Site icon Vistara News

Murder Case: ಮಗಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ; ಹಲ್ಲೆಯಿಂದ ಮಗನ ಸ್ಥಿತಿಯೂ ಗಂಭೀರ

Police investigation

ವಿಜಯನಗರ: ಮಕ್ಕಳ ಮೇಲೆ ಹೆತ್ತ ತಾಯಿಯೇ ಮಾರಣಾಂತಿಕ ಹಲ್ಲೆ ನಡೆಸಿ, ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ (Murder Case) ಹರಪನಹಳ್ಳಿ ತಾಲೂಕು ಹುಲಿಕಟ್ಟೆ ಗ್ರಾಮದಲ್ಲಿ ನಡೆದಿದೆ. ಹಲ್ಲೆಯಿಂದ ಮಗಳು ಮೃತಪಟ್ಟಿದ್ದು, ಮಗನ ಸ್ಥಿತಿ ಗಂಭೀರವಾಗಿದೆ.

ತಾಯಿ ಬೇಗಮ್‌ಬಿ (45), ಮಗಳು ಶಮಬಾನು (18) ಮೃತರು. ಮಗ ಅಮಾನುಲ್ಲಾ (16) ಗಾಯಾಳು. ಮೊದಲಿಗೆ ತಾಯಿಯಿಂದ ಮಗಳು ಶಮಬಾನು ಹಾಗೂ ಮಗನ ಮೇಲೆ ಹಲ್ಲೆ ನಡೆಸಿದ್ದಾಳೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಮಗಳು ಶಮಬಾನು ಸ್ಥಳದಲ್ಲೇ ಮೃತಪಟ್ಟಿದ್ದು, ಮಗ ಪ್ರಜ್ಞಾಹೀನನಾಗಿದ್ದಾನೆ. ನಂತರ ತಾಯಿ ಬೇಗಮ್‌ಬಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ತನ್ನ ಮಾತು ಕೇಳಲ್ಲ, ಮನೆಯಲ್ಲಿ ಯಾವುದೇ ಕೆಲಸ ಮಾಡಲ್ಲ ಎಂದು ತಾಯಿ ಬೇಗಮ್‌ಬಿ, ಮಕ್ಕಳೊಂದಿಗೆ ಶುಕ್ರವಾರ ರಾತ್ರಿ ಜಗಳ ಮಾಡಿದ್ದಾಳೆ. ನಂತರ ಶನಿವಾರ ಮುಂಜಾನೆ ಮಕ್ಕಳ ತಲೆಗೆ ದೊಣ್ಣೆಯಿಂದ ಬಲವಾಗಿ ಹೊಡೆದಿದ್ದಾಳೆ. ಇದರಿಂದ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಗನಿಗೆ ಪ್ರಜ್ಞೆ ತಪ್ಪಿದೆ. ನಂತರ ತಾಯಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮಗ ಕೋಮದಲ್ಲಿದ್ದು, ಆತನನ್ನು ದಾವಣಗೆರೆ ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಜಯನಗರ ಎಸ್ಪಿ ಶ್ರೀಹರಿಬಾಬು ಗ್ರಾಮಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ತಾಯಿ ಬೇಗಮ್‌ ಬಿ ಮಾನಸಿಕ ಅಸ್ವಸ್ಥಳಾಗಿದ್ದಳು ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Kolar News : ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಕೆಜಿಎಫ್ ಶಾಸಕಿಗೆ ತಪ್ಪಿದ ಕಲ್ಲೇಟು!

ಅಪಘಾತದಲ್ಲಿ ಬೈಕ್‌ ಸವಾರ ಸಾವು

ಬಳ್ಳಾರಿ: ನಗರದ ಬಂಡಿಹಟ್ಟಿಯಲ್ಲಿ ವೇಗವಾಗಿ ಬೈಕ್ ಚಲಾಯಿಸುವಾಗ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದಿದ್ದರಿಂದ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ಬಂಡಹಟ್ಟಿ ನಿವಾಸಿ ಗಂಗಾ ಮೃತ ಎಂದು ಗುರುತಿಸಲಾಗಿದೆ. ಬೈಕ್ ಡಿಕ್ಕಿಯಾದ ವ್ಯಕ್ತಿಗೆ ತೀವ್ರ ಗಾಯಗಳು ಆಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವಿಮ್ಸ್‌ಗೆ ದಾಖಲಿಸಲಾಗಿದೆ. ಬೈಕ್ ಡಿಕ್ಕಿ ಹೊಡೆದ ದೃಶ್ಯಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ನೀರಿನ ವಿಚಾರಕ್ಕೆ ಯುವಕ ಹಾಗೂ ಪಿಡಿಒ ನಡುವೆ ಗಲಾಟೆ

ಯಾದಗಿರಿ: ಶುದ್ಧ ಕುಡಿಯುವ ನೀರಿನ ಘಟಕದ ವಿಚಾರವಾಗಿ ಯುವಕ ಹಾಗೂ ಪಿಡಿಒ ನಡುವೆ ಗಲಾಟೆಯಾಗಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಮಲ್ಲಾ ಬಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಯುವಕ ಸಿದ್ದಪ್ಪ ನೀರಿನ ಘಟಕದ ನಾಣ್ಯದ ಬಾಕ್ಸ್ ಹಾಗೂ ನೀರು ಪೂರೈಕೆ ಮಾಡುವ ವೈರ್‌ ಕಿತ್ತು ಹಾಕಿ ಕಿತಾಪತಿ ಮಾಡಿರುವ ಆರೋಪವಿದೆ. ಈ ಹಿನ್ನೆಲೆಯಲ್ಲಿ ಪಿಡಿಒ ಪುತ್ರಪ್ಪಗೌಡ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ಗಲಾಟೆಯಾಗಿದೆ. ಕಿತಾಪತಿ ತೊರಿದ ಯುವಕನಿಗೆ ಸಾರ್ವಜನಿಕರ ಎದುರು ಪಿಡಿಒ ಹಲ್ಲೆ ನಡೆಸಿ, ನೀರಿನ ಘಟಕ ಯಾಕೆ ಮುರಿದು ಹಾಕಿದ್ದಿಯಾ ಎಂದು ಚಪ್ಪಲಿಯಿಂದ ಹೊಡೆದಿದ್ದಾರೆ.

Exit mobile version