, ಮಾಧ್ಯಮ ಸಂಸ್ಥೆಯ ವಿವಿಧ ವಿಭಾಗಗಳು, ಸಂಸ್ಥೆಯ ಕಾರ್ಯನಿರ್ವಹಣೆ, ಭವಿಷ್ಯದ ಯೋಜನೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಸ್ತಾರ ನ್ಯೂಸ್‌ ವತಿಯಿಂದ ಶಿವರಾಮ್‌ ಹೆಬ್ಬಾರ್‌ ಅವರನ್ನು ಸನ್ಮಾನಿಸಲಾಯಿತು.

ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಮತ್ತು ಸಿಇಒ ಹರಿಪ್ರಕಾಶ್ ಕೋಣೆಮನೆ ಅವರು ಶಿವರಾಮ್‌ ಹೆಬ್ಬಾರ್ ಅವರಿಗೆ ವಿಸ್ತಾರ ಮೀಡಿಯಾ ಸಂಸ್ಥೆಯ ಟಿವಿ ಚಾನೆಲ್, ವೆಬ್‌ಸೈಟ್‌, ಯುಟ್ಯೂಬ್ ಚಾನೆಲ್, ವಿಸ್ತಾರ ಪ್ರಕಾಶನ‌ ಸೇರಿ ಹಲವು ಪ್ರಯೋಗಗಳ ಕುರಿತು ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು. ಇದೇ ವೇಳೆ ಸಚಿವರನ್ನು ವಿಸ್ತಾರ ಮೀಡಿಯಾ ವತಿಯಿಂದ ಸನ್ಮಾನಿಸಲಾಯಿತು.

ವಿಸ್ತಾರ ವಾಹಿನಿಯ ಕಾರ್ಯನಿರ್ವಹಣೆ ಕುರಿತು ಸಚಿವರಿಗೆ ಮಾಹಿತಿ ನೀಡಿದ ಹರಿಪ್ರಕಾಶ್‌ ಕೋಣೆಮನೆ.

ವಿಸ್ತಾರ ನ್ಯೂಸ್‌ನ ಬಗೆಬಗೆಯ ಪ್ರಯೋಗಗಳು, ಜನಪರ ಕಾರ್ಯಕ್ರಮಗಳು, ಚಾನೆಲ್‌ನಲ್ಲಿರುವ ಅತ್ಯಾಧುನಿಕ ಸ್ಟುಡಿಯೋ, ತಂತ್ರಜ್ಞಾನ ಅಚ್ಚರಿ ಮೂಡಿಸುವಂತಿದೆ ಎಂದು ಹೆಬ್ಬಾರ್‌ ಅವರು ಶ್ಲಾಘಿಸಿದರು. ಸಂಸ್ಥೆ ಇನ್ನಷ್ಟು ಯಶಸ್ಸು ಕಾಣಲಿ ಎಂಬುದಾಗಿಯೂ ಶುಭ ಹಾರೈಸಿದರು.

ಇದನ್ನೂ ಓದಿ: B L Shankar : ವಿಸ್ತಾರ ನ್ಯೂಸ್ ಕಚೇರಿಗೆ ಭೇಟಿ ನೀಡಿದ ಬಿ ಎಲ್ ಶಂಕರ್

Exit mobile version