Site icon Vistara News

Murder Case : ಎಣ್ಣೆ ಜಾಸ್ತಿ ಕುಡಿಯಲ್ಲ ಎಂದಿದ್ದಕ್ಕೆ ಕೊಲೆಯಾದ ಗೆಳೆಯ

A Friend murdered for not drinking too much alcohol

ಬೆಂಗಳೂರು: ಪಾರ್ಟಿಯಲ್ಲಿ (Night Party) ಎಣ್ಣೆ ಜಾಸ್ತಿ ಕುಡಿಯುವುದಿಲ್ಲ ಎಂದಿದ್ದಕ್ಕೆ ಗೆಳೆಯನೊಬ್ಬ (Murder case) ಕೊಲೆಯಾಗಿದ್ದಾನೆ. ಸ್ನೇಹಿತನನ್ನು ಕೊಲೆ ಮಾಡಿ ಪರಾರಿ ಆಗಿದ್ದ ಆರೋಪಿಯನ್ನು ಪೊಲೀಸರು ಸೆರೆಯಿಡಿದಿದ್ದಾರೆ.

ಡಿ.18ರಂದು ಬಾಗಲೂರು ಸಮೀಪ ಜಿತೇಂದ್ರ ಎಂಬಾತನ ಕೊಲೆಯಾಗಿತ್ತು. ಕೊಲೆ ಕೇಸ್‌ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ತನಿಖೆ ವೇಳೆ ಇದೊಂದು ಕುಡಿದ ಮತ್ತಿನಲ್ಲಿ ನಡೆದ ಹತ್ಯೆ ಎಂದು ತಿಳಿದು ಬಂದಿದೆ. ಜಿತೇಂದ್ರ ತನ್ನ ಗೆಳೆಯರೊಟ್ಟಿಗೆ ರಾತ್ರಿ ಪಾರ್ಟಿಗೆ ಹೋಗಿದ್ದ. ಈ ವೇಳೆ ಆರೋಪಿ ಜಿತೇಂದ್ರನಿಗೆ ಎಣ್ಣೆ ಕುಡಿಯಲು ಒತ್ತಾಯಿಸಿದ್ದ. ಆತನ ಒತ್ತಾಯಕ್ಕೆ ಮಣಿದು ಜಿತೇಂದ್ರ ಮಧ್ಯವನ್ನು ಸೇವನೆ ಮಾಡಿದ್ದ.

ಇದನ್ನೂ ಓದಿ: ಹ್ಯಾಂಡ್‌ ಬ್ಯಾಗ್‌ನಲ್ಲಿ ಚಿನ್ನದ ಪೇಸ್ಟ್‌; ಹೊಟ್ಟೆಯೊಳಗೆ ಮಾತ್ರೆ ರೂಪದಲ್ಲಿತ್ತು 20 ಕೋಟಿ ರೂ. ಮೌಲ್ಯದ ಡ್ರಗ್ಸ್‌!

ಇತ್ತ ಗೆಳೆಯ ಪದೇಪದೆ ಕುಡಿಯಲು ಒತ್ತಾಯ ಮಾಡುತ್ತಿದ್ದ ಎಂದು ಜಿತೇಂದ್ರ ಪಾರ್ಟಿ ಜಾಗದಿಂದ ಕಾಲ್ಕಿತ್ತಿದ್ದ. ಅಲ್ಲೆ ಪಕ್ಕದಲ್ಲಿದ್ದ ಖಾಲಿ ನಿವೇಶನಲ್ಲಿ ಅಡಗಿ ಕುಳಿತಿದ್ದ. ಈ ವಿಷಯ ತಿಳಿದು ಆರೋಪಿ ಅಲ್ಲಿಗೂ ಬಂದು, ಪಾರ್ಟಿಗೆ ಬಾ ಎಂದು ಮತ್ತೆ ಪೀಡಿಸುತ್ತಿದ್ದ. ಜಿತೇಂದ್ರ ಬಾರದೇ ಇದ್ದಾಗ, ಕುತ್ತಿಗೆಗೆ ಸ್ಕಾರ್ಫ್‌ ಹಾಕಿ ಎಳೆದು ತರಲು ಹೋಗಿದ್ದಾನೆ. ಆದರೆ ಸ್ಕಾರ್ಫ್‌ ಜಿತೇಂದ್ರನ ಕುತ್ತಿಗೆಯನ್ನು ಬಿಗಿದಿತ್ತು, ಹೀಗಾಗಿ ಉಸಿರುಗಟ್ಟಿ ಮೃತಪಟ್ಟಿದ್ದ.

ಜಿತೇಂದ್ರನ ಚಲನವಲನ ಇಲ್ಲದೇ ಇದ್ದಾಗ ಅನುಮಾನಗೊಂಡು ನೋಡಿದಾಗ ಆತ ಅಸುನೀಗಿದ್ದ. ಕಿಕ್ಕೇರಿಸಿಕೊಂಡಿದ್ದವನ ನಶೆ ಹಾಗೇ ಇಳಿದುಹೋಗಿತ್ತು. ಬಳಿಕ ಗಾಬರಿಯಲ್ಲಿ ಅಲ್ಲೆ ಇದ್ದ ಪೊದೆಯಲ್ಲಿ ಗೆಳೆಯನ ಮೃತದೇಹ ಬಿಸಾಡಿ ಪರಾರಿಯಾಗಿದ್ದ. ಇದೀಗ ಬಾಗಲೂರು ಪೊಲೀಸರು ತನಿಖೆ ನಡೆಸಿ ಕೊಲೆ ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Road Accident : ಓಂಶಕ್ತಿಗೆ ತೆರಳುತ್ತಿದ್ದ ಬಸ್‌ ಪಲ್ಟಿ; ಮಾಲಾಧಾರಿಗಳು ಗಂಭೀರ

