Site icon Vistara News

Molestation Case: ಮೊಬೈಲ್‌ ಕೊಡುವೆ ಬಾ ಎಂದ ಪ್ರಿಯಕರ; ಗೆಳೆಯನೊಂದಿಗೆ ಸೇರಿ ಅತ್ಯಾಚಾರ

Molestation Case in bengaluru

ಬೆಂಗಳೂರು: ಅವರಿಬ್ಬರ ನಡುವೆ ಪ್ರೀತಿ ಶುರುವಾಗಿ ಸರಿಯಾಗಿ ಒಂದು ವರ್ಷವೂ ಆಗಿರಲಿಲ್ಲ. ಆದರೆ ಪ್ರೀತಿಯಲ್ಲಿ ಬಿದ್ದಿದ್ದ ಆ ಯುವತಿ ಯುವಕನನ್ನು ಸಿಕ್ಕಾಪಟ್ಟೆ ಹಚ್ಚಿಕೊಂಡಿದ್ದಳು. ಪ್ರಿಯಕರ ಕರೆದನಲ್ಲ ಎಂದು ಬಸ್ ಹಿಡಿದು ಬೆಂಗಳೂರಿಗೆ ಬಂದವಳು, ಆತನ ಕರಾಳ ಮುಖ ಕಂಡು ಬೆಚ್ಚಿ ಬಿದ್ದಿದ್ದಾಳೆ. ಗೆಳೆಯನ ಜತೆ ಸೇರಿ ಪ್ರೇಯಸಿ ಮೇಲೆ ಅತ್ಯಾಚಾರಕ್ಕೆ ಮುಂದಾಗಿದ್ದ. ಈಗ ಇಬ್ಬರೂ ಪೊಲೀಸರ (Molestation Case) ಅತಿಥಿಯಾಗಿದ್ದಾರೆ.

ಪುರುಷೋತ್ತಮ್ ಹಾಗೂ ಚೇತನ್ ಬಂಧಿತ ಆರೋಪಿಗಳಾಗಿದ್ದಾರೆ. ಪ್ರಿಯಕರ ಪುರುಷೋತ್ತಮ್ ತುಮಕೂರಿನ ನಿವಾಸಿಯಾಗಿದ್ದು, ಅದೇ ಊರಿನಲ್ಲಿ ಮೊದಲ ವರ್ಷದ ಪ್ಯಾರಾ ಮೆಡಿಕಲ್ ಓದುತ್ತಿದ್ದ ಯುವತಿಯನ್ನು (19) ಪುಸಲಾಯಿಸಿ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದ.

ಈ ನಡುವೆ ಕಳೆದ ವಾರ ಪುರುಷೋತ್ತಮ್ ಯುವತಿಯ ಮೊಬೈಲ್ ಪಡೆದು ಬೆಂಗಳೂರಿಗೆ ಬಂದಿದ್ದ. ಯುವತಿ ಮೊಬೈಲ್ ಕೊಡುವಂತೆ ಕೇಳಿದಾಗ, ಬೆಂಗಳೂರಿಗೆ ಬಾ ಕೊಡುತ್ತೇನೆ ಎಂದಿದ್ದ. ಆತನ ಮಾತು ಕೇಳಿ ತುಮಕೂರಿನಿಂದ ಬೆಂಗಳೂರಿಗೆ ಯುವತಿ ಬಂದಿದ್ದಳು. ಹೀಗೆ ಬಂದವಳನ್ನು ಪುರುಷೋತ್ತಮ್‌ ಗಿರಿನಗರದ ತನ್ನ ಸ್ನೇಹಿತ ಚೇತನ್ ರೂಮಿಗೆ ಕರೆದುಕೊಂಡು ಹೋಗಿದ್ದ.

ಇದನ್ನೂ ಓದಿ: ವಿಧವೆ ಅನ್ನೋದಕ್ಕೆ ರಾಷ್ಟ್ರಪತಿಯನ್ನು ಸಂಸತ್‌ ಭವನ ಉದ್ಘಾಟನೆಗೆ ಮೋದಿ ಆಹ್ವಾನಿಸಿಲ್ಲವೆಂದ ಕುಂ. ವೀರಭದ್ರಪ್ಪ

ಜ್ಯೂಸ್‌ ಕುಡಿಸಿ ಪ್ರಜ್ಞೆ ತಪ್ಪಿಸಿದ ಪಾಪಿ ಪ್ರಿಯಕರ

ರೂಮಿಗೆ ಬಂದಾಗ ಯುವತಿ ಮೊಬೈಲ್‌ ಕೊಡು ವಾಪಸ್‌ ಊರಿಗೆ ಹೋಗುವುದಾಗಿ ಹೇಳಿದ್ದಾಳೆ. ಆಗ ಪುರಷೋತ್ತಮ್‌ ಆಕೆಯನ್ನು ತಡೆದು ರಾತ್ರಿಯಾಗಿದೆ ಇಲ್ಲೆ ಇರು ಬೆಳಗ್ಗೆ ಹೋಗು ಎಂದಿದ್ದಾನೆ. ಈತನ ಬಲವಂತಕ್ಕೆ ಅರೆಬರೆ ಮನಸ್ಸಿನಲ್ಲೇ ಯುವತಿ ಒಪ್ಪಿಗೆ ನೀಡಿದ್ದಾಳೆ. ಈ ವೇಳೆ ಪುರಷೋತ್ತಮ್‌ ಕುಡಿಯಲು ಜ್ಯೂಸ್‌ ನೀಡಿದ್ದಾನೆ. ಜ್ಯೂಸ್‌ ಕುಡಿಯುತ್ತಿದ್ದಂತೆ ಯುವತಿ ಕೊಂಚ ಪ್ರಜ್ಞೆ ಕಳೆದುಕೊಂಡಿದ್ದಾಳೆ.

ನಂತರ ಪ್ರಿಯಕರ ಯುವತಿ ಮೇಲೆ ಎರಗಿ ಬಿದ್ದು ಅತ್ಯಾಚಾರ ಎಸಗಿದ್ದಾನೆ. ಬಳಿಕ ಪುರಷೋತ್ತಮನ ಸ್ನೇಹಿತ ಚೇತನ್ ಕೂಡ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಲು ಮುಂದಾದಾಗ ಎಚ್ಚರಗೊಂಡು ಚಿರಾಡಿದ್ದಾಳೆ. ಬಳಿಕ ಅಕ್ಕಪಕ್ಕದ ಜನರು ಬಂದು ಆಕೆಯನ್ನೂ ರಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಗಿರಿನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ತನಿಖೆಯನ್ನು ಮುಂದುವರಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version