Site icon Vistara News

ಆರ್‌ಎಸ್‌ಎಸ್‌ ಚಡ್ಡಿ ಸುಟ್ಟರೆ ಸಿದ್ದರಾಮಯ್ಯ ಭಸ್ಮ ಆಗ್ತಾರೆ ಎಂದ ರೇಣುಕಾಚಾರ್ಯ

Renukacharya

ದಾವಣಗೆರೆ: ಆರ್‌ಎಸ್‌ಎಸ್‌ ಚಡ್ಡಿ ದೇಶವನ್ನು ಕಾಯುತ್ತಿದೆ, ಸಂಘದ ಕಾರ್ಯಕರ್ತರು ತಮ್ಮನ್ನು ದೇಶಕ್ಕೆ ಅರ್ಪಿಸಿಕೊಂಡಿದ್ದಾರೆ. ಪ್ರಕೃತಿ ವಿಕೋಪ ಸೇರಿ ವಿವಿಧ ಸಂದರ್ಭದಲ್ಲಿ ಜನರನ್ನು ರಕ್ಷಣೆ ಮಾಡಿದ್ದಾರೆ. ಸಿದ್ದರಾಮಯ್ಯ, ಡಿಕೆಶಿಯವರೇ ನೀವು ಆರ್‌ಎಸ್‌ಎಸ್‌ ಕಚೇರಿಗೆ ಬಂದು ಚಡ್ಡಿ ಹಾಕಿಕೊಳ್ಳಿ, ಆಗ ಆರ್‌ಎಸ್‌ಎಸ್‌ ಸಂಸ್ಕೃತಿ ಗೊತ್ತಾಗುತ್ತದೆ ಎಂದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಜಿಲ್ಲೆಯ ಹೊನ್ನಾಳಿಯಲ್ಲಿ ಭಾನುವಾರ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಿಗೆ ಬಹಿರಂಗ ಸವಾಲ್ ಹಾಕುತ್ತೇನೆ. ಆರ್‌ಎಸ್‌ಎಸ್‌ ದೇಶಾಭಿಮಾನ ಹೇಳಿಕೊಡುತ್ತದೆ. ಕಾಂಗ್ರೆಸ್ ಭಯೋತ್ಪಾದನೆ ಹೇಳಿಕೊಡುತ್ತದೆ. ಕೈ ಪಕ್ಷದವರು ಭಯೋತ್ಪಾದಕರು ಹಾಗೂ ಉಗ್ರಗಾಮಿಗಳನ್ನು ಆರಾಧಿಸುತ್ತಾರೆ ಎಂದರು.

ಆರ್‌ಎಸ್‌ಎಸ್‌ ಚಡ್ಡಿ ಸುಟ್ಟರೆ ಸಿದ್ದರಾಮಯ್ಯನವರೇ ಭಸ್ಮ ಆಗುತ್ತಾರೆ. ಭಸ್ಮಾಸುರ ಎಲ್ಲರ ತಲೆಮೇಲೆ ಕೈ ಇಟ್ಟು, ಕೊನೆಗೆ ತನ್ನ ಮೇಲೆ ತಾನು ಕೈ ಇಟ್ಕೊಂಡು ಭಸ್ಮ ಆದ ಹಾಗೆ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಭಸ್ಮ ಆಗುತ್ತಾರೆ. ಕಾಂಗ್ರೆಸ್ ದೇಶದಲ್ಲಿ ಅಡ್ರೆಸ್ ಇಲ್ಲ, ರಾಜ್ಯದಲ್ಲೂ ಇಲ್ಲ. ಎಂದು ಗೇಲಿ ಮಾಡಿದರು.

ಇದನ್ನೂ ಓದಿ | ಡಿಕೆಶಿ, ಸಿದ್ದುಗೆ ಸದ್ಬುದ್ಧಿ ಕೊಡವ್ವ ತಾಯಿ: ಬನಶಂಕರಿಗೆ ಕಾಂಗ್ರೆಸ್‌ ನಾಯಕನ ಮೊರೆ

Exit mobile version