Site icon Vistara News

Murder Case : ಕತ್ತು ಸೀಳಿ ವ್ಯಕ್ತಿಯ ಬರ್ಬರ ಹತ್ಯೆ

Murder Case in Kolar

ಕೋಲಾರ : ಗುವಾಹಾಟಿ ಮೂಲದ ವ್ಯಕ್ತಿಯೊಬ್ಬನನ್ನು ಕತ್ತು ಸೀಳಿ ಬರ್ಬರವಾಗಿ ಕೊಲೆ (Murder case) ಮಾಡಲಾಗಿದೆ. ಕೋಲಾರ ತಾಲೂಕಿನ ತ್ಯಾವನಹಳ್ಳಿ ಹಾಗೂ ಮಿಂಡಹಳ್ಳಿ ಮಾರ್ಗ ಮಧ್ಯೆ ಇರುವ ಕೆರೆಯ ಸಮೀಪ ಘಟನೆ ನಡೆದಿದೆ. ರಾತ್ರಿ 12ರ ಸುಮಾರಿಗೆ ಈ ಕೊಲೆ ನಡೆದಿರಬಹುದೆಂದು ಶಂಕಿಸಲಾಗಿದೆ.

ಹತ್ಯೆಯಾದವನ ಗುರುತು ಪತ್ತೆಯಾಗಿಲ್ಲ. ನಿನ್ನೆ ಭಾನುವಾರ ಗುವಾಹಟಿಯಿಂದ ಬೆಂಗಳೂರಿಗೆ ಬಂದು, ಅಲ್ಲಿಂದ ಕೋಲಾರಕ್ಕೆ ಬಂದಿರಬಹುದೆಂದು ಅಂದಾಜಿಸಲಾಗಿದೆ. ಈತನ ಹೆಸರು ಹಾಗೂ ವಿಳಾಸದ ಪತ್ತೆ ಮಾಡಲು ಗ್ರಾಮಾಂತರ ಪೊಲೀಸರು ಮುಂದಾಗಿದ್ದಾರೆ.

ತ್ಯಾವನಹಳ್ಳಿˌ ಮಿಂಡಹಳ್ಳಿˌ ಸೀತಹಳ್ಳಿ ಸುತ್ತಮುತ್ತಲಿರುವ ಕೈಗಾರಿಕಾ ಪ್ರದೇಶಗಳಲ್ಲಿ ಸೆಕ್ಯುರಿಟಿ ಕೆಲಸಕ್ಕಾಗಿ ಬಂದಿರಬಹುದು. ಕೆಲವರು ತ್ಯಾವನಹಳ್ಳಿ ಕೆರೆಯಲ್ಲಿ ರಾತ್ರಿ ಹೊತ್ತು ಕದ್ದು ಮುಚ್ಚಿ ಮೀನು ಹಿಡಿಯಲು ಬರುತ್ತಾರೆ ಎನ್ನಲಾಗಿದೆ. ಆ ಸಮಯದಲ್ಲಿ ಹೊಂಚು ಹಾಕಿ ಈತನ ಸ್ನೇಹಿತರೆ ಈ ಕೃತ್ಯ ಎಸಗಿರಬಹುದೆಂದು ಸ್ಥಳೀಯರು ದೂರುತ್ತಿದ್ದಾರೆ.

ಸದ್ಯ ತ್ಯಾವನಹಳ್ಳಿ ಕೆರೆ ಸಮೀಪ ರಕ್ತಸಿಕ್ತವಾಗಿ ಬಿದ್ದಿರುವ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಈ ಸಂಬಂಧ ತನಿಖೆಯನ್ನು ಮುಂದುವರಿಸಿದ್ದಾರೆ.

ಮಗುವಿನ ಕಿರಿಕಿರಿಗೆ ಹಸಿ ಬಾಣಂತಿಯನ್ನೇ ಕೊಂದ ದುಷ್ಟ ಪತಿ

ರಾಯಚೂರು: ಮಗುವಿನ ಕಿರಿಕಿರಿಗೆ ಹಸಿ ಬಾಣಂತಿಯನ್ನೇ ಪಾಪಿ ಪತಿಯೊಬ್ಬ ಹತ್ಯೆ (Murder case) ಮಾಡಿರುವ ದಾರುಣ ಘಟನೆ ನಡೆದಿದೆ. ರಾಯಚೂರಲ್ಲಿ ಲಾಡ್ಜ್‌ವೊಂದರಲ್ಲಿ (raichur News) ಮಹಿಳೆಯೊಬ್ಬರು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಪೊಲೀಸರ ತನಿಖೆ ವೇಳೆ ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ತಿಳಿದು ಬಂದಿದೆ.

