Site icon Vistara News

Murder Case: ಪತ್ನಿಯ ಶೀಲ ಶಂಕಿಸಿ ಚಾಕು ಇರಿದವ ಮಗನನ್ನೂ ಅಟ್ಟಾಡಿಸಿದ; ಸಾಫ್ಟ್‌ವೇರ್‌ ಗಂಡನ ವಿಚಿತ್ರ ಕಿರುಕುಳ

#image_title

ಬೆಂಗಳೂರು: ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಸೈಕೋ ಪತಿಯೊಬ್ಬ ಪತ್ನಿಯ ಶೀಲ ಶಂಕಿಸಿ ಚಾಕುವಿನಿಂದ ಇರಿದಿರುವ (murder case) ಘಟನೆ ಆರ್‌ಆರ್‌ ನಗರದಲ್ಲಿ ನಡೆದಿದೆ. ತುಮಕೂರು ಮೂಲದ ಶ್ರೀಹರ್ಷ ಎಂಬಾತ ಪತ್ನಿ ಸುಧಾರಾಣಿಗೆ ಹಾಗೂ ಮಗನಿಗೂ ಇರಿದು, ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಇವರಿಬ್ಬರೂ ಸಾಫ್ಟ್‌ವೇರ್ ಎಂಜಿನಿಯರ್ಸ್ ಆಗಿದ್ದು, ಒಂದೇ ಪ್ರೊಫೆಷನ್ ಆಗಿದ್ದರಿಂದ ಪೋಷಕರು ಮದುವೆ ಮಾಡಿಸಿದ್ದರು. ಆದರೆ, ಮದುವೆ ಆದ ಮೇಲೆ ಆ ಸಾಫ್ಟ್‌ವೇರ್ ಗಂಡನ ಸೈಕೋ ವರ್ತನೆಗೆ ಹೆಂಡತಿ ಹೈರಾಣಾಗಿದ್ದರು. ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಸುಧಾರಾಣಿಯನ್ನು ಕಳೆದ 13 ವರ್ಷಗಳ ಹಿಂದೆ ಶ್ರೀಹರ್ಷ ಮದುವೆ ಆಗಿದ್ದ.

ಇತ್ತೀಚೆಗೆ ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಸಿಕ್ಕ ಹಿನ್ನೆಲೆಯಲ್ಲಿ ಆರ್‌ಆರ್ ನಗರಕ್ಕೆ ಶಿಫ್ಟ್‌ ಆಗಿದ್ದರು. ಈ ನಡುವೆ ಪತ್ನಿ ಸುಧಾರಾಣಿಗೆ ಅನೈತಿಕ ಸಂಬಂಧ ಇದೆ ಎಂಬ ಅನುಮಾನ ಶುರುವಾಗಿತ್ತು. ಹೀಗಾಗಿ ಪತ್ನಿ ಕೆಲಸ ಮಾಡುವ ಜಾಗದಲ್ಲಿ ಹೆಂಡತಿ ಬಗ್ಗೆ ವಿಚಾರಿಸುವುದು, ಅವರ ಸ್ನೇಹಿತರಿಗೆಲ್ಲ ಕಾಲ್ ಮಾಡಿ ಕೇಳುವುದೆಲ್ಲ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಜತೆಗೆ ಸಣ್ಣಪುಟ್ಟ ವಿಚಾರಕ್ಕೆ ಹಲ್ಲೆ ಮಾಡುವುದು ಚಾಕು ಹಿಡಿದು ಚುಚ್ಚಿಬಿಡುವುದಾಗಿ ಬೆದರಿಸುವುದನ್ನೂ ಮಾಡುತ್ತಿದ್ದನಂತೆ ಈ ಸೈಕೋ ಪತಿ.

ಸದಾ ಕೈಯಲ್ಲಿ ಇರ್ತಿತ್ತು ಚಾಕು

ಪತ್ನಿಯ ಶೀಲದ ಮೇಲೆ ಶಂಕೆ ಶುರುವಾದ ಮೇಲೆ ಶ್ರೀಹರ್ಷ ಕೆಲಸ ಕೂಡ ಬಿಟ್ಟಿದ್ದ. ಆಸ್ತಿ ಮಾರಾಟ ಮಾಡಿದ ದುಡ್ಡಲ್ಲಿ ದಿನಪೂರ್ತಿ ಕುಡಿದು ಮನೆಗೆ ಬರುತ್ತಿದ್ದ ಶ್ರೀಹರ್ಷ, ಸದಾ ಕೈಯಲ್ಲಿ ಚಾಕು ಹಿಡಿದು ಓಡಾಡುತ್ತಿದ್ದ. ಜತೆಗೆ ನಿಮ್ಮೆಲ್ಲರ ತಲೆ ಕಟ್ ಮಾಡುವುದಾಗಿ ಹೇಳುತ್ತಿದ್ದನಂತೆ. ಮಾತ್ರವಲ್ಲದೆ ತಲೆ ಕಟ್‌ ಮಾಡಿ ಕೈಯಲ್ಲಿ ಹಿಡಿದು ಸೆಲ್ಫಿ ಪೋಟೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವುದಾಗಿಯೂ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಇದನ್ನೂ ಓದಿ: Troll Pages: ಬೈಕ್‌ನಲ್ಲಿ ಬಂದು ದಾರಿಹೋಕರೊಂದಿಗೆ ಅಸಭ್ಯ ವರ್ತನೆ; ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೊ ಅಪ್ಲೋಡ್‌ ಮಾಡಿ ವಿಕೃತಿ

ಹೀಗೆ ಕಳೆದ ಶನಿವಾರ ರಾತ್ರಿಯೂ ಶ್ರೀಹರ್ಷ ಕಿರಿಕ್‌ ತೆಗೆದಿದ್ದು, ಪತ್ನಿ ಸುಧಾರಾಣಿಯನ್ನು ಗೋಡೆಗೆ ತಳ್ಳಿ, ಕೆಳಗೆ ಬಿದ್ದವಳ ಕುತ್ತಿಗೆಗೆ ಚಾಕು ಇರಿದಿದ್ದಾನೆ. ಬಳಿಕ ತನ್ನ 8 ವರ್ಷ ಮಗನನ್ನು ಅಟ್ಟಾಡಿಸಿ ಆತನಿಗೂ ಚಾಕು ಇರಿದು ತಾನು ಇರಿದುಕೊಂಡಿದ್ದಾನೆ. ಸದ್ಯ ಸುಧಾರಾಣಿಯ ಹಾಗೂ ಮಗನ ಸ್ಥಿತಿ ಗಂಭೀರವಾಗಿದೆ. ಇತ್ತ ಸೈಕೋ ಗಂಡನಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version