Site icon Vistara News

Murder Case | ಅಳಿಯನ ಜತೆಗೆ ಅಕ್ರಮ ಸಂಬಂಧ; ಗಂಡನನ್ನೇ ಹತ್ಯೆ ಮಾಡಿಸಿದಳು!

Teachers Recruitment Scam

ವಿಜಯನಗರ: ಅವರೆಲ್ಲರೂ ಒಂದೇ ಊರಿನ ಸ್ನೇಹಿತರು. ಒಬ್ಬರಿಗೊಬ್ಬರು ಆಸರೆಯಾಗಿದ್ದವರ ಮಧ್ಯೆ ಯಾವುದೇ ಮುಚ್ಚು ಮರೆ ಎಂಬುದು ಇರಲಿಲ್ಲ. ಎಷ್ಟರ ಮಟ್ಟಿಗೆ ಎಂದರೆ ತಮ್ಮ ವೈಯಕ್ತಿಕ ಸಂಗತಿಗಳನ್ನು ಹಂಚಿಕೊಳ್ಳುವಷ್ಟು. ಈ ಮಧ್ಯೆ ಇವರಲ್ಲೊಬ್ಬನಿಗೆ ಆತನ ಅತ್ತೆಯ ಜತೆಗೆ ಅಕ್ರಮ ಸಂಬಂಧ ಇತ್ತು. ಇದಕ್ಕೆ ಅಡ್ಡಿಯಾಗಿದ್ದ ಮಾವನ ಕೊಲೆ ಮಾಡಲು ಸ್ನೇಹಿತರಿಗೆ ಸುಪಾರಿ ನೀಡಿದ್ದ. ಸುಪಾರಿ ಪಡೆದು ಕೊಲೆ (Murder Case) ಮಾಡಿದವರೆಲ್ಲರೂ ಈಗ ಪೊಲೀಸರ ಅತಿಥಿ ಆಗಿದ್ದಾರೆ.

ಅಳಿಯನ ಜತೆ ಇರಲು ಗಂಡನನ್ನೇ ಮುಗಿಸಲು ಸುಪಾರಿ ನೀಡಿದ ಘಟನೆಯು, ಕಳೆದ ತಿಂಗಳು ವಿಜಯನಗರ ಜಿಲ್ಲೆಯಲ್ಲಿ ನಡೆದಿತ್ತು. ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಸುಪಾರಿ ಪಡೆದು ಬಡ್ಡಿ ವ್ಯಾಪಾರಿಯೊಬ್ಬರ ಕೊಲೆ ಮಾಡಿದ ಮೂವರನ್ನು ಬಂಧಿಸಿದ್ದಾರೆ.

ಸೊಪ್ಪಿನ ಚೌಡಪ್ಪ ಎಂಬಾತ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣದಲ್ಲಿ ಚಿಕ್ಕದಾಗಿ ಬಡ್ಡಿ ವ್ಯಾಪಾರ ಮಾಡಿಕೊಂಡಿದ್ದರು. ಮದುವೆಯಾಗಿ ಮಕ್ಕಳೊಂದಿಗೆ ಸಂಸಾರ ನಡೆಸುತ್ತಿದ್ದರು. ಆದರೆ, ಚೌಡಪ್ಪನ ಪತ್ನಿ ಸುಧಾಗೆ ಅಳಿಯ ದುರಗಪ್ಪ ಎಂಬಾತನೊಂದಿಗೆ ಅಕ್ರಮ ಸಂಬಂಧ ಇತ್ತು.

