Site icon Vistara News

Murder Case: ಪತ್ನಿಯ ಅನೈತಿಕ ಸಂಬಂಧಕ್ಕೆ ಬಲಿಯಾದ ಪತಿ; ಪ್ರಿಯಕರನ ಜತೆ ಸೇರಿ ಕೊಂದವಳು ಈಗ ಸೆರೆ

murder case of kadugodi police station

Kadugodi Police Station

ಬೆಂಗಳೂರು: ಪ್ರೀತಿಗೆ ಅಡ್ಡಿಯಾಗಿದ್ದ (Illicit relationship) ಪತಿಯನ್ನು ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಹತ್ಯೆ (Murder Mystery) ಮಾಡಿರುವ ಘಟನೆ ಕಾಡುಗೋಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ (Kadugodi Police Station) ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಆನಂದ್ ಕೊಲೆಯಾದ ದುರ್ದೈವಿ. ಮಮತಾ ಹಾಗೂ ಹರೀಶ್‌ ಬಂಧಿತ ಆರೋಪಿಗಳು.

ಮಮತಾ ಹಾಗೂ ಹರೀಶ್‌ ನಡುವೆ ಬಹಳ ದಿನಗಳಿಂದ ಪ್ರೀತಿ ಬೆಳೆದಿತ್ತು. ಆದರೆ, ತಮ್ಮ ಅಕ್ರಮ ಸಂಬಂಧಕ್ಕೆ ಪತಿಯು ಅಡ್ಡಿಯಾಗುತ್ತಾನೆ ಎಂದು ಇಬ್ಬರೂ ಸೇರಿ ಕೊಲೆ ಮಾಡುವ ಸಂಚು ರೂಪಿಸಿದ್ದರು. ಮೊದಮೊದಲು ಇದು ಆತ್ಮಹತ್ಯೆ ಎಂದುಕೊಂಡ ಪೊಲೀಸರಿಗೆ ತನಿಖೆ ನಡೆಸಿದಾಗ ಇದೊಂದು ಪೂರ್ವ ನಿಯೋಜಿತ ಹತ್ಯೆ ಎಂಬುದು ತಿಳಿದು ಬಂದಿತ್ತು.

ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿ ಆನಂದ್‌ನನ್ನು ಕೊಂದ ಪತ್ನಿ ಮಮತಾ

ಉಸಿರುಗಟ್ಟಿಸಿ ಕೊಂದೇಬಿಟ್ಟಳು

ಕಳೆದ ಎರಡು ತಿಂಗಳ ಹಿಂದೆ (ಮಾರ್ಚ್) ಕಾಡುಗೋಡಿಯ ಶಂಕರಪುರದಲ್ಲಿ ವ್ಯಕ್ತಿಯೊಬ್ಬನ ಶವ ಮನೆಯ ಬಾತ್ ರೂಂನಲ್ಲಿ ಪತ್ತೆಯಾಗಿತ್ತು. ಆನಂದ್ ಎಂಬಾತ ಕೈ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪತ್ನಿ ಮಮತಾ ಎಲ್ಲರನ್ನು ನಂಬಿಸಿದ್ದಳು. ಆದರೆ ಮೃತ ಆನಂದ್ ತಂದೆ ನೀಡಿದ ದೂರಿನ‌ ಮೇರೆಗೆ, ಪೊಲೀಸರು ಅನುಮಾನಸ್ಪಾದ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ನಡೆಸಿದಾಗ ಇದು ಆತ್ಮಹತ್ಯೆ ಅಲ್ಲ ಬದಲಿಗೆ ಕೊಲೆ ಎಂದು ದೃಢಪಟ್ಟಿತ್ತು.

ಆರೋಪಿ ಮಮತಾ ಹಾಗೂ ಮೃತ ಆನಂದ್‌

ಕಾಲೇಜಿನಲ್ಲಿ ಇರುವಾಗಲೇ ಚಿಗುರಿದ ಪ್ರೇಮ

ಮೂಲತಃ ದೊಡ್ಡಬಳ್ಳಾಪುರದ ಮಮತಾ ಹಾಗೂ ಹರೀಶ್‌ ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. ಆ ಸಮಯದಲ್ಲೇ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಆದರೆ ಮಮತಾ ಅವರ ಕುಟುಂಬಸ್ಥರು ಇಷ್ಟವಿಲ್ಲದೇ ಇದ್ದರೂ ಆನಂದ್ ಜತೆಗೆ ಮದುವೆ ಮಾಡಿಸಿದ್ದರು.

ಮದುವೆ ಬಳಿಕವೂ ಮಮತಾ ಹಾಗೂ ಹರೀಶ್‌ ಕದ್ದು ಮುಚ್ಚಿ ಅಕ್ರಮ ಸಂಬಂಧವನ್ನು ಮುಂದುವರಿಸಿದ್ದರು. ಈ ಮಧ್ಯೆ ಆನಂದ್‌ನನ್ನು ಕೊಂದುಬಿಟ್ಟರೆ, ನಮಗೆ ಯಾರ ಅಡ್ಡಿಯೂ ಇಲ್ಲ ಎಂದುಕೊಂಡರು. ಊಟದಲ್ಲಿ ನಿದ್ದೆ ಮಾತ್ರೆ ಹಾಕಿ ಆನಂದ್‌ನ ಪ್ರಜ್ಞೆ ತಪ್ಪಿಸಿದರು. ಬಳಿಕ ಉಸಿರುಗಟ್ಟಿಸಿ ಹತ್ಯೆ ಮಾಡಿದ ಬಳಿಕ ಮೃತದೇಹವನ್ನು ರೈಲ್ವೆ ಹಳಿ ಮೇಲೆ ಹಾಕಿಬರುವ ಎಂದು ಯೋಜಿಸಿದ್ದರು.

ಇದನ್ನೂ ಓದಿ: Murder Case: ಪ್ರೇಯಸಿಯ ಪತಿಯನ್ನು ಇರಿದು ಕೊಂದ ಪ್ರೇಮಿ; ಈಗ ಜೈಲಿನಲ್ಲಿ ಬಂಧಿ

ಆದರೆ, ಆನಂದ ಮೃತದೇಹವು ಭಾರವಾಗಿದ್ದರಿಂದ ಬಾತ್ ರೂಂಗೆ ಎಳೆದೊಯ್ದು, ಆತನ ಕೈ ಕೊಯ್ದು ಆತ್ಮಹತ್ಯೆ ಮಾಡಿಕೊಂಡಿರುವಂತೆ ಸನ್ನಿವೇಶ ಸೃಷ್ಟಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಹಂತಕರ ಕೃತ್ಯ ಬೆಳಕಿಗೆ ಬಂದಿತ್ತು. ಇದು ಆತ್ಮಹತ್ಯೆ ಅಲ್ಲ ಬದಲಿಗೆ ಉಸಿರುಗಟ್ಟಿ ಮೃತಪಟ್ಟಿರುವುದಾಗಿ ವರದಿ ಬಂದಿತ್ತು. ಮಮತಾಳನ್ನು ಕರೆಸಿ ವಿಚಾರಣೆ ನಡೆಸಿದಾಗ ಕೃತ್ಯ ಬಯಲಾಗಿದೆ. ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version