Site icon Vistara News

Murder Case | ಮದುವೆ ಆಗು ಎಂದವಳು ಕೊಲೆಯಾಗಿ ಹೋದಳು; ಪ್ರಿಯಕರನ್ನು ಜೈಲಿಗೆ ಅಟ್ಟಿದ ಪೊಲೀಸರು

Two killed as two bikes collide head on

ಬೆಂಗಳೂರು: ಇಲ್ಲಿನ ಸಿಂಗಸಂದ್ರದಲ್ಲಿ ಪ್ರೀತಿಸಿದವಳು ಮದುವೆ ಆಗು ಎಂದಿದ್ದಕ್ಕೆ ಪ್ರಿಯತಮನೊಬ್ಬ ಆಕೆಯನ್ನು ಹತ್ಯೆ (Murder Case) ಮಾಡಿರುವ ಘಟನೆ ನಡೆದಿದೆ.

ಆರೋಪಿ ಪ್ರಶಾಂತ್

ಪ್ರಶಾಂತ್ (24) ಎಂಬಾತ ಕಳೆದ ಡಿಸೆಂಬರ್‌ 7ರಂದು ಪ್ರೀತಿಸಿದವಳು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನಾಟಕ ಆಡಿದ್ದ. ಆದರೆ, ಪೋಸ್ಟ್‌ಮಾರ್ಟಮ್ ರಿಪೋರ್ಟ್‌ನಿಂದಾಗಿ ಸತ್ಯ ಬಹಿರಂದವಾಗಿದ್ದು ಇದು ಆತ್ಮಹತ್ಯೆ ಅಲ್ಲ ಕೊಲೆ‌ ಎಂದು ಸಾಬೀತಾಗಿದೆ. 27 ವರ್ಷದ ಸುನೀತಾ ಉರ್ಫ್ ದೀಪು ಹತ್ಯೆಯಾದ ಮಹಿಳೆ. ವಯಸ್ಸಿನಲ್ಲಿ ದೊಡ್ಡವಳಾಗಿದ್ದರೂ ಪ್ರಶಾಂತ್‌ ಪ್ರೀತಿಯ ಬಲೆಗೆ ಸಿಲುಕಿದ್ದ.

ಕಳೆದ ನಾಲ್ಕು ವರ್ಷದಿಂದ‌ ಲಿವಿಂಗ್ ಟುಗೆದರ್‌ನಲ್ಲಿದ್ದು ಸುನೀತಾ ಮದುವೆ ಆಗುವಂತೆ ಪೀಡಿಸಿದ್ದಾಳೆ. ತಂಗಿ ಮದುವೆ ಬಳಿಕ ನಾವಿಬ್ಬರು ಮದುವೆ ಆಗೋಣ ಎಂದು ನಂಬಿಸಿದ್ದ. ಆದರೆ ನಂತರ ತನ್ನ ಮಾತು ಬದಲಿಸಿದ್ದ, ಇತ್ತ ಪದೇಪದೆ ಮದುವೆ ವಿಚಾರವನ್ನು ಸುನಿತಾ ತೆಗೆದಿದ್ದಾಳೆ. ಇದೇ ವಿಚಾರವಾಗಿ ಡಿ‌.‌ 6ರ‌ ತಡರಾತ್ರಿ ಇಬ್ಬರ ಮಧ್ಯೆ ಜಗಳ ಶುರುವಾಗಿದೆ.

ಜಗಳ ತಾರಕ್ಕೇರಿದ್ದು ಸುನೀತಾಳ ಕತ್ತಿನ‌ ಮೇಲೆ ಮೊಣಕಾಲಿಟ್ಟು ಪ್ರಶಾಂತ್‌ ಹತ್ಯೆ ಮಾಡಿದ್ದಾನೆ. ಬಳಿಕ ಕುತ್ತಿಗೆಗೆ ಮೊನಚಾದ ಲೋಹದಿಂದ ಗಾಯ‌ ಮಾಡಿ, ಯಾರಿಗೂ ಅನುಮಾನ‌ ಬರದಂತೆ ನೇಣು ಸ್ಥಿತಿಯಲ್ಲಿ ದೇಹ ಇಟ್ಟಿದ್ದ. ಬಳಿಕ‌ ಅವಳೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ‌ ಎಂದು ಕಥೆ ಕಟ್ಟಿ, ತಾನೇ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದ.

ತನಿಖೆಗಿಳಿದ ಪೊಲೀಸರು ಮೃತದೇಹದ ಪೋಸ್ಟ್ ಮಾರ್ಟಮ್‌ ನಡೆಸಿದ್ದು, ಈ ವೇಳೆ ವೇಲ್‌ನಿಂದ ಬಿಗಿಯುವ ಮೊದಲೇ ಉಸಿರು ಹೋಗಿರುವುದಾಗಿ ವರದಿ ನೀಡಿದ್ದಾರೆ. ಬಳಿಕ ವಿಚಾರಣೆಗೆ ಎಂದು ಕರೆದು ಆರೋಪಿಯನ್ನು ಪೊಲೀಸರು ಲಾಕ್‌ ಮಾಡಿದ್ದಾರೆ.

ಇದನ್ನೂ ಓದಿ | Atlee Kumar | 8 ವರ್ಷಗಳ ನಂತರ ಮಗುವಿನ ನಿರೀಕ್ಷೆಯಲ್ಲಿ ನಿರ್ದೇಶಕ ಅಟ್ಲೀ ದಂಪತಿ

Exit mobile version