Site icon Vistara News

Murder Case: ಹಣಕ್ಕಾಗಿ ಪೀಡಿಸುತ್ತಿದ್ದ ಕುಡುಕ ಮಗನನ್ನು ಅಪ್ಪನೇ ಆಯುಧದಿಂದ ತಲೆಗೆ ಹೊಡೆದು ಕೊಂದ

one killed, condition of another critical in Attack with deadly weapons in Shivamogga

one killed, condition of another critical in Attack with deadly weapons in Shivamogga

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಬಿಕೆ ಗ್ರಾಮದಲ್ಲಿ ತಂದೆಯೇ ಮಗನನ್ನು ಹತ್ಯೆ (Murder Case) ಮಾಡಿರುವ ಘಟನೆ ವರದಿ ಆಗಿದೆ. ಗ್ರಾಮದ ಜಿನ್ನಪ್ಪಾ ಕಾಂಜಿ ಎಂಬಾತ ಭರತೇಶ ಜಿನ್ನಪ್ಪಾ ಕಾಂಜಿಗೆ (30) ಮಾರಕಾಸ್ತ್ರದಿಂದ ಹೊಡೆದು ಹತ್ಯೆ ಮಾಡಿದ್ದಾನೆ.

ಮಗ ಭರತೇಶ್‌ ಮದ್ಯಪಾನದ ದಾಸನಾಗಿದ್ದು, ದಿನನಿತ್ಯ ಹಣಕ್ಕಾಗಿ ತಂದೆ ಜಿನ್ನಪ್ಪಾನನ್ನು ಪೀಡಿಸುತ್ತಿದ್ದ ಎಂದು ಹೇಳಲಾಗಿದೆ. ಇವನ ಉಪಟಳ ತಾಳಲಾರದೆ ಮಂಗಳವಾರ ಸಿಟ್ಟಿಗೆದ್ದವರೇ ಆಯುಧದಿಂದ ಬಲವಾಗಿ ತಲೆಯ ಹಿಂಭಾಗಕ್ಕೆ ಹೊಡೆದಿದ್ದಾರೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಭರತೇಶ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಇದನ್ನೂ ಓದಿ: Shivamogga News: ಶಿವಮೊಗ್ಗದಲ್ಲಿ ನೀರು ತುಂಬಿದ್ದ ಬಕೆಟ್‌ಗೆ ಬಿದ್ದ 1 ವರ್ಷದ ಗಂಡು ಮಗು; ಉಸಿರುಗಟ್ಟಿ ಸಾವು

ಸ್ಥಳಕ್ಕೆ ಕಾಗವಾಡ ಪೊಲೀಸರು ಭೇಟಿ ನೀಡಿದ್ದು, ಆರೋಪಿ ಜಿನ್ನಪ್ಪಾನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಾಗವಾಡ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ರಕ್ತಸಿಕ್ತವಾಗಿ ಬಿದ್ದಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version