8ನೇ ಮಹಡಿಯಿಂದ ಲಿಫ್ಟ್ ಪತನ, ಐವರು ಟೆಕ್ಕಿಗಳ ಸ್ಥಿತಿ ಗಂಭೀರ

ನೋಯ್ಡಾ, ಉತ್ತರ ಪ್ರದೇಶ: ನೋಯ್ಡಾದ ಬಹುಮಹಡಿ ಕಟ್ಟಡದ (High Rise building) ಲಿಫ್ಟ್ ಅನಿರೀಕ್ಷಿತವಾಗಿ (Lift Crash in Noida) ಬಿದ್ದು ಒಂಬತ್ತು ಐಟಿ ಉದ್ಯೋಗಿಗಳು ಗಾಯಗೊಂಡಿದ್ದಾರೆ(Techie Injured). ನೋಯ್ಡಾ ಸೆಕ್ಟರ್ 125ರ ರಿವರ್ ಸೈಡ್ ಟವರ್‌ನಲ್ಲಿರುವ ಲಿಫ್ಟ್ 8ನೇ ಮಹಡಿಯಿಂದ ಕುಸಿದಿದ್ದು, ತೀವ್ರವಾಗಿ ಗಾಯಗೊಂಡಿರುವ 9 ಟೆಕ್ಕಿಗಳ ಪೈಕಿ ಐವರು ತೀವ್ರ ನಿಗಾಘಟಕದಲ್ಲಿದ್ದಾರೆ. ಈ ಅವಘಡಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶದ ಪೊಲೀಸರು(UP Police) ತಿಳಿಸಿದ್ದಾರೆ.

ಎರಾಸ್ಮಿತ್ ಟೆಕ್ನಾಲಜೀಸ್‌ನ ಉದ್ಯೋಗಿಗಳು 8ನೇ ಮಹಡಿಯಲ್ಲಿರುವ ತಮ್ಮ ಕಚೇರಿಯಿಂದ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಸಂಜೆ 5.45ಕ್ಕೆ ಈ ಘಟನೆ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 9 ಜನರ ಪೈಕಿ ಐವರಿಗೆ ಕಾಲು ಮತ್ತು ಕೈಗಳಿಗೆ ತೀವ್ರ ಗಾಯಗಳಾಗಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರಿಗೂ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಸ್ಥಿರವಾಗಿದೆ. ನಿಗಾ ಘಟಕದಲ್ಲಿದ್ದ ಐವರು ಪೈಕಿ ನಾಲ್ವರನ್ನು ಜನರಲ್ ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎರಾಸ್ಮಿತ್ ಟೆಕ್ನಾಲಜೀಸ್ ಐಟಿ ಡೆವಲಪರ್ ಕಂಪನಿಯಾಗಿದೆ ಮತ್ತು ಅದರ ಕಚೇರಿ ಕಟ್ಟಡದ ಎಂಟನೇ ಮಹಡಿಯಲ್ಲಿದೆ. ಗಾಯಗೊಂಡ ಉದ್ಯೋಗಿಗಳನ್ನು ತಕ್ಷಣವೇ ಖಾಸಗಿ ಜೇಪೀ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರಲ್ಲಿ ಇಬ್ಬರು ಆರೋಗ್ಯವಾಗಿದ್ದಾರೆ, ಇತರರು ಚಿಕಿತ್ಸೆ ಪಡೆಯುತ್ತಿದ್ದಾರೆ. ಎಂದು ಉಪ ಪೊಲೀಸ್ ಆಯುಕ್ತ (ನೋಯ್ಡಾ) ಹರೀಶ್ ಚಂದರ್ ಅವರು ತಿಳಿಸಿದ್ದಾರೆ.

ಗಾಯಗೊಂಡವರನ್ನು ಪಿಯೂಷ್ ಶರ್ಮಾ (22), ಅಭಿಷೇಕ್ ಪಂಡಿತ್ (23), ಅಭಿಷೇಕ್ ಗುಪ್ತಾ (24), ಸೌರಭ್ ಕಟಿಯಾ (28), ರಜತ್ ಶರ್ಮಾ (29), ಶುಭಂ ಭಾರದ್ವಾಜ್ (22), ಯಶು ಶರ್ಮಾ (23), ಸಾಗರ್ (23) ಮತ್ತು ಅಭಿಜಿತ್ ಸಿಂಗ್ ಎಂದು ಗುರುತಿಸಲಾಗಿದೆ. ಈ ಅವಘಡಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ನೋಯ್ಡಾದಲ್ಲಿ ಸಾಕಷ್ಟು ಬಹುಮಡಿಯ ಕಟ್ಟಡಗಳಿದ್ದು, ಈ ವರ್ಷದಲ್ಲಿ ಲಿಫ್ಟ್ ಕುಸಿದ ಪ್ರಕರಣಗಳು ವರದಿಯಾಗಿವೆ. ಕೆಲವು ಪ್ರಕರಣಗಳಲ್ಲಿ ಸಾವುಗಳು ಕೂಡ ವರದಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version