ತಮ್ಮಿಬ್ಬರ ಅಕ್ರಮ ಸಂಬಂಧದ ವಿಚಾರ ಗಂಡನಿಗೆ ತಿಳಿಯುವ ಮುನ್ನವೇ ಆತನನ್ನು ಮುಗಿಸುವ ತೀರ್ಮಾನಕ್ಕೆ ಬಂದಿದ್ದರು. ಅಳಿಯ ದುರಗಪ್ಪನಿಗೆ ತನ್ನ ಗಂಡನನ್ನು ಕೊಲೆ ಮಾಡಿಸಿಬಿಡು, ಬಳಿಕ ನಾವಿಬ್ಬರು ಸುಖವಾಗಿ ಇರಬಹುದೆಂದು ಯೋಜನೆ ಮಾಡಿದ್ದಳು. ಅತ್ತೆ ಸುಧಾಳ ಮಾತನಿಂತೆ ಮಾವನನ್ನು ಮುಗಿಸಲು ದುರಗಪ್ಪ ತನ್ನ ಸ್ನೇಹಿತನಿಗೆ ಸುಪಾರಿ ನೀಡಿ, ಏನು ಆಗಿಲ್ಲ ಎಂಬಂತೆ ಸುಮ್ಮನೆ ಆಗಿದ್ದ. ಹಾಗೆಯೇ ಸ್ಕೆಚ್‌ನಂತೆ ಕೊಲೆಯೂ ಆಗಿತ್ತು.

ಇದನ್ನೂ ಓದಿ | ಮಕ್ಕಳಿಬ್ಬರಿಗೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ, ಒಂದು ಮಗು ಸಾವು

ಚೌಡಪ್ಪನ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದ ಪೊಲೀಸರು ಅತ್ತೆ-ಅಳಿಯನ ಅಕ್ರಮ ಸಂಬಂಧವನ್ನು ಬಯಲಿಗೆ ಎಳೆದು, ಕೊಲೆಯಾದ ಮರುದಿನವೇ ಪತ್ನಿ ಸುಧಾ ಹಾಗೂ ಸುಪಾರಿ ನೀಡಿದ್ದ ಅಳಿಯ ದುರಗಪ್ಪನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದರು. ಸುಪಾರಿ ಪಡೆದು ಹತ್ಯೆ ಮಾಡಿದ್ದ ಮೂವರು ಹಂತಕರು ಪರಾರಿಯಾಗಿದ್ದರು.

ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಸುನೀಲ್, ಶಿವರಾಜ, ವಸಂತ ಎಂಬಾತನನ್ನು ಹಗರಿಬೊಮ್ಮನಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಚೌಡಪ್ಪನಿಂದ 30 ಸಾವಿರ ರೂಪಾಯಿ ಬಡ್ಡಿ ಸಾಲ ಪಡೆದಿದ್ದ ಸುನೀಲ್, ದುರಗಪ್ಪನ ಮಾತಿನಂತೆ ಸುಪಾರಿ ಹತ್ಯೆ ಮಾಡಲು ಒಪ್ಪಿಕೊಂಡಿದ್ದನಂತೆ. ಸುನೀಲ ಜತೆಗೂಡಿ ಚೌಡಪ್ಪನನ್ನು ಕಟ್ಟಿಗೆ ತುಂಡಿನಿಂದ ಬಲವಾಗಿ ತಲೆಗೆ ಹೊಡೆದಿದ್ದಾನೆ. ಈ ಕೊಲೆ ಮಾಡಲು ಸ್ನೇಹಿತರಾದ ಶಿವರಾಜ್, ವಸಂತ ಸಹಾಯ ಮಾಡಿದ್ದರು. ಚೌಡಪ್ಪನನ್ನು ಕೊಲೆ ಮಾಡಿ ರಸ್ತೆಯ ಪಕ್ಕದ ಕಾಲುವೆಯಲ್ಲಿ ಬಿಸಾಕಿ ಪರಾರಿಯಾಗಿದ್ದರು. ಪೊಲೀಸರು ಅವರೆಲ್ಲರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ | Dead body in plastic | ಶವ ಸಂಸ್ಕಾರಕ್ಕೆ ಹಣವಿಲ್ಲದೆ ಪತ್ನಿ ಶವವನ್ನು ಪ್ಲಾಸ್ಟಿಕ್‌ನಲ್ಲಿ ಕಟ್ಟಿ ಊರಿಗೆ ಸಾಗಿಸಿದ ಗಂಡ

Exit mobile version