ಉತ್ತರ ಪ್ರದೇಶ ಮೂಲದ ಸೋನಿ ಮೃತ ದುರ್ದೈವಿ. ಪತಿ ಅವಿನಾಶ್‌ನಿಂದಲೇ ಸೋನಿ ಹತ್ಯೆ ಆಗಿದ್ದಳು. 20 ದಿನದ ಹಸಿ ಬಾಣಂತಿ ಕೊಂದು ಅವಿನಾಶ್‌ ಸಿಜೇರಿಯನ್ ಕಥೆ ಕಟ್ಟಿದ್ದ. ಸಿಜೇರಿಯನ್ ನೋವು ತಾಳಲಾರದೆ ಸೋನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಿದ್ದ.

ಖಾಸಗಿ ಲಾಡ್ಜ್‌ವೊಂದರ ರೂಮ್ ನಂಬರ್ 113ರಲ್ಲಿ ಪತ್ನಿಯನ್ನು ಕೊಂದು, ಬಳಿಕ ಫ್ಯಾನ್ಸ್‌ಗೆ ನೇಣು ಬಿಗಿದಿದ್ದ. ಕಳೆದ ಡಿ. 13 ರಂದು ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.

ಇದನ್ನೂ ಓದಿ: ಅಯ್ಯಪ್ಪ ಮಾಲಾಧಾರಿಗಳಿಗೆ ಕೋವಿಡ್‌ ಟೆಸ್ಟ್‌; ಸೋಂಕಿತರ ಸಂಖ್ಯೆ ಡಬಲ್‌ ಆದ್ರೆ ನ್ಯೂಇಯರ್‌ಗೆ ಟಫ್‌ ರೂಲ್ಸ್‌!

ಪ್ರೀತಿಸಿ ಮದುವೆಯಾಗಿದ್ದ‌ ಅವಿನಾಶ್‌ ಹಾಗೂ ಸೋನಿ ಕುಟುಂಬ ತೊರೆದು ರಾಯಚೂರಿಗೆ ಬಂದಿದ್ದರು. ಖಾಸಗಿ ಲಾಡ್ಜ್‌ನಲ್ಲಿ ಸ್ವೀಟ್ ತಯಾರಿಸುತ್ತಿದ್ದರು. ಕೆಲಸದ ಬಳಿಕ‌ ಲಾಡ್ಜ್‌ವೊಂದರ ರೂಮ್‌ನಲ್ಲಿ ವಾಸವಿದ್ದರು. 20 ದಿನದ ಹಿಂದೆಯಷ್ಟೆ ಸೋನಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದರೆ ಈ ಅವಿನಾಶ್‌ ಹಸಗೂಸು ಕಿರಿಕಿರಿ ಮಾಡುವುದರಿಂದ ಸಿಡುಕುತ್ತಿದ್ದ.

ಕೊಂದು ಟಿ20 ಮ್ಯಾಚ್‌ ನೋಡುತ್ತಿದ್ದ ದುಷ್ಟ

ಇಷ್ಟಲ್ಲದೆ ಮಗು ಹುಟ್ಟಿದ ಬಳಿಕ ಆರ್ಥಿಕ ಪರಿಸ್ಥಿತಿ ಬಿಗಾಡಿಯಿಸಿತ್ತು. ಇದರಿಂದ ತಲೆಕೆಡಿಸಿಕೊಂಡಿದ್ದ ಅವಿನಾಶ್‌ ಪತ್ನಿಯನ್ನು ಕೊಲೆ ಮಾಡಲು ಪ್ಲ್ಯಾನ್ ಮಾಡಿದ್ದ. ಪತ್ನಿ ಸೋನಿಯಾಳ ಕತ್ತು ಹಿಸುಕಿ ಕೊಲೆಗೈದು, ಫ್ಯಾನ್‌ಗೆ ನೇಣು ಬಿಗಿದಿದ್ದ. ಬಳಿಕ ಟಿ 20 ಮ್ಯಾಚ್ ನೋಡಿದ್ದ.

ಸದ್ಯ ರಾಯಚೂರು ಪಶ್ಚಿಮ ಠಾಣೆಯಲ್ಲಿ UDR ಆಗಿದ್ದ ಪ್ರಕರಣವು ಮಹಿಳಾ ಪೊಲೀಸ್ ಠಾಣೆಗೆ ಕೊಲೆ ಕೇಸ್ ಆಗಿ ವರ್ಗಾವಣೆಗೊಂಡಿದೆ. ಆರೋಪಿ ಅವಿನಾಶ್‌ನನ್ನು ವಶಕ್ಕೆ ಪಡೆದು ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version