Site icon Vistara News

Murder Case : ಪ್ರೀತಿಸಿದವಳ ಉಸಿರನ್ನೇ ನಿಲ್ಲಿಸಿ, ಆತ್ಮಹತ್ಯೆ ಎಂದು ಬಿಂಬಿಸಿದ ಪಾಪಿ ಪತಿ

rekha santosh

ಬೆಂಗಳೂರು: ಅವರಿಬ್ಬರು ಪರಸ್ಪರ ಪ್ರೀತಿಸಿ ಮನೆಯವರನ್ನು ಒಪ್ಪಿಸಿ ಒಂದು ವರ್ಷದ ಹಿಂದೆ ಮದುವೆ ಆಗಿದ್ದರು. ಮೂಲತಃ ತಮಿಳುನಾಡಿನ ಆ ಜೋಡಿ ಬೆಂಗಳೂರಲ್ಲಿ ವಾಸವಾಗಿತ್ತು. ಅವರಿಗೆ ಮುದ್ದಾದ ಮಗುವು ಜನಿಸಿತ್ತು. ಆದರೆ ಪ್ರೀತಿಸಿದವಳ ಉಸಿರನ್ನೇ ನಿಲ್ಲಿಸಿ ಆತ್ಮಹತ್ಯೆ (Self Harming) ಎಂದು ಬಿಂಬಿಸಲು ಹೋಗಿ ಪತಿ ಈಗ ಜೈಲಿನಲ್ಲಿ (Murder case) ಬಂಧಿಯಾಗಿದ್ದಾನೆ.

ಬೆಂಗಳೂರಿನ ಯಲಹಂಕ ಉಪನಗರ 3ನೇ ಹಂತದಲ್ಲಿ ಸಂತೋಷ್‌ ಎಂಬಾತ ತನ್ನ ಪತ್ನಿ ರೇಖಾಳನ್ನು ಹತ್ಯೆ ಮಾಡಿದ್ದಾನೆ. ರೇಖಾಳ ಉಸಿರು ನಿಲ್ಲಿಸಿ, ಬಳಿಕ ಸೀರೆಯಿಂದ ಫ್ಯಾನಿಗೆ ನೇಣು ಹಾಕಿ ಆತ್ಮಹತ್ಯೆ ಎಂದು ಬಿಂಬಿಸಿದ್ದ. ಕುಟುಂಬಸ್ಥರಿಗೆ ಅನುಮಾನ ಬರದಂತೆ ಸಂಶೋಷ್‌ ನಾಟಕವಾಡಲು ಮುಂದಾಗಿದ್ದ.

ರೇಖಾ ಹಾಗೂ ಸಂತೋಷ್‌ ಶಾಲೆಯಲ್ಲಿ ಇರುವಾಗಲೇ ಪ್ರೀತಿಸುತ್ತಿದ್ದರು. ಸುಮಾರು ನಾಲ್ಕು ವರ್ಷಗಳ ಕಾಲ ಪ್ರೀತಿಸಿ, ನಂತರ ಮನೆಯವರನ್ನೆಲ್ಲ ಒಪ್ಪಿಸಿ ಮದುವೆಯಾಗಿದ್ದರು. ಕಳೆದ ಒಂದೂವರೆ ವರ್ಷದ ಹಿಂದಷ್ಟೇ ಮದುವೆಯಾಗಿದ್ದ ರೇಖಾ ಹಾಗೂ ಸಂತೋಷ್‌ಗೆ ಈಗ 6 ತಿಂಗಳ ಮುದ್ದಾದ ಹೆಣ್ಣು ಮಗು ಸಹ ಇದೆ.

ಇದನ್ನೂ ಓದಿ:ED Raid : ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಮಂಜುನಾಥ್‌ ಗೌಡ ನಿವಾಸಗಳ ಮೇಲೆ ಇ.ಡಿ ದಾಳಿ

ಮದುವೆ ಆದಾಗಿನಿಂದಲೂ ಹಣಕ್ಕಾಗಿ ಸಂತೋಷ್‌ ಪೀಡಿಸುತ್ತಾ ಎನ್ನಲಾಗಿದೆ. ಹಣ, ಒಡವೆ ಕೊಟ್ಟು ಅದ್ಧೂರಿಯಾಗಿ ಮದುವೆ ಮಾಡಿದ್ದರು. ಆದರೂ ಸಂತೋಷ್‌ ರೇಖಾ ಬಳಿ ಸೈಟ್ ಖರೀದಿ ಮಾಡಬೇಕು ತವರು ಮನೆಯಿಂದ ಹಣ ತರುವಂತೆ ಒತ್ತಾಯ ಮಾಡುತ್ತಿದ್ದ. ಇದಕ್ಕೆ ರೇಖಾ ಒಪ್ಪದಿದ್ದಾಗ ಹಲವು ಬಾರಿ ಗಲಾಟೆ ಮಾಡಿ ಸಂತೋಷ್‌ ಹೊಡೆದು ಬಡಿದು ಮಾಡಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ಮತ್ತೆ ಗಲಾಟೆ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ.

ಮೂಲತಃ ತಮಿಳುನಾಡಿನ ಮೂಲದವರ ಇವರಿಬ್ಬರು ಬೆಂಗಳೂರಿನಲ್ಲೇ ನೆಲೆಸಿದ್ದರು. ಬೆಂಗಳೂರಿನ ಯಲಹಂಕ ನ್ಯೂ ಟೌನ್‌ನ ಅನಂತಪುರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಸಂತೋಷ್ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದ. ಆರೋಪಿ ಸಂತೋಷ್‌ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ರೇಖಾ ಮೃತದೇಹವನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version