Site icon Vistara News

Muharram 2023 : ಮೋದಿ ಮತ್ತೆ ಪ್ರಧಾನಿ ಆಗ್ತಾರೆ; ಲಾಲ್​ಸಾಬ್​ ಅಜ್ಜನ ಭವಿಷ್ಯದ ಗುಟ್ಟು ಇದೇನಾ?

lalasabh

ಬಾಗಲಕೋಟೆ: ಬಾದಾಮಿ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಲಾಲಸಾಬವಲಿ ದರ್ಗಾದಲ್ಲಿ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ(Muharram 2023 ) ಲಾಲಸಾಬ್ ಅಜ್ಜ. ಭವಿಷ್ಯ ನುಡಿದಿದ್ದಾರೆ. ಅವರ ಭವಿಷ್ಯ ವಾಣಿಯನ್ನು ಜನರು ಬಗೆಬಗೆಯಾಗಿ ವಿಶ್ಲೇಷಣೆ ಮಾಡುತ್ತಿದ್ದು ಮೋದಿ ಮುಂದಿನ ಚುನಾವಣೆ ಬಳಿಕವೂ ಪ್ರಧಾನಿಯಾಗ್ತಾರೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಮುಂದೆ ಮಕ್ಕಳಿಗೆ ಗಂಡಾಂತರವಿದೆ ಎಂದೂ ಹೇಳಲಾಗುತ್ತಿದೆ.

ಲಾಲಸಾಬ್ ಅಜ್ಜ.ನ ಭವಿಷ್ಯ ಫುಲ್ ವೈರಲ್​ ಆಗಿದ್ದು, ಈ ಕುರಿತು ಬಗೆಬಗೆಯ ಚರ್ಚೆಗಳು ನಡೆದಿದೆ. ಪ್ರತಿ ವರ್ಷ ಇಲ್ಲಿ ಅಜ್ಜ ಭವಿಷ್ಯ ನುಡಿಯುತ್ತಾರೆ. ಅಂತೆಯೇ ಈ ಬಾರಿ ಅವರು ಕೇಸರಿ ಶಾಲು ಹಿಡಿದುಕೊಂಡು ಭವಿಷ್ಯ ನುಡಿದಿದ್ದಾರೆ

ಈ ಬಾರಿ ಕುರ್ಚಿ ಗಟ್ಟಿಯಾಗಿ ಉಳಿಯುತ್ತದೆ ಎಂಬ ಮಾತನ್ನು ಮೋದಿ ಅಧಿಕಾರ ಮುಂದುವರಿಯುತ್ತದೆ ಎಂಬುದಕ್ಕೆ ಹೋಲಿಸಲಾಗಿದೆ. ಇದರ ಸಲುವಾಗಿ ಜನ ಬಹಳ ಜನ ಬಡಿದಾಡುತ್ತಿದ್ದಾರೆ. ಹೆಣಗಳು ಬೀಳುತ್ತಿವೆ ಎಂಬುದು ಅವರ ಮುಂದಿನ ಮಾತಾಗಿದೆ.

ಇದನ್ನೂ ಓದಿ : Kukke Temple : ಕುಕ್ಕೆ ದೇವಳದಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಆಶ್ಲೇಷಾ ಬಲಿ ಸೇವೆ

ಅದರ ಜತೆಗೆ ದೇಶದಲ್ಲಿ ಮಕ್ಕಳ ಆರೋಗ್ಯಕ್ಕೆ ಗಂಡಾಂತರ ಇದೆ ಎಂದು ಅಜ್ಜ ಹೇಳಿದ್ದಾರೆ. ಈ ಗಂಡಾಂತರ ಗಾಳಿ ಅಥವಾ ನೀರಿನ ಮೂಲಕ ಎದುರಾಗಿ ಬರಲಿದೆ ಎಂದು ಹೇಳಿದ್ದಾರೆ. ಮುಂಗಾರು ಸುರಿದ ಕಾರಣ ಅರೆಬರೆ ಬೆಳೆ ಬಂದಿದೆ. ಹಿಂಗಾರು ಇದೇ ರೀತಿ ಆದರೂ ಬೆಳೆ ಕೊಡುತ್ತೇನೆ ಕೊಡುತ್ತೇನೆ ಎಂದು ಅಜ್ಜಯ್ಯ ಹೇಳಿದ್ದಾರೆ.

Exit mobile version