Site icon Vistara News

Tejasvi Surya: ವಿಸ್ತಾರ ನ್ಯೂಸ್‌ ಕಚೇರಿಗೆ ಸಂಸದ ತೇಜಸ್ವಿ ಸೂರ್ಯ ಭೇಟಿ

MP Tejasvi Surya felicitated in vistara news

#image_title

ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (Tejasvi Surya) ಅವರು ಶುಕ್ರವಾರ ವಿಸ್ತಾರ ನ್ಯೂಸ್‌ ಕಚೇರಿಗೆ ಸೌಹಾರ್ದಯುತ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕ ಮತ್ತು ಸಿಇಒ ಹರಿಪ್ರಕಾಶ್‌ ಕೋಣೆಮನೆ ಅವರು ಹೂಗುಚ್ಛ ನೀಡಿ ತೇಜಸ್ವಿ ಸೂರ್ಯ ಅವರನ್ನು ಬರಮಾಡಿಕೊಂಡರು.

ವಿಸ್ತಾರ ನ್ಯೂಸ್‌ ಸಿಬ್ಬಂದಿ ಜತೆ ಮಾತನಾಡಿದ ತೇಜಸ್ವಿ ಸೂರ್ಯ ಅವರು, ಟಿವಿ ಮತ್ತು ಡಿಜಿಟಲ್‌ ಮಾಧ್ಯಮದ ಕುರಿತು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

ಈ ವೇಳೆ ವಿಸ್ತಾರ ನ್ಯೂಸ್‌ ನಿರ್ದೇಶಕ (ಬ್ಯುಸಿನೆಸ್‌) ವಿನಯ್‌ ಶೇಷಗಿರಿ, ಕಾರ್ಯ ನಿರ್ವಾಹಕ ಸಂಪಾದಕ ಶರತ್‌ ಎಂ.ಎಸ್‌, ಸಿಒಒ ಪರಶುರಾಮ್, ಇನ್‌ ಪುಟ್‌-ಔಟ್‌ ಪುಟ್‌ ಮುಖ್ಯಸ್ಥ ಮಂಜುನಾಥ್‌, ವಿಸ್ತಾರ ನ್ಯೂಸ್‌ ಡಿಜಿಟಲ್‌ ಸಂಪಾದಕ ರಮೇಶ್‌ ಕುಮಾರ್‌ ನಾಯಕ್‌, ಸ್ಪೆಷಲ್‌ ಆಪರೇಷನ್‌ ಎಡಿಟರ್‌ ಕಿರಣ್‌ ಕುಮಾರ್‌ ಡಿ.ಕೆ, ಕ್ರಿಯೆಟಿವ್‌ ಹೆಡ್‌ ಮಹೇಶ್‌ ಚಿದ್ರೆ ಮತ್ತಿತರರು ಜತೆಗಿದ್ದರು.

ಇದನ್ನೂ ಓದಿ | Laxman Savadi: ವಿಸ್ತಾರ ನ್ಯೂಸ್‌ ಕಚೇರಿಗೆ ಲಕ್ಷ್ಮಣ ಸವದಿ ಭೇಟಿ

Exit mobile version